ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಉದ್ಯಮಿ, ಸಮಾಜಸೇವಕ ಬಾಸ್ಕರ ಶೆಟ್ಟಿ ಕುಡ್ತಿಮಾರುಗುತ್ತು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ದೈವ ದೇವರ ಆಶೀರ್ವಾದವಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾದ್ಯ, ಕಟೀಲು ದೇವಳದ ಶಿಕ್ಷಣ ಸಂಸ್ಥೆ ನನಗೆ ಉತ್ತಮ ಶಿಕ್ಷಣ ನೀಡಿದೆ, ಬಾಲ್ಯದಲ್ಲಿ ಇಲ್ಲಿನ ವಾತಾವರಣದಲ್ಲೇ ಬೆಳೆದವರು. ಆ ಕಾರಣದಿಂದ ಜೀವನದಲ್ಲಿ ಗುರಿ ತಲುಪಲು ಸಾದ್ಯವಾಯಿತು ಎಂದರು. ಈ ಸಂದರ್ಭ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ್ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಕಾಲೇಜು ಪ್ರಾಂಶುಪಾಲೆ ಕುಸುಮಾವತಿ, ಉಪ ಪ್ರಾಂಶುಪಾಲ ರಾಜಶೇಖರ್ ಮತ್ತಿತರರು ಉಸ್ಥಿತರಿದ್ದರು.



