ಮಾಸ್ಟರ್ ತನ್ಮಯ್ ಸೋಮಯಾಗಿ ಸುಳ್ಯ , ಇವರು ಸುಳ್ಯದ ವಿಕ್ರಮ್, ರಂಜಿನಿ ದಂಪತಿಗಳ ಪುತ್ರ. ಸಂಗೀತ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಈ ಪುಟ್ಟ ಹುಡುಗನ ವಯಸ್ಸು ಕೇವಲ ಹದಿಮೂರು. ಇಷ್ಟು ಸಣ್ಣ ವಯಸ್ಸಿನಲ್ಲೇ 200 ಕ್ಕೂ ಹೆಚ್ಚು ವೇದಿಕೆ ಗಳಲ್ಲಿ ಹಾಡಿದ ಇವರಿಗೆ ಹಲವಾರು ಬಹುಮಾನಗಳು ಪ್ರಶಸ್ತಿಗಳು ದೊರೆತಿವೆ.
ತನ್ಮಯ್ ತಮ್ಮ ಐದನೇ ವಯಸ್ಸಿನಿಂದ ಸಂಗೀತ ಅಭ್ಯಾಸ ಪ್ರಾರಂಭ ಮಾಡಿದ್ದು, ಪ್ರಸ್ತುತ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಬಳಿ ಸೀನಿಯರ್ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಡಾ. ಕಿರಣ್ ಕುಮಾರ್ ಗಾನಸಿರಿ ಇವರ ಬಳಿ ಐದು ವರ್ಷಗಳ ಕಾಲ ಸುಗಮ ಸಂಗೀತ ಅಭ್ಯಾಸವನ್ನು ಮಾಡಿದವರಾಗಿದ್ದಾರೆ. ಅಲ್ಲದೆ ಡಾ ದಿನೇಶ್ ರಾವ್ ರವರ ಬಳಿ 5 ವರ್ಷಗಳಿಂದ ಕೀಬೋರ್ಡ್ ವಾದನ ವನ್ನು ಕಲಿಯುತ್ತಿದ್ದಾರೆ. . ಇವರು ತುಳುನಾಡಿನ ಪ್ರಸಿದ್ಧ ಟಿವಿ ಚಾನೆಲ್ಗಳಾದ ದೈಜಿ ವರ್ಲ್ಡ್, v4 ನ್ಯೂಸ್, ನ್ಯೂಸ್ ಕರ್ನಾಟಕ ಚಾನೆಲ್, ಸುದ್ದಿ ವಾಹಿನಿ, ಕಹಳೆ, ಅಭಿಮತ ಮುಂತಾದ ಚಾನೆಲ್ ಗಳಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದಾರೆ. ಅಲ್ಲದೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಹಾಡಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ.
ಇವರಿಗೆ ವಾಷ್ಠರ್ 5 ಸ್ಟಾರ್ ವತಿಯಿಂದ ಪ್ರತಿಭಾ ಸಿಂಚನ, ಗಾನಸಿರಿ ವತಿಯಿಂದ ಲಾಕ್ ಡೌನ್ ನೈಟಿಂಗೇಲ್, R.P ಕ್ರಿಯೇಷನ್ ವತಿಯಿಂದ ಬಾಲ ಪ್ರತಿಭಾ ರತ್ನ, waw ಸಿನಿಮಾ ವತಿಯಿಂದ ಬೆಸ್ಟ್ ಟ್ಯಾಲೆಂಟ್, ಅವಾರ್ಡ್ ಗಳು ದೊರಕಿದೆ.
ತನ್ಮಯ್ ಸಂಗೀತ ಮಾತ್ರವೇ ಅಲ್ಲದೆ ಚೆಸ್, ಕಬಡ್ಡಿ ಅಂತಹ ಆಟ ಗಳಲ್ಲೂ, ಶಾಲಾ ಚಟುವಟಿಕೆಗಳಲ್ಲಿಯೂ ಮುಂದಿದ್ದಾರೆ. ಅಲ್ಲದೆ ಅನೇಕ ನಾಟಕ ಗಳಲ್ಲಿಯೂ ಆಲ್ಬಂಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ವರ್ಷ ಸ್ಕೌಟ್ಸ್ ಅಂಡ್ ಗೈಡ್ಸ ವತಿಯಿಂದ ನಡೆದ ಗೀತ ಗಾಯನ ಸ್ಪರ್ಧೆಯಲ್ಲಿ ಇವರ ತಂಡ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…