ಡಿ.29ರಂದು ಬೆಳಗ್ಗೆ ಗಂಟೆ 10ರಿಂದ ಶ್ರೀ ಅನಂತರಾಮ ಐತಾಳ್ ಓಣಿಬೈಲು ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆದು ಬಳಿಕ ಧಾರ್ಮಿಕ ಸಭೆ ನಡೆದಿದೆ.

ಮಧ್ಯಾಹ್ನ ಗಂಟೆ 10-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದ್ದು, ತದನಂತರ ಮಧ್ಯಾಹ್ನ ಗಂಟೆ 2 ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ- ಸಾಹಿತ್ಯ- ಸಂಭ್ರಮ ಸಂಭ್ರಮಿಸಲಿದೆ. ಸಂಜೆ ಗಂಟೆ 4-30ರಿಂದ ಭಜನಾ ಸಂಕೀರ್ತನೆ ನಡೆದು ಸಂಜೆ ಗಂಟೆ 6 ರಿಂದ ಶ್ರೀ ಕಟೀಲು ಮೇಳದವರಿಂದ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿದೆ. ಇನ್ನು ಈ ಸಂದರ್ಭದಲ್ಲಿ ಮೋಹನ್ ರಾಜ್ ಚೌಟ ಪುಂಜೋಳಿಮಾರ್ಗ ಗುತ್ತು ಅಮ್ಟೂರು, ಡಾ. ಹರಿಕೃಷ್ಣ ಕಾಮತ್ ಕರಿಂಗಾಣಗುತ್ತು, ನೇತ್ರ ತಜ್ಞರು, ಶ್ರೀ ಕೋಟ ಶ್ರೀನಿವಾಸ ಪೂಜಾರಿ ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಬಿ. ನಾಗರಾಜ ಶೆಟ್ಟಿ ಬೈಲು ಮೇಗಿನಮನೆ ಮಾಜಿ ಸಚಿವರು, ಕರ್ನಾಟಕ ಸರ್ಕಾರ, ಎ. ರುಕ್ಕಯ ಪೂಜಾರಿ, ಮಾಜಿ ಶಾಸಕರು, ಕೆ. ಪದ್ಮನಾಭ ಕೊಟ್ಟಾರಿ, ಮಾಜಿ ಶಾಸಕರು,
ಜಿತೇಂದ್ರ ಎಸ್. ಕೊಟ್ಟಾರಿ ಆಡಳಿತ ಪಾಲುದಾರರು, ಲೋಟಸ್ ಪ್ರಾಪರ್ಟಿಸ್, ಮಂಗಳೂರು, ಮನೋಜ್ ಕುಮಾರ್ ಕಟ್ಟೆಮಾರು ಶ್ರೀ ಮಂತ್ರದೇವತಾ ಕ್ಷೇತ್ರ ಸಾನ್ನಿಧ್ಯ, ಕಟ್ಟೆಮಾರು, ತಾರಾನಾಥ ಕೊಟ್ಟಾರಿ ತೇವು ಫರಂಗಿಪೇಟೆ ಅಧ್ಯಕ್ಷರು, ಸಂಸ್ಕಾರ ಭಾರತಿ, ದಕ್ಷಿಣ ಕನ್ನಡ, ಲಯನ್ ಶಿವರಾಮ ರೈ ಮೇರಾವು ಅಧ್ಯಕ್ಷರು, ಲಯನ್ಸ್ ಕ್ಲಬ್ ಮುಡಿಪು ಕುರ್ನಾಡು, ಪ್ರದೀಪ್ ನಾಯಕ್, ಅಧ್ಯಾಪಕರು, ಸರಕಾರಿ ಪ್ರೌಢಶಾಲೆ, ಅತ್ತಾವರ, ಲಯನ್ ಸುಧಾಕರ ಆಚಾರ್ಯ, ಆಡಳಿತ ನಿರ್ದೇಶಕರು, ಬಜಾರ್ ಗ್ರೂಪ್, ಮಾರ್ನಬೈಲು, ಡಾ. ಶರತ್ ಆಳ್ವ, ಮೂಕಾಂಬಿಕಾ ಗ್ಯಾಸ್ ಏಜೆನ್ಸಿ, ಪುತ್ತೂರು, ಲಯನ್ ಸಂದೀಪ್ ಕುಮಾರ್, ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ನಾಗನವಳಚ್ಚಿಲು ಮಾರ್ನಬೈಲು, ಯತೀಶ್ ಕುಮಾರ್ ಅಮ್ಟೂರು, ಉದ್ಯಮಿ, ಬೆಂಗಳೂರು, ಚಂದ್ರಹಾಸ ಬಟ್ಟಹಿತ್ಲು ಮಾಲಕರು, ಬಿರ್ವ ಸೆಂಟರ್, ಮೆಲ್ಕಾರ್, ಜಗದೀಶ್ ಬಜ್ಜಾರ್, ಪೈಂಟಿAಗ್ ಕಂಟ್ರಾಕ್ಟರ್ ಸೇರಿದಂತೆ ಉಪಸ್ಥಿತರಿದ್ರು.

ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ ಸ್ವಾಗತಿಸಿದರು. ಜ್ಯೋತಿ ಮಹಿಳಾ ಮಂಡಲ(ರಿ.) ಉಪಾಧ್ಯಕ್ಷರಾದ ಸರ್ವಾಣಿ ರೈ ಧನ್ಯವಾದ ಅರ್ಪಿಸಿದರು. ಪ್ರಮುಖರಾದ ದಿನೇಶ್ ಅಮ್ಟೂರು, ಕುಶಾಲಪ್ಪ ಅಮ್ಟೂರು, ಪೃಥ್ವಿರಾಜ್ ಆಳ್ವ, ಮಹಾಬಲ ಕುಲಾಲ್, ಕೌಶಲ್ ಶೆಟ್ಟಿ, ಪ್ರಭಾಕರ ಶೆಟ್ಟಿ ಬೈದಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ರು.



