ಕರಾವಳಿ

ಸೋಮವಾರದಿಂದ ಗಡಿನಾಡು ಜಿಲ್ಲೆ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭ

ಮಂಗಳೂರು: ಸೋಮವಾರದಿಂದ ಗಡಿನಾಡು ಜಿಲ್ಲೆ ಬೆಳಗಾವಿಯಲ್ಲಿ ಆರಂಭಗೊಳ್ಳುವ ವಿಧಾನ ಮಂಡಲ ಅಧಿವೇಶನ ಉತ್ತರ ಕರ್ನಾಟಕ ಕೇಂದ್ರಿತವಾಗಿ ಆಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ವಿಶ್ವಾಸವನ್ನು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ವ್ಯಕ್ತಪಡಿಸಿದ್ದಾರೆ. ಈ ಬಾರಿ ಅನುಭವ ಮಂಟಪ ಚಿತ್ರವನ್ನು ಮೊಗಸಾಲೆಯ ಎದುರು ಅನಾವರಣ ಮಾಡಲಾಗುವುದು ಎಂದೂ ಈ ಸಂದರ್ಭದಲ್ಲಿ ತಿಳಿಸಿದರು. ಮಂಗಳೂರಿನಲ್ಲಿಂದು ನಮ್ಮ ಪ್ರತಿನಿಧಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸದನ ಉತ್ತರಾಭಿಮುಖಿಯಾಗಿದ್ದರೂ ಶಾಸಕರು ಇಡೀ ರಾಜ್ಯದ ಸಂಗತಿಗಳ ಬಗ್ಗೆ ಫಲಪ್ರದ ಚರ್ಚೆ ನಡೆಸುವರೆಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.

 

ಇತ್ತೀಚೆಗೆ ಸದನದ ಕಲಾಪ ನಡೆಯುವ ಕಾಲಾವಧಿ ಕಡಿಮೆಯಾಗಿರುವುದನ್ನು ಒಪ್ಪಿಕೊಂಡ ಅವರು ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ನೂರು ದಿನ ಸದನ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ವರ್ಷಕ್ಕೆ ನಲವತ್ತಾರು ದಿನಗಳ ಕಾಲ ಅಧಿವೇಶನ ನಡೆಯುತ್ತಿದೆ.ಇಡೀ ದೇಶಕ್ಕೆ ಹೋಲಿಸಿದರೆ ನಾವು ಮುಂಚೂಣಿಯಲ್ಲಿದ್ದೇವೆ. ಕೆಲವು ರಾಜ್ಯಗಳಲ್ಲಿ ಅಧಿವೇಶನ ಅವಧಿ ಇದಕ್ಕಿಂತ ಕಡಿಮೆ ಇದೆ. ಹಂತ ಹಂತವಾಗಿ ರಾಜ್ಯದಲ್ಲಿ ಅರವತ್ತು ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂಬ ಆಶಯವಿದೆ ಎಂದರು. ಅದು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದೂ ವಿಧಾನಸಭಾಧ್ಯಕ್ಷರು ಹೇಳಿದರು.
ಸದನ ನಡೆಸುವ ಖರ್ಚು ದುಬಾರಿಯಾಗಿದೆ ಮತ್ತು ಗುಣಮಟ್ಟದ ಚರ್ಚೆಗಳು ನಡೆಯುತ್ತಿಲ್ಲ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಖಾದರ್ ಕಾಲ ಕಾಲಕ್ಕೆ ಖರ್ಚು ಹೆಚ್ಚುತ್ತಾ ಹೋಗಿದೆ, ಅದು ಅನಿವಾರ್ಯ,ಆದರೆ ಚರ್ಚೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ.ಜನರಿಗಾಗಿ ನಡೆಸುವ ಕಲಾಪ ನಿರರ್ಥಕವಲ್ಲ, ಹಿಂದಿನ ಕಾಲಕ್ಕೆ ಹೋಲಿಸಿದಾಗ ಮತ್ತು ತುಲನಾತ್ಮಕವಾಗಿ ನೋಡಿದಾಗ ಗುಣಮಟ್ಟದ ಚರ್ಚೆ ನಡೆಯುತ್ತಿಲ್ಲ ಎಂಬುದರಲ್ಲಿ ಆಂಶಿಕ ಸತ್ಯವಿದೆ ಎಂದರು. ಖರ್ಚು ವೆಚ್ಚದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೊದಲು ದೂರದರ್ಶನಕ್ಕೆ ಮೂರುವರೆ ಕೋಟಿ ಕೊಡುತ್ತಿದ್ದೇವು. ಈಗ ವಾರ್ತಾ ಇಲಾಖೆಯ ಮೂಲಕ ನಿಭಾಯಿಸುತ್ತಿರುವುದರಿಂದ ಆ ಖರ್ಚು ಕಡಿಮೆಯಾಗಿದೆ ಎಂದರು

