ಜನ ಮನದ ನಾಡಿ ಮಿಡಿತ

Advertisement

ಕೃಷಿ ವಿಜ್ಞಾನ ಕೇಂದ್ರ  ಹಾಗೂ ಕೃಷಿ ಇಲಾಖೆ ಮೂಡಬಿದಿರೆ ಸಹಯೋಗದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಯ 95 ನೇ ಸಂಸ್ಥಾಪನಾ ದಿನಾಚರಣೆ

ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಕೃಷಿ ವಿಜ್ಞಾನ ಕೇಂದ್ರ  ಹಾಗೂ ಕೃಷಿ ಇಲಾಖೆ ಮೂಡಬಿದಿರೆ ಸಹಯೋಗದಲ್ಲಿ ರೈತ ಸಂಪರ್ಕ ಕೇಂದ್ರ ಮೂಡುಬಿದರೆ ಇಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಯ 95 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ರೈತರಿಗೆ ಕೃಷಿ ತಂತ್ರಜ್ಞಾನಗಳ ಮಾಹಿತಿ  ಹಾಗೂ ಪ್ರಧಾನ ಮಂತ್ರಿ ಬೆಳೆ ಯೋಜನೆ ಕುರಿತು ತರಬೇತಿ ಕಾರ್ಯಕ್ರಮ ವನ್ನು  ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ  ಮಂಗಳೂರಿನ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಟಿ. ಜೆ. ರಮೇಶ ರವರು ಸ್ಥಳ ನಿರ್ದಿಷ್ಟ ತಂತ್ರಜ್ಞಾನ ಗಳ ಅಳವಡಿಕೆಗೆ ಹಾಗೂ ಕೃಷಿ   ಸಂಭದಿತ ತಂತ್ರಜ್ಞಾನ ಬಳಕೆ, ಮೊಬೈಲ್ ಆಪ್  ಬಳಕೆ ಮಾಡುವಂತೆ ರೈತರಿಗೆ ತಿಳಿಸಿದರು. ಡಾ.ಕೇದಾರನಾಥ ವಿಜ್ಞಾನಿಗಳು (ಸಸ್ಯ ಸಂರಕ್ಷಣೆ) ಭಾಗವಹಿಸಿ ಭತ್ತ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಕಂಡು ಬರುವ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಡಾ.ಮಲ್ಲಿಕಾರ್ಜುನ್ ವಿಜ್ಞಾನಿಗಳು ಹುಳಿ ಮಣ್ಣು ನಿರ್ವಹಣೆ ಮತ್ತು ಸಮರ್ಪಕ ರಸಗೊಬ್ಬರಗಳ ಸೂಕ್ತ ಮತ್ತು ಸಮರ್ಪಕ  ಬಳಕೆ ಮಾಹಿತಿ ನೀಡಿದರು.ಡಾ.ಹರೀಶ್ ಶಣೈ   ಬತ್ತದ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಮತ್ತು ಹೊಸ ಬತ್ತದ ತಳಿಗಳ ಕುರಿತು ಮಾಹಿತಿ ನೀಡಿದರು. ಕರಾವಳಿ ಭಾಗದಲ್ಲಿ ಹೊಸ ಭತ್ತದ ತಳಿಗಳಾದ ಸೈಯಾದ್ರಿ ಪಂಚಮುಖಿ, ಸೈಯಾದ್ರಿ ಬ್ರಹ್ಮ, ಕೆಂಪು ಮುಕ್ತಿ ತಳಿಗಳು ಕರಾವಳಿ ಭಾಗದಲ್ಲಿ ಬೆಳೆಸಬಹುದಾಗಿದೆ ಎಂದರು. ಶ್ರೀ. ವಿ.ಎಸ್.ಕುಲಕರ್ಣಿ ಕೃಷಿ ಅಧಿಕಾರಿಗಳು ಅಧ್ಯಕ್ಷತೆಯನ್ನು ವಹಿಸಿ ಪ್ರಧಾನ್ ಮಂತ್ರಿ ಬೆಳೆ ವಿಮಾ ಯೋಜನೆ ಕುರಿತು ಮಾಹಿತಿ ನೀಡಿದರು. ವಿಮಾ ಅಧಿಕಾರಿಗಳಾದ ಸೋಮನಾಥ್ತ ಮತ್ತು ಪವನ್ ವಿಮೆ ಬಗ್ಗೆ ಮಾಹಿತಿ ಒದಗಿಸಿದರು, ರೈತರು ಇದರ ಸದ್ಬಳಕೆ ಮಾಡಬಹುದಾಗಿದ್ದು ಆಗಸ್ಟ್ 16ರ ಒಳಗಾಗಿ ವಿಮೆ ನೋಂದಣಿಗೆ  ಸೂಚಿಸಲಾಯಿತು  ಸಂಪರ್ಕ ಕೇಂದ್ರದ ಸಿಬ್ಬಂದಿಗಳಾದ  ಯಲ್ಲನ್ ಗೌಡ, ಅನಾ ಲೋಬೊ,  ಸುಜಯ, ಹರಿಣಾಕ್ಷಿ, ಜಯಂತಿ,ಹಾಗೂ ಕೃಷಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 ಕೃಷಿ ಅಧಿಕಾರಿ ಕುಲಕರ್ಣಿಯವರು ಸ್ವಾಗತ ಮತ್ತು ವಂದನಾರ್ಪಣೆಗೆದರು.

Leave a Reply

Your email address will not be published. Required fields are marked *

ಯುವತಿಯರನ್ನು ನಂಬಿಸಿ ಕೈಕೊಟ್ಟ ಭೂಪನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ…!

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

error: Content is protected !!