ಮಾಸ್ಟರ್ ತನ್ಮಯ್ ಸೋಮಯಾಗಿ ಸುಳ್ಯ , ಇವರು ಸುಳ್ಯದ ವಿಕ್ರಮ್, ರಂಜಿನಿ ದಂಪತಿಗಳ ಪುತ್ರ. ಸಂಗೀತ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಈ ಪುಟ್ಟ ಹುಡುಗನ ವಯಸ್ಸು ಕೇವಲ ಹದಿಮೂರು. ಇಷ್ಟು ಸಣ್ಣ ವಯಸ್ಸಿನಲ್ಲೇ 200 ಕ್ಕೂ ಹೆಚ್ಚು ವೇದಿಕೆ ಗಳಲ್ಲಿ ಹಾಡಿದ ಇವರಿಗೆ ಹಲವಾರು ಬಹುಮಾನಗಳು ಪ್ರಶಸ್ತಿಗಳು ದೊರೆತಿವೆ.
ತನ್ಮಯ್ ತಮ್ಮ ಐದನೇ ವಯಸ್ಸಿನಿಂದ ಸಂಗೀತ ಅಭ್ಯಾಸ ಪ್ರಾರಂಭ ಮಾಡಿದ್ದು, ಪ್ರಸ್ತುತ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಬಳಿ ಸೀನಿಯರ್ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಡಾ. ಕಿರಣ್ ಕುಮಾರ್ ಗಾನಸಿರಿ ಇವರ ಬಳಿ ಐದು ವರ್ಷಗಳ ಕಾಲ ಸುಗಮ ಸಂಗೀತ ಅಭ್ಯಾಸವನ್ನು ಮಾಡಿದವರಾಗಿದ್ದಾರೆ. ಅಲ್ಲದೆ ಡಾ ದಿನೇಶ್ ರಾವ್ ರವರ ಬಳಿ 5 ವರ್ಷಗಳಿಂದ ಕೀಬೋರ್ಡ್ ವಾದನ ವನ್ನು ಕಲಿಯುತ್ತಿದ್ದಾರೆ. . ಇವರು ತುಳುನಾಡಿನ ಪ್ರಸಿದ್ಧ ಟಿವಿ ಚಾನೆಲ್ಗಳಾದ ದೈಜಿ ವರ್ಲ್ಡ್, v4 ನ್ಯೂಸ್, ನ್ಯೂಸ್ ಕರ್ನಾಟಕ ಚಾನೆಲ್, ಸುದ್ದಿ ವಾಹಿನಿ, ಕಹಳೆ, ಅಭಿಮತ ಮುಂತಾದ ಚಾನೆಲ್ ಗಳಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದಾರೆ. ಅಲ್ಲದೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಹಾಡಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ.
ಇವರಿಗೆ ವಾಷ್ಠರ್ 5 ಸ್ಟಾರ್ ವತಿಯಿಂದ ಪ್ರತಿಭಾ ಸಿಂಚನ, ಗಾನಸಿರಿ ವತಿಯಿಂದ ಲಾಕ್ ಡೌನ್ ನೈಟಿಂಗೇಲ್, R.P ಕ್ರಿಯೇಷನ್ ವತಿಯಿಂದ ಬಾಲ ಪ್ರತಿಭಾ ರತ್ನ, waw ಸಿನಿಮಾ ವತಿಯಿಂದ ಬೆಸ್ಟ್ ಟ್ಯಾಲೆಂಟ್, ಅವಾರ್ಡ್ ಗಳು ದೊರಕಿದೆ.
ತನ್ಮಯ್ ಸಂಗೀತ ಮಾತ್ರವೇ ಅಲ್ಲದೆ ಚೆಸ್, ಕಬಡ್ಡಿ ಅಂತಹ ಆಟ ಗಳಲ್ಲೂ, ಶಾಲಾ ಚಟುವಟಿಕೆಗಳಲ್ಲಿಯೂ ಮುಂದಿದ್ದಾರೆ. ಅಲ್ಲದೆ ಅನೇಕ ನಾಟಕ ಗಳಲ್ಲಿಯೂ ಆಲ್ಬಂಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ವರ್ಷ ಸ್ಕೌಟ್ಸ್ ಅಂಡ್ ಗೈಡ್ಸ ವತಿಯಿಂದ ನಡೆದ ಗೀತ ಗಾಯನ ಸ್ಪರ್ಧೆಯಲ್ಲಿ ಇವರ ತಂಡ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ್ಯರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ನಲ್ಲಿ ಖಾಸಗಿ ಬಸ್ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…