ಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ಹಿಂದೂಗಳು ಕೇವಲ ತಲ್ವಾರ್ ತೋರಿಸಿದ್ರೆ ಕಥೆಯೇ ಬೇರೆಯಾಗುತ್ತಿತ್ತು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ಹೇಳಿದ್ದಾರೆ.

ಮಂಜೇಶ್ವರದ ವರ್ಕಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂಗಳು ಮನೆಯಲ್ಲಿ ಒಂದೊoದು ತಲ್ವಾರ್ ಇಟ್ಟುಕೊಳ್ಳಲು ಕರೆ ನೀಡಿದ್ದಾರೆ. ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗಿನಲ್ಲಿ ಪೌಡರ್, ಬಾಚಣಿಗೆ ಜೊತೆಗೆ ಚೂರಿ ಇಟ್ಟುಕೊಳ್ಳಿ. 6 ಇಂಚಿನ ಚೂರಿ ಇಟ್ಟುಕೊಳ್ಳಲು ಲೈಸೆನ್ಸ್ ಬೇಡ ಎಂದ ಅವರು, ಸಂಜೆ ಮೇಲೆ ಓಡಾಡಿ್ದರೆ ನಿಮ್ಮ ಮೇಲೆ ಖಂಡಿತಾ ಅಕ್ರಮಣ ಮಾಡುತ್ತಾರೆ, ಆಕ್ರಮಣ ಮಾಡಬೇಡಿ ಎಂದು ಬೇಡಿಕೊಂಡರೆ ನಿಮ್ಮ ಕಥೆ ಮುಗಿತು, ಅದರ ಬದಲು ಚೂರಿ ತೋರಿಸಿ ಸಾಕು ಹೆದರಿ ಓಡುತ್ತಾರೆ ಎಂದರು.
ಈ ಹಿಂದೆ ಹಿಂದೂ ಮುಸ್ಲಿಂ ಗಲಾಟೆ ಅಂದರೆ ಮುಸ್ಲಿಂರು ಹೊಡೀತಾರೆ ಹಿಂದೂಗಳು ಓಡುತ್ತಾರೆ ಅಂತ ಇತ್ತು, ಆದರೆ ಈಗ ಹಿಂದೂ ಕೇವಲ ತಿರುಗಿ ಬಿದ್ದಿದ್ದಾನೆ. ಇನ್ನು ಹೊಡಿಲಿಕ್ಕೆ ಶುರು ಮಾಡಲಿಲ್ಲ. ನಾವು ಎದ್ದು ನಿಲ್ಲಬೇಕು, ಮನೆಯಲ್ಲಿ ಒಂದು ಒಂದು ತಲ್ವಾರ್ ಇಟ್ಟುಕೊಳ್ಳಿ ಎಂದ ಕರೆ ನೀಡಿದ್ದಾರೆ.



