ಭಾರತದ ತಾಕತ್ತು ಈಗ ಇಡೀ ಜಗತ್ತಿಗೆ ಗೊತ್ತಾಗಿದೆ. ಕ್ಯಾತೆ ತೆಗೆದ ವೈರಿ ರಾಷ್ಟ್ರಕ್ಕೆ ಭಾರತ ಆತ್ಮನಿರ್ಭರದ ಅಸ್ತ್ರಗಳಿಂದಲೇ ಮುಟ್ಟಿ ನೋಡಿಕೊಳ್ಳುವ ಪೆಟ್ಟು ಕೊಡಲಾಗಿದೆ. ಭಾರತ ದೇಶಕ್ಕಾಗಿ ಹೋರಾಡಿದ ರೀತಿ ಕಂಡು ಅಮೆರಿಕಾ, ಚೀನಾದಂತಹ ದೈತ್ಯ ರಾಷ್ಟ್ರಗಳೇ ದಂಗಾಗಿ ಹೋಗಿವೆ.
ಆಪರೇಷನ್ ಸಿಂಧೂರ ಬಳಿಕ ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಭಾರೀ ಬೇಡಿಕೆ ಬಂದಿದೆ. ಬ್ರಹ್ಮೋಸ್ ಕ್ಷಿಪಣಿ ಪಾಕ್ ಏರ್ ಬೇಸ್, ಉಗ್ರ ನೆಲೆಯನ್ನ ಛಿದ್ರ, ಛಿದ್ರ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಭಾರತದ ಬ್ರಹ್ಮೋಸ್ ಕ್ಷಿಪಣಿಗಾಗಿ ಜಗತ್ತಿನ 17 ದೇಶಗಳಿಂದ ಈಗ ಬೇಡಿಕೆ ಬಂದಿದೆ. ಭೂಮಿಯ ಮೇಲಿನ ಅತ್ಯಂತ ವೇಗದ ಕ್ರೂಸ್ ಮಿಸೈಲ್ ಬ್ರಹ್ಮೋಸ್ ಭೂಮಿ, ಸಮುದ್ರ, ವಾಯು ನೆಲೆಯಿಂದ ನಿಖರವಾದ ದಾಳಿ ಮಾಡುತ್ತೆ ಭಾರತದ ಬ್ರಹ್ಮಾಸ್ತ್ರ ಅಂತಲೇ ಕರೆಸಿಕೊಳ್ಳುವ ಬ್ರಹ್ಮೋಸ್ ಬರೋಬ್ಬರಿ 800 ಕಿಲೋ ಮೀಟರ್ ರೇಂಜ್ ಹೊಂದಿದ್ದು, ನಿಮಿಷಗಳಲ್ಲಿ 300 ಕಿಲೋ ಮೀಟರ್ ಸಾಗುವ ಸಾಮರ್ಥ್ಯವಿದೆ.
ಒಂದೇ ಸಾರಿ 300 ಕೆಜಿಯ ಸ್ಫೋಟಕ ಹೊತ್ತೊಯ್ಯಬಲ್ಲ ಸಾಮರ್ಥ್ಯವಿದ್ದು, ಜಿಪಿಎಸ್ ಆಧಾರಿತ ಗೈಡೆಡ್ ಸಿಸ್ಟಮ್ ಬ್ರಹ್ಮೋಸ್ನಲ್ಲಿದೆ. ಇನ್ನೂ ವಿಶೇಷ ಏನಂದ್ರೆ ಸ್ವಯಂ ರಕ್ಷಣೆಯ ಸಿಗ್ನಲ್ ಜಾಮಿಂಗ್ ವ್ಯವಸ್ಥೆ ಕೂಡ ಬ್ರಹ್ಮೋಸ್ನಲ್ಲಿದೆ. 8.4 ಮೀಟರ್ ಉದ್ದ, 6 ಮೀಟರ್ ಅಗಲವಿರೋ ಮಿಸೈಲ್ ಗುರಿಯಿಟ್ರೆ ಟಾರ್ಗೆಟ್ ಮಿಸ್ಸೇ ಆಗಲ್ಲ. ಬ್ರಹ್ಮೋಸ್ನಲ್ಲಿ ಸ್ಟೆಲ್ತ್ ಫೀಚರ್ ಇದ್ದು, ರಾಡಾರ್ ಕಣ್ಣಿಗೆ ಬೀಳುವ ಸಾಧ್ಯತೆ ಕಡಿಮೆ ಮಾಡುವ ರೀತಿಯಲ್ಲಿ ಕ್ಷಿಪಣಿಯನ್ನ ಅಭಿವೃದ್ಧಿ ಪಡಿಸಲಾಗಿದೆ. ಶತ್ರುದೇಶದ ರಾಡಾರ್ನಲ್ಲೇ ಸಾಗಿ ನಿಶ್ಚಿತ ಗುರಿಯನ್ನ ಈ ಬ್ರಹ್ಮೋಸ್ ಹೊಡೆದುರುಳಿಸುತ್ತೆ. ನೀರು ನೆಲ ಆಕಾಶ ಮಾತ್ರವಲ್ಲ ಹಡಗು, ಪೈಟರ್ ಜೆಟ್, ಸಬ್ ಮರೀನ್ ಮೂಲಕ ಹೇಗ್ ಬೇಕಾದ್ರೂ ದಾಳಿ ನಡೆಸಬಹುದು. ಬ್ರಹ್ಮೋಸ್ ಹೆಸರು ಹೇಗೆ ಬಂತು ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕವಾ ನದಿಗಳ ಹೆಸರಿನಿಂದ ಇದಕ್ಕೆ ಬ್ರಹ್ಮೋಸ್ ಅಂತ ಹೆಸರಿಡಲಾಗಿದೆ. ಇದು ಭಾರತ ಹಾಗೂ ರಷ್ಯಾದ ಸ್ನೇಹ ಸಂಬAಧಕ್ಕೆ ಉದಾಹರಣೆಯಾಗಿದೆ. ಈ ಕ್ಷಿಪಣಿಯ ಪರಿಕಲ್ಪನೆಯು 1990ರ ದಶಕದಲ್ಲಿ ರೂಪುಗೊಂಡಿತ್ತು.
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…
ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ಸಮೀಪದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟದಲ್ಲಿ ಕನಿಷ್ಠ 32 ಕಾರ್ಮಿಕರು…
ಬೀರತಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರತಮ್ಮನಹಳ್ಳಿ ಕೆರೆಗೆ ಕಿಡಿಗೇಡಿಗಳು ಕ್ರಿಮಿನಾಶಕ ವಸ್ತು ಹಾಕಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳ…
ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರು ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ…