ಕಾಸರಗೋಡು ಜಿಲ್ಲೆಯ ಮಧೂರು ದೇವಾಲಯ ಪ್ರಾಚೀನ ಪರಂಪರೆ ಮತ್ತು ಐತಿಹಾಸಿಕ ಮಹತ್ವದ ದೇವಾಲಯ. ಅದೀಗ ಜೀರ್ಣೋದ್ಧಾರಗೊಂಡು ಆಧುನಿಕತೆಯ ಸ್ಪರ್ಶ ಪಡೆದಿದೆ.
ಕಾಸರಗೋಡಿನವರೇ ಆದ ಕನ್ಯಾನ ಸದಾಶಿವ ಶೆಟ್ಟಿ ಅವರ ಮುಂದಾಳತ್ವದಲ್ಲಿ ದೇವಾಲಯದ ಗೋಪುರ ನವೀಕೃತಗೊಂಡು ದೇವಾಲಯಕ್ಕೆ ಹೊಸ ಕಳೆ ತಂದಿದೆ. ಮುಂಬಯಿಯಲ್ಲಿ ರಾಸಾಯನಿಕ ಉದ್ಯಮ ಮತ್ತು ಗುಜರಾತಿನಲ್ಲಿ ಔಷಧಿಗಳಲ್ಲಿ ಬಳಸುವ ರಾಸಾಯನಿಕಗಳ ತಯಾರಿಕಾ ಘಟಕಗಳನ್ನು ಹೊಂದಿರುವ ಕನ್ಯಾನ ಸದಾಶಿವ ಶೆಟ್ಟಿ ಅವರ ಉದ್ಯಮ ಸಂಸ್ಥೆಯ ಹೆಸರು ಹೇರಂಭಾ ಇಂಡಸ್ಟ್ರೀಸ್. ಗಣಪತಿಯ ಪರಮ ಭಕ್ತರಾಗಿರುವ ಅವರು ಸುಮಾರು ಒಂದೂವರೆ ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ದೇವಾಲಯದ ಚೆಲುವನ್ನು ಹೆಚ್ಚಿಸುವ ಪ್ರಧಾನ ಗೋಪುರವನ್ನು ನಿರ್ಮಿಸಿ ಮೂಡಪ್ಪ ಪ್ರಿಯ ಮಧೂರು ಗಣಪತಿಗೆ ಸಮರ್ಪಿಸುತ್ತಿದ್ದಾರೆ. ಪಾದುಕಾ ಮೂಲದಿಂದ ನಲವತ್ತು ಅಡಿ ಎತ್ತರವಿರುವ ಈ ಗೋಪುರ ಮೂರು ಅಂತಸ್ತುಗಳನ್ನು ಹೊಂದಿದೆ. ಗೋಪುರವು ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ .ಮಧೂರು ದೇವಾಲಯದಲ್ಲಿ ಪೂಜಿಸುವ ಎಲ್ಲಾ ದೇವರ ವಿಗ್ರಹಗಳನ್ನು ಗೋಪುರದಲ್ಲಿ ನೆಲೆಗೊಳಿಸಲಾಗಿದೆ. ಕೃಷ್ಣ ಶಿಲೆಯಲ್ಲಿ ಕೆತ್ತಿದ ಶಿವ, ಗಣಪತಿ, ಪಾರ್ವತಿ ವಿಗ್ರಹಗಳು ಗೋಪುರಕ್ಕೆ ದೈವಿಕ ಕಳೆಯನ್ನು ನೀಡಿವೆ.
ಒಂಭತ್ತು ತಿಂಗಳುಗಳಲ್ಲಿ ಗೋಪುರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಗೋಪುರದ ವಾಸ್ತು ವಿನ್ಯಾಸವನ್ನು ಪ್ರಸಾದ್ ಮುನಿಯಂಗಳ ಅವರು ರೂಪಿಸಿದ್ದರೆ, ಶಿಲಾ ವಿನ್ಯಾಸದ ಹೊಣೆಗಾರಿಕೆ ಬಂಟ್ವಾಳದ ಸದಾಶಿವ ಶೆಣೈ ಅವರದ್ದು. ರಮೇಶ್ ಲಾಯಿಲ ಬೆಳ್ತಂಗಡಿ ಅವರ ನೇತೃತ್ವದ ನುರಿತ ಶಿಲ್ಪಿಗಳ ತಂಡ ಇದನ್ನು ಕಾರ್ಯರೂಪಕ್ಕೆ ತಂದಿದೆ. ವಾಸ್ತು ಜತೆ ದೈವಿಕ ಕಳೆಯ ಸಮ್ಮಿಲನ ಗೋಪುರವನ್ನು ಅಕರಶಃ ರಾಜಗೋಪುರವನ್ನಾಗಿಸಿದೆ. ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಎನ್ನುತ್ತಿದೆ ಅದು.
ನಂದಿನಿ ಲೇಔಟ್ನಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪ್ಲಾಸ್ಟಿಕ್ ಗೋಡೌನ್ವೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಪಕ್ಕದ…
ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 81 ಮಂದಿ ಗಾಯಗೊಂಡಿರುವ ಘಟನೆ ಇಂಡೋನೇಷ್ಯಾದ…
ಹೆರ್ಗಾ ಗ್ರಾಮದ ಹೊಳೆಬಾಗಿಲು ನದಿಗೆ ಈಜಲು ಹೋದ ರಿಕ್ಷಾ ಚಾಲಕರೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು…
ಸ್ನಾನಕ್ಕೆಂದು ನದಿಗೆ ಇಳಿದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಮೃತದೇಹ ಪತ್ತೆಯಾಗಿದೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಿಯರ್…
ಪ್ರಧಾನ ಮಂತ್ರಿ ಮೋದಿ ವಿರುದ್ಧ ಸಚಿವರ ಹೇಳಿಕೆ: ಡಾ. ಭರತ್ ಶೆಟ್ಟಿ ತೀವ್ರ ಖಂಡನೆ. ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ…
ಮುಂಬೈನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬಿರಿಯಾನಿ, ಕಲ್ಲಂಗಡಿ ಸೇವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ…