ಜನ ಮನದ ನಾಡಿ ಮಿಡಿತ

Advertisement

ಕರ್ಣಾಟಕ ಬ್ಯಾಂಕ್​ನಿಂದ ಗುಡ್​ನ್ಯೂಸ್; ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ದೇಶದ್ಯಾಂತ ಇರುವ ಬ್ರ್ಯಾಂಚ್​ಗಳಲ್ಲಿ​ ಹಲವು ಉನ್ನತ ಹುದ್ದೆಗಳನ್ನು ಕರ್ಣಾಟಕ ಬ್ಯಾಂಕ್ ಭರ್ತಿ ಮಾಡುತ್ತಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಈಗಾಗಲೇ ಅರ್ಜಿ ಆರಂಭವಾಗಿವೆ. ಹೀಗಾಗಿ ಅರ್ಹ ಎನಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾಗಿರುವ ಸಂಪೂರ್ಣ ಮಾಹಿತಿ ಅರಿತುಕೊಂಡು ಆನ್​ಲೈನ್ ಮೂಲಕ ಅಪ್ಲೇ ಮಾಡಬಹುದು.

ಬ್ಯಾಂಕ್ ಆಡಿಟಿಂಗ್, ಬ್ಯಾಂಕ್ ಲೀಗಲ್ ಅಡ್ವೈಸರ್ ಸೇರಿದಂತೆ ಹಲವು ಉನ್ನತ ಅಧಿಕಾರಿ ಹುದ್ದೆಗಳನ್ನು ಕರ್ಣಾಟಕ ಬ್ಯಾಂಕ್ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಿದೆ. ಬ್ಯಾಂಕ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಮುಂಬೈ, ಮೈಸೂರು, ಪುಣೆ, ಶಿವಮೊಗ್ಗ, ಮಂಗಳೂರು, ಕಲಬುರಗಿ, ಧಾರವಾಡ/ಹುಬ್ಬಳ್ಳಿ, ನವದೆಹಲಿ ಇಲ್ಲಿಯ ಕಚೇರಿಗಳಲ್ಲಿ ಆನ್​ಲೈನ್ ಟೆಸ್ಟ್​ಗಳನ್ನ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.

ಆನ್​ಲೈನ್​ ಟೆಸ್ಟ್​​ನಲ್ಲಿ ಪಾಸ್ ಅಭ್ಯರ್ಥಿಗಳನ್ನು ಸಂದರ್ಶನಕ್ಕಾಗಿ ಮಂಗಳೂರು ಅಥವಾ ಬೇರೆ ಕಚೇರಿಗೆ ಆಹ್ವಾನಿಸಲಾಗುತ್ತದೆ. ಆದರೆ ಈ ವೇಳೆ ಯಾವುದೇ ವಸತಿ, ಪಾವತಿ ಬ್ಯಾಂಕ್ ಮಾಡುವುದಿಲ್ಲ. ಎಲ್ಲ ಖರ್ಚು ನಿಮ್ಮದೆ. ಇನ್ನುಳಿದಂತೆ ಈ ಉದ್ಯೋಗಗಳಿಗೆ ಸಂಬಂಧಿಸಿದ ಇತರೆ ಮಾಹಿತಿ ಈ ಕೆಳಗೆ ನೀಡಲಾಗಿದೆ. ಅರ್ಜಿ ಶುಲ್ಕ, ಯಾರು ಇವುಗಳಿಗೆ ಅಪ್ಲೇ ಮಾಡಬಹುದು, ಕೊನೆ ದಿನಾಂಕ, ಯಾವ ಪದವಿ ಪಡೆದಿರಬೇಕು ಇತ್ಯಾದಿ ಮಾಹಿತಿ ಇಲ್ಲಿದೆ.

ವಿದ್ಯಾರ್ಹತೆ (ಇವುಗಳಲ್ಲಿ ಯಾವುದಾದರೂ ಒಂದು)

  • ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ
  • ಕೃಷಿ ವಿಜ್ಞಾನದಲ್ಲಿ ಪದವಿ
  • ಕಾನೂನು ಪದವಿ (5 ವರ್ಷ ಇಂಟಿಗ್ರೇಟೆಡ್ ಕೋರ್ಸ್)
  • ಸಿಎ, ಸಿಎಸ್, ಸಿಎಂಎಸ್, ಐಸಿಡಬ್ಲುಎ

ಉದ್ಯೋಗದ ಹೆಸರು- ಪ್ರೊಬೇಷನರಿ ಅಧಿಕಾರಿಗಳು (Probationary Officers (Scale-I)

ವಯೋಮಿತಿ
28 ವರ್ಷದ ಒಳಗಿನ ಅಭ್ಯರ್ಥಿಗಳು
ಎಸ್​​ಸಿ, ಎಸ್​ಟಿ- 5 ವರ್ಷಗಳ ಸಡಿಲಿಕೆ ಇದೆ

ಅರ್ಜಿ ಶುಲ್ಕ ಎಷ್ಟು?
ಜನರಲ್, ಒಬಿಸಿ- 800 ರೂಪಾಯಿ
ಎಸ್​​ಸಿ, ಎಸ್​ಟಿ- 700 ರೂಪಾಯಿ

ವೇತನ ಶ್ರೇಣಿ
48,480 ದಿಂದ 85,920 ರೂಪಾಯಿಗಳು

ದಿನಾಂಕಗಳನ್ನು ನೆನಪಿಡಿ

  • ನೋಟಿಫಿಕೇಶನ್ ರಿಲೀಸ್ ದಿನ- 30 ನವೆಂಬರ್ 2024
  • ಅರ್ಜಿ ಸಲ್ಲಿಕೆಯ ಕೊನೆ ದಿನ- 10 ಡಿಸೆಂಬರ್ 2024
  • ಪರೀಕ್ಷೆ ನಡೆಸುವ ದಿನ (ಸಾಧ್ಯತೆ ಇದೆ)- 22 ಡಿಸೆಂಬರ್ 2024

ಸಾಮಾನ್ಯ ಪರೀಕ್ಷೆಯಲ್ಲಿ ಕಂಪ್ಯೂಟರ್​ಗೆ ಸಂಬಂಧಿಸಿದ ಪ್ರಶ್ನೆಗಳು, ಇಂಗ್ಲಿಷ್ ಭಾಷೆ, ಬ್ಯಾಂಕಿಂಗ್, ಕರೆಂಟ್ ಅಫೈರ್ಸ್, ತಾರ್ಕಿಕ (Reasoning), ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್​​ನಲ್ಲಿ ಪ್ರಬಂಧ ಸೇರಿ ಒಟ್ಟು 150 ನಿಮಿಷದಲ್ಲಿ 202 ಪ್ರಶ್ನೆಗಳಿಗೆ 225 ಅಂಕಗಳಿಗೆ ಆನ್​ಲೈನ್ ಟೆಸ್ಟ್ ಇರುತ್ತದೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!