ಜನ ಮನದ ನಾಡಿ ಮಿಡಿತ

Advertisement

ದೈವ ದೇವಸ್ಥಾನಗಳ ಅಭಿವೃದ್ಧಿಯ ರೂವಾರಿ ಕೆ.ಸದಾಶಿವ ಶೆಟ್ಟಿ ಮುಂದಾಳತ್ವದಲ್ಲಿ ಮಧೂರು ದೇವಾಲಯಕ್ಕೆ ಹೊಸ ಕಳೆ

ಕಾಸರಗೋಡು ಜಿಲ್ಲೆಯ ಮಧೂರು ದೇವಾಲಯ ಪ್ರಾಚೀನ ಪರಂಪರೆ ಮತ್ತು ಐತಿಹಾಸಿಕ ಮಹತ್ವದ ದೇವಾಲಯ. ಅದೀಗ ಜೀರ್ಣೋದ್ಧಾರಗೊಂಡು ಆಧುನಿಕತೆಯ ಸ್ಪರ್ಶ ಪಡೆದಿದೆ.

ಕಾಸರಗೋಡಿನವರೇ ಆದ ಕನ್ಯಾನ ಸದಾಶಿವ ಶೆಟ್ಟಿ ಅವರ ಮುಂದಾಳತ್ವದಲ್ಲಿ ದೇವಾಲಯದ ಗೋಪುರ ನವೀಕೃತಗೊಂಡು ದೇವಾಲಯಕ್ಕೆ ಹೊಸ ಕಳೆ ತಂದಿದೆ. ಮುಂಬಯಿಯಲ್ಲಿ ರಾಸಾಯನಿಕ ಉದ್ಯಮ ಮತ್ತು ಗುಜರಾತಿನಲ್ಲಿ ಔಷಧಿಗಳಲ್ಲಿ ಬಳಸುವ ರಾಸಾಯನಿಕಗಳ ತಯಾರಿಕಾ ಘಟಕಗಳನ್ನು ಹೊಂದಿರುವ ಕನ್ಯಾನ ಸದಾಶಿವ ಶೆಟ್ಟಿ ಅವರ ಉದ್ಯಮ ಸಂಸ್ಥೆಯ ಹೆಸರು ಹೇರಂಭಾ ಇಂಡಸ್ಟ್ರೀಸ್. ಗಣಪತಿಯ ಪರಮ ಭಕ್ತರಾಗಿರುವ ಅವರು ಸುಮಾರು ಒಂದೂವರೆ ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ದೇವಾಲಯದ ಚೆಲುವನ್ನು ಹೆಚ್ಚಿಸುವ ಪ್ರಧಾನ ಗೋಪುರವನ್ನು ನಿರ್ಮಿಸಿ ಮೂಡಪ್ಪ ಪ್ರಿಯ ಮಧೂರು ಗಣಪತಿಗೆ ಸಮರ್ಪಿಸುತ್ತಿದ್ದಾರೆ. ಪಾದುಕಾ ಮೂಲದಿಂದ ನಲವತ್ತು ಅಡಿ ಎತ್ತರವಿರುವ ಈ ಗೋಪುರ ಮೂರು ಅಂತಸ್ತುಗಳನ್ನು ಹೊಂದಿದೆ. ಗೋಪುರವು ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ .ಮಧೂರು ದೇವಾಲಯದಲ್ಲಿ ಪೂಜಿಸುವ ಎಲ್ಲಾ ದೇವರ ವಿಗ್ರಹಗಳನ್ನು ಗೋಪುರದಲ್ಲಿ ನೆಲೆಗೊಳಿಸಲಾಗಿದೆ. ಕೃಷ್ಣ ಶಿಲೆಯಲ್ಲಿ ಕೆತ್ತಿದ ಶಿವ, ಗಣಪತಿ, ಪಾರ್ವತಿ ವಿಗ್ರಹಗಳು ಗೋಪುರಕ್ಕೆ ದೈವಿಕ ಕಳೆಯನ್ನು ನೀಡಿವೆ.

ಒಂಭತ್ತು ತಿಂಗಳುಗಳಲ್ಲಿ ಗೋಪುರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಗೋಪುರದ ವಾಸ್ತು ವಿನ್ಯಾಸವನ್ನು ಪ್ರಸಾದ್ ಮುನಿಯಂಗಳ ಅವರು ರೂಪಿಸಿದ್ದರೆ, ಶಿಲಾ ವಿನ್ಯಾಸದ ಹೊಣೆಗಾರಿಕೆ ಬಂಟ್ವಾಳದ ಸದಾಶಿವ ಶೆಣೈ ಅವರದ್ದು. ರಮೇಶ್ ಲಾಯಿಲ ಬೆಳ್ತಂಗಡಿ ಅವರ ನೇತೃತ್ವದ ನುರಿತ ಶಿಲ್ಪಿಗಳ ತಂಡ ಇದನ್ನು ಕಾರ್ಯರೂಪಕ್ಕೆ ತಂದಿದೆ. ವಾಸ್ತು ಜತೆ ದೈವಿಕ ಕಳೆಯ ಸಮ್ಮಿಲನ ಗೋಪುರವನ್ನು ಅಕರಶಃ ರಾಜಗೋಪುರವನ್ನಾಗಿಸಿದೆ. ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಎನ್ನುತ್ತಿದೆ ಅದು.

 

 

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!