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣಕ್ಕೆ ಸಂಬಂಧಿಸಿ ಕೇಳಿ ಬರುತ್ತಿರುವ ಆಗ್ರಹ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ನಮ್ಮಲ್ಲಿ ಜಾಗವಿದೆ, ಅದನ್ನು ಬಳಸಿಕೊಂಡು ಸರಕಾರಿ ಏಜೆನ್ಸಿಗಳ ಜೊತೆಗೂಡಿ ಶಾಸಕರ ಭವನ ನಿರ್ಮಾಣದ ಮಾತುಕತೆ ಪ್ರಗತಿಯಲ್ಲಿದೆ. ಅಧಿವೇಶನ ನಡೆಯುವಾಗ ಅದರ ಕೊಠಡಿಗಳನ್ನು ಶಾಸಕರಿಗೆ ಮೀಸಲಿಟ್ಟು ಉಳಿದ ಅವಧಿಗೆ ಅವುಗಳನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಪ್ರವಾಸಿಗರಿಗೆ ನೀಡುವ ಚಿಂತನೆ ನಡೆದಿದೆ. ಆದರೆ ಎಲ್ಲಾ ಕಾಲಾವಧಿಯಲ್ಲಿಯೂ ಶೇಕಡಾ ಹತ್ತರಷ್ಟು ಕೊಟಡಿಗಳನ್ನು ಶಾಸಕರಿಗೆ ಮೀಸಲಿರಿಸಲಾಗುವುದು ಎಂದರು.

ಸದನದಲ್ಲಿ ಪ್ರತಿಭಟನೆಗಳು, ಧರಣಿಗಳಿಂದ ಸಮಯ ಪೋಲಾಗುತ್ತಿದೆ. ಸದನ ನಾಯಕರ ಜೊತೆ ಸಮಾಲೋಚನೆ ಮಾಡಿ ಇಂತಹದ್ದನ್ನು ತಪ್ಪಿಸಲು ‌ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ‘ಪ್ರಶ್ನೋತ್ತರ ಅವಧಿಯಲ್ಲಿ ಕಿತ್ತಾಟಗಳು ಅಧಿಕವಾಗುತ್ತಿವೆ ಎಂಬುದು ನಿಜ, ಆದರೆ ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ಕೊಡಲೇಬೇಕಾಗುತ್ತದೆ, ಸಾಧ್ಯವಾದಷ್ಟು ಬಿಹೈಂಡ್ ದ ಸ್ಕ್ರೀನ್ ಬಗೆಹರಿಸಲು ಯತ್ನಿಸುತ್ತೇವೆ, ಮತ್ತು ಪ್ರತಿಭಟನೆಗಳು ಪ್ರಜಾಪ್ರಭುತ್ವದ ಸೌಂದರ್ಯ, ಅವುಗಳಿಗೆ ಅವಕಾಶ ನಿರಾಕರಿಸಿದರೆ ಜನರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಉಳಿಯುವುದಾದರೂ ಹೇಗೆ ಎಂದವರು ಮರುಪ್ರಶ್ನೆ ಹಾಕಿದರು.
ವಿಧೇಯಕಗಳು, ತಿದ್ದುಪಡಿ ಮಸೂದೆಗಳು ಅಜೆಂಡಾದಲ್ಲಿ ಕೊನೆಯಲ್ಲಿರುವುದರಿಂದ ಅವುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯದೆ ಮುಂದೂಡಿಕೆಯಾಗುತ್ತಿವೆ, ಇವುಗಳಿಗೆ ಪ್ರತ್ಯೇಕ ಅಜೆಂಡ ಅಥವಾ ಕೊನೆಯಲ್ಲಿ ಇಡುವುದಕ್ಕೆ ಬದಲು ಮೊದಲೇ ಸಮಯ ನಿಗದಿ ಮಾಡಬಹುದಲ್ಲವೇ ಎಂಬ ಪ್ರಶ್ನೆಗೆ ನಿಲುವಳಿ ಸೂಚನೆಗಳು, ಗದ್ದಲಗಳಿಂದ ಮುಂದೂಡಿಕೆಗಳು ಬಂದಾಗ ಮಸೂದೆಗಳು ಕೊನೆಗೆ ತಳ್ಳಲ್ಪಡುತ್ತವೆ, ಅವುಗಳಿಗೆ ಪ್ರತ್ಯೇಕ ಅಜೆಂಡ ತಯಾರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಭೀಕರ ರಸ್ತೆ ಅಪ*ಘಾತ….!

ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…

9 hours ago

ಮಂಗಳೂರು: ಎಂ.ಆರ್.ಜಿ.ಗ್ರೂಪ್ ಗೆ ಹಾರುವ ಹಕ್ಕಿ ಸೇರ್ಪಡೆ..!

ಎಂಆರ್‌ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಉದ್ಯಮ ಸಮೂಹಕ್ಕೆ ಖಾಸಗಿ ವಿಮಾನವನ್ನು…

9 hours ago

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

  ಬಸ್‌ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು…

14 hours ago

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

  ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ…

15 hours ago

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…

4 days ago

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…

4 days ago