ಜನ ಮನದ ನಾಡಿ ಮಿಡಿತ

Advertisement

ಕೋಲಾರ : ₹10 ಸಾವಿರ ಬೆಟ್ಟಿಂಗ್ ಕಟ್ಟಿ ಮದ್ಯ ಸೇವಿಸಿದ ಭೂಪ.. ದುಡ್ಡಿನ ಆಸೆಗೆ ಜೀವ ಬಿಟ್ಟ ಯುವಕ

ಈ ಯುವಕನ ಹೆಸರು ಕಾರ್ತಿಕ್ ಅಂತ. ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯ ನಿವಾಸಿ. ಇವನಿಗೆ ಇನ್ನೂ 21 ವರ್ಷ ವಯಸ್ಸು. ಕಾರ್ತಿಕ್‌ಗೆ ಮದುವೆಯಾಗಿ ಒಂದು ವರ್ಷ ಆಗಿತ್ತು. ಕಳೆದ 8 ದಿನಗಳ ಹಿಂದಷ್ಟೇ ಕಾರ್ತಿಕ್ ಪತ್ನಿ ಮಗುವಿಗೆ ಜನ್ಮ ನೀಡಿದ್ದರು.

ಕಾರ್ತಿಕ್‌ ಸ್ನೇಹಿತರು ಮದ್ಯ ಸೇವನೆಗೆ ಬೆಟ್ಟಿಂಗ್ ಕಟ್ಟಿದ್ದಾರೆ. ನೀರು ಬೆರಸದೆ ಮದ್ಯ ಸೇವನೆ ಮಾಡಿದ್ರೆ 10 ರೂಪಾಯಿ ಕೊಡುವ ಸವಾಲು ಹಾಕಿದ್ದಾರೆ. ದುಡ್ಡಿನ ಆಸೆಗೆ ಚಾಲೆಂಜ್ ಒಪ್ಪಿಕೊಂಡ ಕಾರ್ತಿಕ್, 5 ಬಾಟಲಿ ಮದ್ಯವನ್ನು ನೀರು ಬೆರಸದೆ ಕುಡಿದಿದ್ದಾನೆ.

ನೀರು ಬೆರಸದೇ 5 ಬಾಟಲ್ ಕುಡಿದ ಮೇಲೆ ಕಾರ್ತಿಕ್ ತೀವ್ರ ಅಸ್ವಸ್ಥನಾಗಿದ್ದಾನೆ. ಸ್ನೇಹಿತರು ಈತನನ್ನು ಮುಳಬಾಗಿಲು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. 10 ಸಾವಿರ ರೂಪಾಯಿ ಆಸೆಗೆ ಎಣ್ಣೆ ಕುಡಿದ ಕಾರ್ತಿಕ್ ಕೊನೆಗೆ ಉಸಿರೇ ಬಿಟ್ಟಿದ್ದಾನೆ.

 

ಕಾರ್ತಿಕ್ ಜೊತೆಗಿದ್ದ ವೆಂಕಟರೆಡ್ಡಿ, ಸುಬ್ರಮಣಿ ಮತ್ತು ಇತರೆ ಮೂವರು ಬೆಟ್ ಕಟ್ಟಿದ್ದಾರೆ. ವೆಂಕಟರೆಡ್ಡಿ 5 ಬಾಟಲ್‌ ಮದ್ಯ ಸೇವಿಸಿದರೆ 10 ಸಾವಿರ ರೂಪಾಯಿ ಕೊಡುವುದಾಗಿ ಹೇಳಿದ್ದರಂತೆ. ನಂಗಲಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿದ್ದು, ವೆಂಕಟರೆಡ್ಡಿ, ಸುಬ್ರಮಣಿ ಅನ್ನು ಬಂಧಿಸಿ, ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!