ಬದಿಯಡ್ಕ: ಹಲವಾರು ಕ್ಷೇತ್ರ ಉತ್ಸವಗಳಿಗೆ ಸಿಡಿಮದ್ದು ತಯಾರಿಸಿ ನೀಡುತ್ತಾ “ಬೆಡಿ ಖಾದ್ರಿಚ್ಚ” ಎಂದೇ ಜನಜನಿತರಾದ ಕೆ.ಎಂ.ಅಬ್ದುಲ್ ಖಾದರ್(70) ಇಂದು ಬೆಳಿಗ್ಗೆ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ಇವರನ್ನು ಮಂಗಳೂರು ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು.
ಸೋಹ ಮುಂತಾಸ್ ಮಂಜಿಲ್ ನಲ್ಲಿ ವಾಸಿಸುತ್ತಿದ್ದ ಇವರು ಬದಿಯಡ್ಕದ ಪೆರ್ಲ ರಸ್ತೆಯಲ್ಲಿ ಸಿಡಿಮದ್ದು ಪಟಾಕಿಗಳ ಅಂಗಡಿಗಳನ್ನು ತೆರೆದಿದ್ದರು. ಜಿಲ್ಲೆಯ ಹಲವಾರು ಪ್ರಸಿದ್ಧ ಕ್ಷೇತ್ರಗಳ ಉತ್ಸವ ಸಂದರ್ಭದಲ್ಲಿ ಪರಂಪರಾಗತವಾಗಿ ಸಿಡಿಮದ್ದು ಸಿಡಿಸುವ ವೃತ್ತಿಯನ್ನು ನಿರ್ವಹಿಸುತ್ತಿದ್ದ ಇವರು ಸರ್ವಧರ್ಮ ಸಮನ್ವತೆಗೆ ಪ್ರಾಧಾನ್ಯತೆ ನೀಡಿ ಎಲ್ಲಾ ಧರ್ಮಿಯರಲ್ಲೂ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದರು.
2022ರಲ್ಲಿ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ನಡೆದ ಶ್ರೀರುದ್ರ ಹೈಮಾವತೀ ಮಹಾ ಯಾಗದ ಸಂದರ್ಭದಲ್ಲಿ ಇವರನ್ನು ಎಡನೀರು ಮಠದ ಶ್ರೀಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸನ್ಮಾನಿಸಿದ್ದರು.
ಮೃತರು ಪತ್ನಿ ಸುಬೈದ, ಮಕ್ಕಳಾದ ಫೌಸಿಯ,ಇಖ್ಬಾಲ್ ಕಾಸಿಂ,ಬಲ್ಕೀಸ್,ಸೋಹ ಮುಂತಾಸ್, ಮೊಮ್ಮಕ್ಕಳಾದ ಇಬ್ರಾಹಿಂ,ಫೈರುಸ,ಮುಸ್ತಫ,ಅಮೀನ್.ಸಹೋದರ ಅಬ್ದುಲ್ ,ಆಯಿಷಾ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…