ಮೇ. 09 ರಂದು ಭಾರತ ಮತ್ತು ಪಾಕಿಸ್ತಾನ ಸೇನೆ ಮಧ್ಯೆ ದೊಡ್ಡ ಮಟ್ಟದಲ್ಲಿ ಘರ್ಷಣೆ ಆಗಿದೆ. ಭಾರತೀಯ ನಾಗರಿಕರ ಮತ್ತು ನಮ್ಮ ಸೇನಾ ನೆಲೆಯನ್ನು ಟಾರ್ಗೆಟ್ ಮಾಡುತ್ತಿದ್ದ ಪಾಕಿಸ್ತಾನಿ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ. ಆಪರೇಷನ್ ಸಿಂಧೂರ ಪ್ರತಿಯಾಗಿ ಪಾಕಿಸ್ತಾನ ಭಾರತದ ನಾಗರಿಕರನ್ನು ಗರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಪಾಕ್ನ ಈ ಕೃತ್ಯಕ್ಕೆ ಪೂಂಚ್ನಲ್ಲಿ ಭಾರತದ ೧೫ ನಾಗರಿಕರು ಜೀವ ಕಳೆದುಕೊಂಡಿದ್ದರು. ಆ ಮೂಲಕ ಪಾಕಿಸ್ತಾನ ಭಾರತವನ್ನು ಕೆರಳಿಸಿ, ಯುದ್ಧಕ್ಕೆ ರಣವಿಳ್ಯವನ್ನು ನೀಡಿತು.

ಪಾಕ್ನ ಕೃತ್ಯಕ್ಕೆ ಕೆರಳಿದ ಭಾರತ, ಪಾಕಿಸ್ತಾನದ ಮೇಲೆ ಮೇ. 09 ರಂದು ಬೆಳಗ್ಗೆ ಮತ್ತು ಮಧ್ಯಾಹ್ನ ಲಾಹೋರ್, ಕರಾಚಿ, ಇಸ್ಲಾಮಾಬಾದ್ನಲ್ಲಿ ಡ್ರೋಣ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ಮಿಸೈಲ್ಗಳ ಅಟ್ಯಾಕ್ಗೆ ಮುಂದಾಗಿತ್ತು. ಆದರೆ ಪಾಕ್ನ ಕ್ಷಿಪಣಿಗಳು, ಡ್ರೋಣ್ಗಳು, ಯುದ್ಧ ವಿಮಾನಗಳು ದಾಳಿ ನಡೆಸದಂತೆ ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ತಡೆದಿವೆ. ಆ ಮೂಲಕ ಪಾಕಿಸ್ತಾನ ತುಂಬಾನೇ ನಷ್ಟ ಅನುಭವಿಸಿತು. ಪಾಕಿಸ್ತಾನಕ್ಕೆ ಏನೆಲ್ಲ ನಷ್ಟ.. ಆಗಿದೆ ಅನ್ನೋದರ ಬಗ್ಗೆ ನೋಡೋದಾದರೆ ಪಾಕಿಸ್ತಾನದ 16 ನಗರಗಳ ಮೇಲೆ ದಾಳಿ ಮಾಡಿ 1 ಎಫ್-16 ಯುದ್ಧ ವಿಮಾನ ಉಡೀಸ್, 2 ಎಈ 17 ಯುದ್ಧ ವಿಮಾನ ಉಡೀಸ್, ಐದು ಏರ್ ಡಿಫೆನ್ಸ್ ಸಿಸ್ಟಮ್ಗಳು ಧ್ವಂಸ, 50 ಮಿಸೈಲ್ಗಳು ಫಿನಿಶ್, 60 ಡ್ರೋಣ್ಗಳು ಢಮಾರ್, ಸರ್ವೈಲೆನ್ಸ್ ವಿಮಾನ ಪತನ, ಏರ್ಬೋರ್ನ್ ವಾರ್ನಿಂಗ್ ಕಂಟ್ರೋಲ್ ಸಿಸ್ಟಮ್.



