ಕಲಾವಲ್ಲಭೆ, ಕಲಾ ಜಗತ್ತಿನಲ್ಲಿ ಚಿಕ್ಕದಾಗಿ ಮೊಳಕೆ ಒಡೆದು ಉತ್ತಮ ಕಲಾವಿದೆಯಾಗಿ ಮಿಂಚುತ್ತಿರುವ ತುಳುನಾಡಿನ ಪ್ರತಿಭೆ ದೀಕ್ಷ ಎನ್ ಕಲ್ಮಾಡಿ. ಇವರು ನವೀನ್ ಕಲ್ಮಾಡಿ ಮತ್ತು ಉಷಾ ನವೀನ್ ದಂಪತಿಗಳ ಅಕ್ಕರೆಯ ಸಕ್ಕರೆಯ ಕುಮಾರಿ. ಇದೀಗ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೇವಲ ವ್ಯಾಸಂಗಕ್ಕೆ ಮಾತ್ರ ತನ್ನ ಸಮಯವನ್ನು ಮೀಸಲಿಡದೆ ಕಲಾ ಆರಾಧನೆಯಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಎರಡನ್ನೂ ಸಮ ಪ್ರಮಾಣದಲ್ಲಿ ಕೊಂಡುಹೋಗುತ್ತಿದ್ದು, ಎರಡರಲ್ಲೂ ಯಶಸ್ಸನ್ನು ಕಾಣುತ್ತಿದ್ದಾರೆ.
ಸಂಗೀತ,ಭರತನಾಟ್ಯ,ನಟನೆ ಹಾಗೂ ಮೊಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯನ್ನು ಮಾಡುವ ಅಭಿಲಾಷೆ ಈ ಕುಮಾರಿಗೆ . ಅದಕ್ಕೆ ಕೈಗನ್ನಡಿಯನ್ನು ಹಿಡಿಯುವಂತೆ ಸಾಕಷ್ಟು ಮುಖ್ಯ ವೇದಿಕೆಯಲ್ಲಿ ತನ್ನ ಪ್ರತಿಭಾ ಕೌಶಲ್ಯ ಈಗಾಗಲೇ ಪ್ರದರ್ಶನ ಮಾಡಿರುತ್ತಾರೆ.
ಅಭಿಮತ ವಾಹಿನಿ ಸೇರಿದಂತೆ ಹಲವು ಟೆಲಿವಿಷನ್ ಚಾನೆಲ್ಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬಂದಿರುತ್ತಾರೆ. ನಮ್ಮ ವಾಯ್ಸ್ ಆಫ್ ಆರಾಧನಾ ಕಾರ್ಯಕ್ರಮ ಸೇರಿದಂತೆ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಭರತನಾಟ್ಯವನ್ನು ಡಾಕ್ಟರ್ ವಿದುಷಿ ಮಂಜರಿ ಚಂದ್ರ ಪುಷ್ಪರಾಜ್ ಬಳಿ ಕರಗತ ಮಾಡಿದರೆ , ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಧೂರು ಪಿ ಬಾಲಸುಬ್ರಮಣ್ಯಂ ಹಾಗೂ ಸುಗಮ ಸಂಗೀತವನ್ನು ಚಂದ್ರಶೇಖರ್ ಸರ್ ಹಾಗೂ ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಸ್ಟುಡಿಯೋದಲ್ಲಿ ಕಂಠಾಭ್ಯಾಸವನ್ನು ಮಾಡುತ್ತಿದ್ದಾರೆ.
ಇನ್ನು ಮಾಡಲಿಂಗ್ ಕ್ಷೇತ್ರದಲ್ಲೂ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಚಾಂಪಿಯನ್ಸ್ ಫ್ಯಾಷನ್ ಶೋ ಹಾಗೂ ಕೋಸ್ಟಲ್ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ . ಬೆಳ್ಳಿ ತೆರೆಯ ಮೇಲೂ ಮಿಂಚಲು ರೆಡಿಯಾದ ದೀಕ್ಷಾ ಸ್ಕೂಲ್ ಲೀಡರ್ ಚಲನಚಿತ್ರದಲ್ಲಿ ಈಗಾಗಲೇ ಅಭಿನಯಿಸಿರುತ್ತಾರೆ. ಭರತನಾಟ್ಯ ಜೂನಿಯರ್ ಪರೀಕ್ಷೆ ಮತ್ತು ಡ್ರಾಯಿಂಗ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನೊಂದಿಗೆ ತೇರ್ಗಡೆ ಹೊಂದಿರುತ್ತಾರೆ .
ಇವರು ಹಲವಾರು ಪ್ರಶಸ್ತಿಗಳನ್ನು ಇದಾಗಲೇ ಮುಡಿಗೇರಿಸಿ ಕೊಂಡಿದ್ದಾರೆ. ಅವುಗಳೆಂದರೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸೇವರತ್ನ ಪ್ರಶಸ್ತಿ, ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ, ರಾಜ್ಯ ಮಟ್ಟದ ಗಾನ ಕೋಗಿಲೆ ಪ್ರಶಸ್ತಿ, ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಲಭೂಮಿ ರಾಜ್ಯೋತ್ಸವ ಪ್ರಶಸ್ತಿ, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ನಮ್ಮ ಸಮಾಜ ಹೆಮ್ಮೆ ಪಡುವ ಕಲಾ ಆರಾಧಕಿಯಾಗಿ , ಕಲಿಕೆಯಲ್ಲಿ ಸಾಧಕಿಯಾಗಿ , ಸರಸ್ವತಿ ಸೇವಕಿಯಾಗಿ ತೌಳವ ಮಾತೆ ನೆಲೆಯೂರಿದ ಈ ಮಣ್ಣ ಹಿರಿಮೆಯನ್ನು ಇನ್ನಷ್ಟು ಉನ್ನತಿಗೆ ಕೊಡುಹೋಗುವ ರಾಯಭಾರ ಈ ಬಾಲಕಿಯ ಮೇಲಿದೆ .
ನಂದಿನಿ ಲೇಔಟ್ನಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪ್ಲಾಸ್ಟಿಕ್ ಗೋಡೌನ್ವೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಪಕ್ಕದ…
ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 81 ಮಂದಿ ಗಾಯಗೊಂಡಿರುವ ಘಟನೆ ಇಂಡೋನೇಷ್ಯಾದ…
ಹೆರ್ಗಾ ಗ್ರಾಮದ ಹೊಳೆಬಾಗಿಲು ನದಿಗೆ ಈಜಲು ಹೋದ ರಿಕ್ಷಾ ಚಾಲಕರೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು…
ಸ್ನಾನಕ್ಕೆಂದು ನದಿಗೆ ಇಳಿದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಮೃತದೇಹ ಪತ್ತೆಯಾಗಿದೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಿಯರ್…
ಪ್ರಧಾನ ಮಂತ್ರಿ ಮೋದಿ ವಿರುದ್ಧ ಸಚಿವರ ಹೇಳಿಕೆ: ಡಾ. ಭರತ್ ಶೆಟ್ಟಿ ತೀವ್ರ ಖಂಡನೆ. ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ…
ಮುಂಬೈನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬಿರಿಯಾನಿ, ಕಲ್ಲಂಗಡಿ ಸೇವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ…