ಮಾಸ್ಟರ್ ತನ್ಮಯ್ ಸೋಮಯಾಗಿ ಸುಳ್ಯ , ಇವರು ಸುಳ್ಯದ ವಿಕ್ರಮ್, ರಂಜಿನಿ ದಂಪತಿಗಳ ಪುತ್ರ. ಸಂಗೀತ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಈ ಪುಟ್ಟ ಹುಡುಗನ ವಯಸ್ಸು ಕೇವಲ ಹದಿಮೂರು. ಇಷ್ಟು ಸಣ್ಣ ವಯಸ್ಸಿನಲ್ಲೇ 200 ಕ್ಕೂ ಹೆಚ್ಚು ವೇದಿಕೆ ಗಳಲ್ಲಿ ಹಾಡಿದ ಇವರಿಗೆ ಹಲವಾರು ಬಹುಮಾನಗಳು ಪ್ರಶಸ್ತಿಗಳು ದೊರೆತಿವೆ.
ತನ್ಮಯ್ ತಮ್ಮ ಐದನೇ ವಯಸ್ಸಿನಿಂದ ಸಂಗೀತ ಅಭ್ಯಾಸ ಪ್ರಾರಂಭ ಮಾಡಿದ್ದು, ಪ್ರಸ್ತುತ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಬಳಿ ಸೀನಿಯರ್ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಡಾ. ಕಿರಣ್ ಕುಮಾರ್ ಗಾನಸಿರಿ ಇವರ ಬಳಿ ಐದು ವರ್ಷಗಳ ಕಾಲ ಸುಗಮ ಸಂಗೀತ ಅಭ್ಯಾಸವನ್ನು ಮಾಡಿದವರಾಗಿದ್ದಾರೆ. ಅಲ್ಲದೆ ಡಾ ದಿನೇಶ್ ರಾವ್ ರವರ ಬಳಿ 5 ವರ್ಷಗಳಿಂದ ಕೀಬೋರ್ಡ್ ವಾದನ ವನ್ನು ಕಲಿಯುತ್ತಿದ್ದಾರೆ. . ಇವರು ತುಳುನಾಡಿನ ಪ್ರಸಿದ್ಧ ಟಿವಿ ಚಾನೆಲ್ಗಳಾದ ದೈಜಿ ವರ್ಲ್ಡ್, v4 ನ್ಯೂಸ್, ನ್ಯೂಸ್ ಕರ್ನಾಟಕ ಚಾನೆಲ್, ಸುದ್ದಿ ವಾಹಿನಿ, ಕಹಳೆ, ಅಭಿಮತ ಮುಂತಾದ ಚಾನೆಲ್ ಗಳಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದಾರೆ. ಅಲ್ಲದೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಹಾಡಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ.
ಇವರಿಗೆ ವಾಷ್ಠರ್ 5 ಸ್ಟಾರ್ ವತಿಯಿಂದ ಪ್ರತಿಭಾ ಸಿಂಚನ, ಗಾನಸಿರಿ ವತಿಯಿಂದ ಲಾಕ್ ಡೌನ್ ನೈಟಿಂಗೇಲ್, R.P ಕ್ರಿಯೇಷನ್ ವತಿಯಿಂದ ಬಾಲ ಪ್ರತಿಭಾ ರತ್ನ, waw ಸಿನಿಮಾ ವತಿಯಿಂದ ಬೆಸ್ಟ್ ಟ್ಯಾಲೆಂಟ್, ಅವಾರ್ಡ್ ಗಳು ದೊರಕಿದೆ.
ತನ್ಮಯ್ ಸಂಗೀತ ಮಾತ್ರವೇ ಅಲ್ಲದೆ ಚೆಸ್, ಕಬಡ್ಡಿ ಅಂತಹ ಆಟ ಗಳಲ್ಲೂ, ಶಾಲಾ ಚಟುವಟಿಕೆಗಳಲ್ಲಿಯೂ ಮುಂದಿದ್ದಾರೆ. ಅಲ್ಲದೆ ಅನೇಕ ನಾಟಕ ಗಳಲ್ಲಿಯೂ ಆಲ್ಬಂಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ವರ್ಷ ಸ್ಕೌಟ್ಸ್ ಅಂಡ್ ಗೈಡ್ಸ ವತಿಯಿಂದ ನಡೆದ ಗೀತ ಗಾಯನ ಸ್ಪರ್ಧೆಯಲ್ಲಿ ಇವರ ತಂಡ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…