ಜನ ಮನದ ನಾಡಿ ಮಿಡಿತ

Advertisement

ಭಾವಪೂರ್ಣ ನೃತ್ಯದಿಂದ ಪ್ರೇಕ್ಷಕರ ಮನ ಗೆದ್ದ ನೃತ್ಯಾಂಗಿ ದೀಕ್ಷಾ ಪ್ರಿಯಾ

ದೀಕ್ಷಾ ಪ್ರಿಯಾರವರು ವೈಶಾಲಿ ಕರ್ಕೇರ ಅವರ ಸುಪುತ್ರಿ. ಇವರು ಶ್ರೀ ಗುರುದೇವ ವಿಧ್ಯಾಪೀಠ ಒಡಿಯೂರಿನ ಆರನೇ ತರಗತಿ ಕಲಿಯುತ್ತಿದ್ದಾರೆ. ಇವರು ವಾಹಿನಿಗಳಲ್ಲಿ ಹಲವು ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೇ ಬೆಂಗಳೂರು,ಅಥನಿ, ಶಿವಮೊಗ್ಗ,ಶೃಂಗೇರಿ, ಚಿತ್ರದುರ್ಗ, ಉಡುಪಿ, ಬೆಳಗಾವಿ ಹೀಗೆ ಕರ್ನಾಟಕದ ಹಲವು ‌ದೊಡ್ಡ ದೊಡ್ಡ ವೇದಿಕೆಯಲ್ಲಿ ಹಲವಾರು ಬಾರಿ ನೃತ್ಯ ಕಾರ್ಯಕ್ರಮಗಳನ್ನು ‌ಮಾಡಿ ಸೈ ಎನಿಸಿಕೊಂಡ್ಡಿದ್ದಾರೆ. ತನ್ನ 5ನೇ ವರ್ಷ ವಯಸ್ಸಿನಲ್ಲಿ ವೆಸ್ಟೆರ್ನ್ ಡಾನ್ಸ್ ನ್ನು ಸಿಟಿಗಾಯ್ಸ್ ಕುಡ್ಲಾಕ್ವೀನ್ಸ್ ಡಾನ್ಸ್ ಕ್ರ್ಯು ಮಂಗಳೂರು ಇಲ್ಲಿ ಶ್ರೀ ಸುಧೀರ್ ಉಳ್ಳಾಲ್ ಅವರ‌ಶಿಷ್ಯೆಯಾಗಿ‌ 4 ವರ್ಷ ತರಭೇತಿಯನ್ನು‌ ಪಡೆದಿದ್ದಾರೆ.

ಇದೀಗ ಸತತ ಮೂರು ವರ್ಷಗಳಿಂದ ಮುಡಿಪಿನ ಭಾರತೀ ನೃತ್ಯಾಲಯದಲ್ಲಿ ವಿಧುಷಿ ಉಮಾ ಹೆಬ್ಬಾರ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ತರಬೇತಿ ಪಡೆಯುವುದು ಮಾತ್ರವಲ್ಲದೇ ಹಲವು ವೇದಿಕೆಗಳಲ್ಲಿ ಭರತನಾಟ್ಯವನ್ನು ಮಾಡಿ ಜನರ ಕಣ್ಮನ ಸೆಳೆದಿದ್ದಾರೆ. ಈ ವರ್ಷ ಜ್ಯೂನಿಯರ್ ಪರೀಕ್ಷೆ ಬರೆಯುವ ತಯಾರಿಯಲ್ಲಿದ್ದಾರೆ. ಪಡ್ಪುವಿನ ಶ್ರೀ ಜಲದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಕುಣಿತಭಜನೆ ಹಾಗೂ ಶ್ರೀ ಸತೀಶ್ ಸುವರ್ಣ ಅವರ ಬಳಿ ಯಕ್ಷಗಾನ ತರಬೇತಿಯನ್ನು ಪಡೆಯುತ್ತಿದ್ದು, ರಂಗಪ್ರವೇಶವನ್ನೂ ಮಾಡಿದ್ದಾರೆ. ಶ್ರೀ ಸಂತಾನಗೋಪಾಲಕೃಷ್ಣ ದೇವಸ್ಥಾನದ ಕಲಾ ಸಂಘದಲ್ಲಿ ಭಜನೆ ಹಾಗೂ ಕುಣಿತಭಜನೆಯನ್ನು ಕಲಿಯುತ್ತಿದ್ದಾರೆ. ಯೋಗಾಸನ ಹಾಗೂ ಚಿತ್ರಕಲೆಯಲ್ಲೂ ಪ್ರವೀಣೆಯೆನಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!