ಜನ ಮನದ ನಾಡಿ ಮಿಡಿತ

Advertisement

ಬೇಲೂರು; ಅಗ್ನಿ ಶಾಮಕ ಠಾಣೆ ಇದ್ದರು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ

ಅಗ್ನಿ ಶಾಮಕ ಠಾಣೆ ಇದ್ದರು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಎಲ್ಲಿ ಬೆಂಕಿ ಅವಘಡ ಸಂಬAಧಿಸಿದರೆ ತುರ್ತಾಗಿ ಅಲ್ಲಿಗೆ ಅಗ್ನಿಶಾಮಕ ವಾಹನಗಳು ಹಾಜರಿ ಇರುತ್ತವೆ.

ಆದರೆ ಇಲ್ಲಿ ಸಿಬ್ಬಂದಿಗಳಿಗೆ ಸಂಕಷ್ಟ ಅನುಭವಿಸುತ್ತಿರುವ ಸ್ಥಿತಿ ಒದಗಿ ಬಂದಿದೆ. ತಾಲೂಕಿಗೆ ಅತಿ ತುರ್ತಾಗಿ ಅಗ್ನಿಶಾಮಕ ಠಾಣೆ ಬೇಕೆಂದು ಹಲವಾರು ಬಾರಿ ರೈತ ಸಂಘ ಹಾಗು ಸಂಘಟನೆಗಳ ಹೋರಾಟದ ಪಲವಾಗಿ 2009ರಲ್ಲಿ ಶಾಸಕ ರುದ್ರೇಶಗೌಡರ ನೇತೃತ್ವದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಮಾಡಲಾಗಿತ್ತು ಹಾಗು ಸಿಬ್ಬಂದಿಗಳಿಗೆ ವಸತಿ ನಿಲಯವನ್ನು ನಿರ್ಮಾಣ ಮಾಡಿ ಸುಮಾರು 21 ಕುಟುಂಬಗಳಿಗೆ ವ್ಯವಸ್ಥೆ ಮೂಲಭೂತ ಸೌಕರ್ಯಗಳನ್ನು ನೀಡಲಾಗಿತ್ತು. ಕುಡಿಯುವ ನೀರಿಗೆ ಬೋರವೆಲ್ ಹಾಗು ತೊಳಲು ಗ್ರಾಪಂ ನಿಂದ ಕುಡಿಯೊ ನೀರಿನ ವ್ಯವಸ್ಥೆಯನ್ನು ಒದಗಿಸಲಾಗಿತ್ತು.ಆದರೆ ದಿನ ಕಳೆದಂತೆ ಬೋರ್ ವೆಲ್ ಕಾರ್ಯನಿರತವಹಿಸದೆ ಸಂಪೂರ್ಣ ಜೀವಜಲ ನಿಂತು ಹೋಗಿದ್ದು ಅಲ್ಲಿಯ ನಿವಾಸಿಗಳಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ.ಇನ್ನು 2 ಅಗ್ನಿ ಶಾಮಕ ವಾಹನ ನೀಡಿದ್ದರೂ 15 ವರ್ಷ ಹಳೆಯದಾದ ಒಂದು ಅಗ್ನಿ ಶಾಮಕ ವಾಹನ ನೀಡಿದ್ದು ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಯಾವುದೇ ರೀತಿಯಲ್ಲಿ ಅಗ್ನಿ ಅವಘಡ ಸಂಬವಿಸಿದರೆ ಪಕ್ಕದ ತಾಲೂಕಿನಿಂದ ವಾಹನಗಳನ್ನು ತರುವ ಸ್ಥಿತಿ ಕೇವಲ ಒಂದೇ ವಾಹನದಲ್ಲಿ ಬೆಂಕಿ ನಲ್ಲಿಸುವ ಕಾರ್ಯವನ್ನು ಮಾಡುವ ಸ್ಥಿತಿ ಇದ್ದು ನಿಮಾಣವಾಗಿದೆ.ಇನ್ನು ಬೋರ್ ವೆಲ್ ನಿಂತಿರುವುದರಿAದ ನೀರನ್ನು ಭರ್ತಿ ಮಾಡಲು ಯಗಚಿ ಜಲಾಶಯ ಹಾಗು ವಿಷ್ಣು ಸಮುದ್ರ ಕೆರೆ ಅಲ್ಲಿ ವಾಹನವನ್ನು ಭರ್ತಿ ಮಾಡುವ ಸನ್ನಿವೇಶ ನಿರ್ಮಾಣ ವಾಗಿದೆ.ಕೂಡಲೆ ಇವುಗಳಿಗೆ ಪರಿಹಾರ ನೀಡುವಂತೆ ಸ್ಥಳೀಯರು ಹಾಗೂ ಸಂಘಟನೆಯ ಮುಖಂಡರು ಮನವಿ ಮಾಡಿದ್ರು. ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಧರ್ಮಯ್ಯ, ನಮಗೆ ಇಲಾಖೆಯಿಂದ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಎರಡು ಬೋರ್ ವೆಲ್ ನೀಡಿದ್ದರೂ ಎರಡು ಸಹ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿದೆ.ಎರಡು ದಿನಗಳಿಗೊಮ್ಮೆ ಗ್ರಾಪಂಯಿAದ ನೀರನ್ನು ಒದಗಿಸುತ್ತಾರೆ.ಅದು ಸಹ ಸಾಲದಂತ ಪರಿಸ್ಥಿತಿ ನಿಮಾಣವಾಗಿದೆ.ನಮ್ಮ ಮೇಲಾಧಿಕಾರಿ ಹಾಗು ಶಾಸಕರಲ್ಲಿ ಈಗಾಗಲೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಡಿ ಎಂದು ಮನೆಗೆ ಮಾಡಲಾಗಿದೆ ಎಂದ್ರು.

 

 

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!