ಜನ ಮನದ ನಾಡಿ ಮಿಡಿತ

Advertisement

ಪಾಕ್ ವಿರುದ್ಧ ಮತ್ತೆ ಗುಡುಗಿದ ಭಾರತೀಯ ಸೇನೆ.. ಇದೀಗ ಬಂದ ಅಧಿಕೃತ ಮಾಹಿತಿ ಏನು..?

ಉಗ್ರ ಪಾಕಿಸ್ತಾನ ಈ ಜನ್ಮದಲ್ಲಿ ಬುದ್ಧಿ ಕಲಿಯುವ ಲಕ್ಷಣ ಕಾಣ್ತಿಲ್ಲ ಮತ್ತೆ ಮತ್ತೆ ನಮ್ಮ ಭಾರತೀಯ ಸೇನೆಯನ್ನು ಕೆಣಕಲು ಬರುತ್ತಿದೆ. ಪಂಜಾಬ್‌ನ ಅಮೃತ ಸರದ ಮೇಲೆ ಮತ್ತೆ ದಾಳಿಗೆ ಯತ್ನಿಸಿರುವ ಬಗ್ಗೆ ಭಾರತೀಯ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ.

 

ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊAಡಿರುವ ಸೇನೆ.. ಇಂದು ಮುಂಜಾನೆ 5 ಗಂಟೆಯಲ್ಲಿ ಪಾಕ್‌ನಿಂದ ನಮ್ಮ ಮೇಲೆ ಡ್ರೋಣ್ ದಾಳಿಗೆ ಯತ್ನಿಸಿದೆ. ಅಮೃತಸರದ ಕಂಟೋನ್ಮೆAಟ್ ಮೇಲೆ ಡ್ರೋಣ್ ದಾಳಿಯಾಗಿತ್ತು. ಕೂಡಲೇ ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ಆ ಡ್ರೋಣ್‌ಗಳನ್ನು ಹೊಡೆದು ಹಾಕಿದೆ. ಭಾರತದ ಸಾರ್ವಭೌಮತ್ವ ಉಲಂಘಿಸುವ ಪಾಕ್ ಯತ್ನ ಒಪ್ಪಲು ಸಾಧ್ಯವಿಲ್ಲ. ಭಾರತದ ನಾಗರಿಕರಿಗೆ ಅಪಾಯ ತರುವ ಪಾಕ್ ಯತ್ನ ಒಪ್ಪಲ್ಲ. ಭಾರತದ ಆರ್ಮಿ, ವೈರಿಯ ಯತ್ನವನ್ನು ವಿಫಲಗೊಳಿಸುತ್ತೆ ಎಂದು ಸೇನೆ ತಿಳಿಸಿದೆ. ಮಾಹಿತಿಗಳ ಪ್ರಕಾರ ಕಳೆದ ರಾತ್ರಿ ಭಾರತದ ಮೇಲೆ 15ಕ್ಕೂ ಹೆಚ್ಚು ಡ್ರೋಣ್‌ಗಳನ್ನು ಉಡಾಯಿಸಿದೆ. ಜೊತೆಗೆ ಲಾಂಗ್ ರೇಂಜ್ ಮಿಸೈಲ್‌ಗಳನ್ನೂ ಬಳಸಿದೆ. ಇನ್ನು ಪಾಕ್ ಸೇನೆ ನಿನ್ನೆಯೂ ಭಾರತದ ಮೇಲೆ ದಾಳಿಗೆ ಯತ್ನಿಸಿತ್ತು. ಆದರೆ ಪಾಕಿಸ್ತಾನದ ಎಲ್ಲಾ ಪ್ರಯತ್ನವನ್ನೂ ಭಾರತ ವಿಫಲಗೊಳಿಸುತ್ತ ಬಂದಿದೆ. ಪ್ರತಿಯಾಗಿ ಭಾರತ ಲಾಹೋರ್ ಹಾಗೂ ಕರಾಚಿಯಲ್ಲಿರುವ ವಾಯುನೆಲೆಗಳ ಮೇಲೆ ಭಾರತ ಭಾರತ ದಾಳಿ ಮಾಡಿ ಧ್ವಂಸ ಮಾಡಿದೆ.

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!