ಮಾಸ್ಟರ್ ತನ್ಮಯ್ ಸೋಮಯಾಗಿ ಸುಳ್ಯ , ಇವರು ಸುಳ್ಯದ ವಿಕ್ರಮ್, ರಂಜಿನಿ ದಂಪತಿಗಳ ಪುತ್ರ. ಸಂಗೀತ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಈ ಪುಟ್ಟ ಹುಡುಗನ ವಯಸ್ಸು ಕೇವಲ ಹದಿಮೂರು. ಇಷ್ಟು ಸಣ್ಣ ವಯಸ್ಸಿನಲ್ಲೇ 200 ಕ್ಕೂ ಹೆಚ್ಚು ವೇದಿಕೆ ಗಳಲ್ಲಿ ಹಾಡಿದ ಇವರಿಗೆ ಹಲವಾರು ಬಹುಮಾನಗಳು ಪ್ರಶಸ್ತಿಗಳು ದೊರೆತಿವೆ.
ತನ್ಮಯ್ ತಮ್ಮ ಐದನೇ ವಯಸ್ಸಿನಿಂದ ಸಂಗೀತ ಅಭ್ಯಾಸ ಪ್ರಾರಂಭ ಮಾಡಿದ್ದು, ಪ್ರಸ್ತುತ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಬಳಿ ಸೀನಿಯರ್ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಡಾ. ಕಿರಣ್ ಕುಮಾರ್ ಗಾನಸಿರಿ ಇವರ ಬಳಿ ಐದು ವರ್ಷಗಳ ಕಾಲ ಸುಗಮ ಸಂಗೀತ ಅಭ್ಯಾಸವನ್ನು ಮಾಡಿದವರಾಗಿದ್ದಾರೆ. ಅಲ್ಲದೆ ಡಾ ದಿನೇಶ್ ರಾವ್ ರವರ ಬಳಿ 5 ವರ್ಷಗಳಿಂದ ಕೀಬೋರ್ಡ್ ವಾದನ ವನ್ನು ಕಲಿಯುತ್ತಿದ್ದಾರೆ. . ಇವರು ತುಳುನಾಡಿನ ಪ್ರಸಿದ್ಧ ಟಿವಿ ಚಾನೆಲ್ಗಳಾದ ದೈಜಿ ವರ್ಲ್ಡ್, v4 ನ್ಯೂಸ್, ನ್ಯೂಸ್ ಕರ್ನಾಟಕ ಚಾನೆಲ್, ಸುದ್ದಿ ವಾಹಿನಿ, ಕಹಳೆ, ಅಭಿಮತ ಮುಂತಾದ ಚಾನೆಲ್ ಗಳಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದಾರೆ. ಅಲ್ಲದೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಹಾಡಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ.
ಇವರಿಗೆ ವಾಷ್ಠರ್ 5 ಸ್ಟಾರ್ ವತಿಯಿಂದ ಪ್ರತಿಭಾ ಸಿಂಚನ, ಗಾನಸಿರಿ ವತಿಯಿಂದ ಲಾಕ್ ಡೌನ್ ನೈಟಿಂಗೇಲ್, R.P ಕ್ರಿಯೇಷನ್ ವತಿಯಿಂದ ಬಾಲ ಪ್ರತಿಭಾ ರತ್ನ, waw ಸಿನಿಮಾ ವತಿಯಿಂದ ಬೆಸ್ಟ್ ಟ್ಯಾಲೆಂಟ್, ಅವಾರ್ಡ್ ಗಳು ದೊರಕಿದೆ.
ತನ್ಮಯ್ ಸಂಗೀತ ಮಾತ್ರವೇ ಅಲ್ಲದೆ ಚೆಸ್, ಕಬಡ್ಡಿ ಅಂತಹ ಆಟ ಗಳಲ್ಲೂ, ಶಾಲಾ ಚಟುವಟಿಕೆಗಳಲ್ಲಿಯೂ ಮುಂದಿದ್ದಾರೆ. ಅಲ್ಲದೆ ಅನೇಕ ನಾಟಕ ಗಳಲ್ಲಿಯೂ ಆಲ್ಬಂಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ವರ್ಷ ಸ್ಕೌಟ್ಸ್ ಅಂಡ್ ಗೈಡ್ಸ ವತಿಯಿಂದ ನಡೆದ ಗೀತ ಗಾಯನ ಸ್ಪರ್ಧೆಯಲ್ಲಿ ಇವರ ತಂಡ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಗ್ರಾಮ ಪಂಚಾಯತ್ ಸೇರಿದಂತೆ ಸರ್ಕಾರದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆ ಅಳವಡಿಕೆ ಅನಿವಾರ್ಯವಾಗಲಿದೆ ಎಂದು ರಾಜ್ಯ…
ಬೆಂಗಳೂರಿನಲ್ಲಿ 'ಸೇಫ್ ಫುಟ್ಪಾತ್' ಅಭಿಯಾನಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಕಳೆದ ಒಂದು ತಿಂಗಳಲ್ಲಿ 750 ಕಿಲೋಮೀಟರ್ಗೂ ಹೆಚ್ಚು ಪಾದಚಾರಿ ಮಾರ್ಗಗಳ…
ಮಧ್ಯಪ್ರಾಚ್ಯದಲ್ಲಿ ಇರಾನ್ ಬಿಕ್ಕಟ್ಟು ದಿನೇದಿನೇ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕ ತನ್ನ ಯುದ್ಧ ತಂತ್ರಗಳನ್ನು ಮರುಪರಿಶೀಲಿಸಲು ಮುಂದಾಗಿದೆ. ಇರಾನ್ನ ಭೂಗತ ಬಂಕರ್ಗಳು…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…