ಉಗ್ರ ಪಾಕಿಸ್ತಾನ ಈ ಜನ್ಮದಲ್ಲಿ ಬುದ್ಧಿ ಕಲಿಯುವ ಲಕ್ಷಣ ಕಾಣ್ತಿಲ್ಲ ಮತ್ತೆ ಮತ್ತೆ ನಮ್ಮ ಭಾರತೀಯ ಸೇನೆಯನ್ನು ಕೆಣಕಲು ಬರುತ್ತಿದೆ. ಪಂಜಾಬ್ನ ಅಮೃತ ಸರದ ಮೇಲೆ ಮತ್ತೆ ದಾಳಿಗೆ ಯತ್ನಿಸಿರುವ ಬಗ್ಗೆ ಭಾರತೀಯ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ.

ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊAಡಿರುವ ಸೇನೆ.. ಇಂದು ಮುಂಜಾನೆ 5 ಗಂಟೆಯಲ್ಲಿ ಪಾಕ್ನಿಂದ ನಮ್ಮ ಮೇಲೆ ಡ್ರೋಣ್ ದಾಳಿಗೆ ಯತ್ನಿಸಿದೆ. ಅಮೃತಸರದ ಕಂಟೋನ್ಮೆAಟ್ ಮೇಲೆ ಡ್ರೋಣ್ ದಾಳಿಯಾಗಿತ್ತು. ಕೂಡಲೇ ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ಆ ಡ್ರೋಣ್ಗಳನ್ನು ಹೊಡೆದು ಹಾಕಿದೆ. ಭಾರತದ ಸಾರ್ವಭೌಮತ್ವ ಉಲಂಘಿಸುವ ಪಾಕ್ ಯತ್ನ ಒಪ್ಪಲು ಸಾಧ್ಯವಿಲ್ಲ. ಭಾರತದ ನಾಗರಿಕರಿಗೆ ಅಪಾಯ ತರುವ ಪಾಕ್ ಯತ್ನ ಒಪ್ಪಲ್ಲ. ಭಾರತದ ಆರ್ಮಿ, ವೈರಿಯ ಯತ್ನವನ್ನು ವಿಫಲಗೊಳಿಸುತ್ತೆ ಎಂದು ಸೇನೆ ತಿಳಿಸಿದೆ. ಮಾಹಿತಿಗಳ ಪ್ರಕಾರ ಕಳೆದ ರಾತ್ರಿ ಭಾರತದ ಮೇಲೆ 15ಕ್ಕೂ ಹೆಚ್ಚು ಡ್ರೋಣ್ಗಳನ್ನು ಉಡಾಯಿಸಿದೆ. ಜೊತೆಗೆ ಲಾಂಗ್ ರೇಂಜ್ ಮಿಸೈಲ್ಗಳನ್ನೂ ಬಳಸಿದೆ. ಇನ್ನು ಪಾಕ್ ಸೇನೆ ನಿನ್ನೆಯೂ ಭಾರತದ ಮೇಲೆ ದಾಳಿಗೆ ಯತ್ನಿಸಿತ್ತು. ಆದರೆ ಪಾಕಿಸ್ತಾನದ ಎಲ್ಲಾ ಪ್ರಯತ್ನವನ್ನೂ ಭಾರತ ವಿಫಲಗೊಳಿಸುತ್ತ ಬಂದಿದೆ. ಪ್ರತಿಯಾಗಿ ಭಾರತ ಲಾಹೋರ್ ಹಾಗೂ ಕರಾಚಿಯಲ್ಲಿರುವ ವಾಯುನೆಲೆಗಳ ಮೇಲೆ ಭಾರತ ಭಾರತ ದಾಳಿ ಮಾಡಿ ಧ್ವಂಸ ಮಾಡಿದೆ.



