ಜನ ಮನದ ನಾಡಿ ಮಿಡಿತ

Advertisement

ನಡು ಬೀದಿಯಲ್ಲಿ ಮಹಿಳಾ ಕಾನ್ಸ್ಟೇಬಲ್ ಕೊಲೆ

ನಡು ಬೀದಿಯಲ್ಲಿ ಮಹಿಳಾ ಕಾನ್ಸ್ಟೇಬಲ್ ಕೊಲೆ

*Woman Constable Found Murdered In Hyderabad, Brother Suspected: Police

ಹೈದರಾಬಾದ್‌: ನಡು ರಸ್ತೆಯಲ್ಲೇ ಮಹಿಳಾ ಕಾನ್ಸ್ಟೇಬಲ್ ನನ್ನು ಕೊಲೆ ಮಾಡಿರುವ ಘಟನೆ ಸೋಮವಾರ ಬೆಳಗ್ಗೆ ಹೈದರಾಬಾದ್ ನ ಇಬ್ರಾಹಿಂ ಪಟ್ಟಣದಲ್ಲಿ ನಡೆದಿದೆ. ನಾಗಮಣಿ ಎಂಬ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನ್ನು, ಅಂತರ್ಜಾತಿ ಯುವಕನೊಂದಿಗೆ ಮದುವೆಯಾದ ಕಾರಣಕ್ಕೆ ಸಂಬಂಧಿಸಿದಕ್ಕೆ ಆಕೆಯ ಸಹೋದರ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ನಾಗಮಣಿ ಸೋಮವಾರ ಬೆಳಿಗ್ಗೆ ಹಯಾತ್ನಗರ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹೋಗುತ್ತಿದ್ದಾಗ, ಸಹೋದರ ಪ್ರಭೇಶ್ ಇವಳ ದ್ವಿಚಕ್ರ ವಾಹನವನ್ನು ತನ್ನ ಕಾರಿನಿಂದ ತಡೆಹಿಡಿದು, ನಂತರ ಇವಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಸಾರ್ವಜನಿಕರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿ ಇವಳ ಮುಖ ಮತ್ತು ತಲೆಗೆ ಹಲ್ಲೆ ಮಾಡಿದನೆಂದು ವರದಿ ಮಾಡಲಾಗಿದೆ. ಇಬ್ರಾಹಿಂಪಟ್ಟಣದ ರೈಪೋಲ್ ಗ್ರಾಮದಿಂದ ಬಂದ ನಾಗಮಣಿ 2020 ಬ್ಯಾಚ್‌ನ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಳು.
ಪೊಲೀಸರು ಮೃತದೇಹವನ್ನು ಓಸ್ಮಾನಿಯಾ ಜನರಲ್ ಹಾಸ್ಪಿಟಲ್‌ಗೆ ಹಸ್ತಾಂತರಿಸಿ, ಮರಣೋತ್ತರ ಪರೀಕ್ಷೆ ವರದಿಯ ನಿರೀಕ್ಷೆಯಲ್ಲಿದ್ದಾರೆ. ಪ್ರಾಥಮಿಕ ತನಿಖೆಯಿಂದ ನಾಗಮಣಿಯನ್ನು ಅವಳ ಸಹೋದರನೇ ಕೊಲೆ ಮಾಡಿದನೆಂದು ತೋರುತ್ತಿದೆ, ಆರೋಪಿ ಇವಳ ಅಂತರ್ಜಾತಿ ಮದುವೆಗೆ ಅಸಮಾಧಾನಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗಮಣಿ ಸಹೋದರನಿಗಾಗಿ ಪೊಲೀಸರು ಶೋಧ ಕಾರ್ಯವನ್ನು ಆರಂಭಿಸಿದ್ದಾರೆ. ನಾಗಮಣಿ ಹಿಂದೆ ಮದುವೆಯಾಗಿದ್ದರೂ, ಸುಮಾರು 10 ತಿಂಗಳು ಹಿಂದೆ ವಿಚ್ಛೇದನ ಪಡೆದಿದ್ದಳು. ಕಳೆದ ಒಂದು ತಿಂಗಳು ಹಿಂದೆ ಇನ್ನೋರ್ವ ವ್ಯಕ್ತಿಯನ್ನು ಪ್ರೀತಿಸಿ ಅಂತರ್ಜಾತಿ ಮದುವೆ ಮಾಡಿಕೊಂಡಿದ್ದಳು.

ಪ್ರಕರಣದ ಬಗ್ಗೆ ಮಾತನಾಡಿದ ಇಬ್ರಾಹಿಂಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಬಿ. ಸತ್ಯನಾರಾಯಣ, ‘ನಾಗಮಣಿಯು ನವೆಂಬರ್ 1 ರಂದು ಯಾದಗಿರಿಯುಟ್ಟದಲ್ಲಿ ಶ್ರೀಕಾಂತ್ ಅವರೊಂದಿಗೆ ಮದುವೆಯಾಗಿದ್ದಳು. ಈಕೆಯ ಸಹೋದರರ ನಡುವೆ ಭೂಮಿಗೆ ಸಂಬಂಧಿಸಿದ ಆಸ್ತಿಯ ವಿವಾದವನ್ನು ಸೇರಿ ಎಲ್ಲಾ ದೃಷ್ಟಿಕೋನಗಳಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ. ಪೊಲೀಸ್ ಕಾರ್ಯನಿರ್ವಹಣೆ, ನಾಗಮಣಿಯ ಪತಿ ಶ್ರೀಕಾಂತ್ ಅವರ ಹೇಳಿಕೆಗಳನ್ನು ದಾಖಲಿಸಲಿ, ಇದು ಪ್ರಕರಣವನ್ನು ಪರಿಹರಿಸಲು ಸಹಾಯ ಮಾಡುವ ಸಾಧ್ಯತೆ ಇದೆ ಎಂದರು. ಹತ್ಯೆ ಪ್ರಕರಣ ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!