ತಂದೆಯ ಮೇಲಿನ ದ್ವೇಷಕ್ಕೆ ಮಕ್ಕಳ ಮೇಲೆ ಕಾರು ಹರಿಸಿ ಕೊಲ್ಲಲು ಯತ್ನಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿ ನಡೆದಿದೆ. ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮೂವರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಮಕ್ಕಳನ್ನು ಶಿವಾನಿ. ಸ್ನೇಹಾ, ಕೃಷ್ಣ ಎಂದು ಗುರುತಿಸಲಾಗಿದೆ. ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಗೋವಿಂದ ಯಾದವ್ ನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಮಕ್ಕಳ ತಂದೆ ವೀರೇಂದ್ರ ಅಲಿಯಾಸ್ ಸೀತಾರಾಮ್ ಜೊತೆಗೆ ವೈಯಕ್ತಿಕ ದ್ವೇಷವಿದ್ದುದರಿಂದ, ಆರೋಪಿಯು ಈ ಕೃತ್ಯ ಎಸಗಿದ್ದಾನೆ.
#लखनऊ
— Knews (@Knewsindia) July 18, 2023
तीन मासूम बच्चों पर चढ़ाई कार
आरोपी ने तीनों की हत्या करने की कोशिश
पिता से पुरानी रंजिश में आरोपी गोविंद यादव ने तीनों बच्चों को मारी टक्कर
8 वर्षीय शिवानी, 5 वर्षीय स्नेहा और मासूम कृष्णा गंभीर रूप से घायल
पुलिस ने आरोपी गोविंद यादव को किया गिरफ्तार
मलिहाबाद के… pic.twitter.com/djO5Rwjh9w



