ನಿನ್ನೆಯೂ ಕೂಡ ಪಾಕಿಸ್ತಾನ ನಾಗರಿಕರನ್ನು ಗುರಿಯಾಗಿಸಿ ಭಾರತದ ಮೇಲೆ ದಾಳಿಗೆ ಯತ್ನಿಸಿದೆ. ಅದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದ್ದು, ಪ್ರತೀಕಾರದ ದಾಳಿ ಮಾಡಿದೆ. ಲಾಹೋರ್, ರಾವಲ್ಪಿಂಡಿಯಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಮಾಹಿತಿ ಕೂಡ ಲಭ್ಯ ಆಗಿದೆ

ಭಾರತದಿಂದ ಕ್ಷಿಪಣಿ ದಾಳಿಯಾಗಿದ್ದು, ಪಾಕಿಸ್ತಾನದ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಡು ದಾಳಿ ಮಾಡಲಾಗಿದೆ. ಮುರೀದ್, ನೂರ್ಖಾನ್, ರಫೀಖಿ ವಾಯುನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದ್ದು. ಆ ಮೂಲಕ ಪದೇ ಪದೆ ಕೆಣಕಿದ ಪಾಕ್ಗೆ ಭಾರತ ಖಡಕ್ ತಿರುಗೇಟು ನೀಡಿದೆ. ಪ್ರತಿದಾಳಿಗೆ ಸಂಬಧಿಸಿ ಭಾರತೀಯ ಸೇನೆಯು ಕೆಲವೇ ಕ್ಷಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಜಮ್ಮುಕಾಶ್ಮೀರ, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್ನ 20 ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಸತತ 2ನೇ ದಿನ ಡ್ರೋಣ್ ದಾಳಿಗೆ ವಿಫಲ ಯತ್ನ ನಡೆಸಿದೆ. ಏಕೆಂದರೆ ಪಾಕಿಸ್ತಾನದ ಡ್ರೋಣ್ಗಳು ಗುರಿ ಮುಟ್ಟುವ ಮೊದಲೇ ಭಾರತೀಯ ವಾಯು ಸೇನೆ ಹೊಡೆದುರುಳಿಸಿ ನೆಲಕ್ಕೆ ಕೆಡವಿವೆ. ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್, ಅವಂತಿಪೋರಾದ ವಾಯುನೆಲೆಯ ಮೇಲೆ ಗುರಿಯಾಗಿರಿಸಿಕೊಂಡು ದಾಳಿಗೆ ಯತ್ನಿಸಿತ್ತು. ಆದರೆ ಇದನ್ನು ಮೊದಲೇ ಮನಗಂಡಿದ್ದ ಭಾರತೀಯ ವಾಯು ಸೇನೆ, ಪಾಕಿಸ್ತಾನದ ಎಲ್ಲ ಡ್ರೋನ್ಗಳನ್ನು ಛಿದ್ರಛಿದ್ರ ಮಾಡಿದೆ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಪಾಕ್ ಕೊರಗುತ್ತಿದೆ.



