ಅಂತಾರಾಷ್ಟ್ರೀಯ

ಆಪರೇಶನ್ ಸಿಂದೂರ್: ಆಧುನಿಕ ಯುದ್ಧದಲ್ಲಿ ನಿರ್ಣಾಯಕ ಜಯ

ಅಪರೇಷನ್ ಸಿಂದೂರ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ ಎಂದು ಭಾರತ ಇನ್ನೂ ಘೋಷಿಸಿಲ್ಲ. ಈಗ ಆಗಿರುವುದೆಂದರೆ ಕಾರ್ಯಾಚರಣೆಗಳಿಗೆ ಸೂಕ್ಷ್ಮ ವಿಶ್ರಾಂತಿ ದಕ್ಕಿದೆ ಅಷ್ಟೇ – ಕೆಲವರು ಇದನ್ನು ಕದನವಿರಾಮ ಎಂದು ಕರೆಯಬಹುದು, ಆದರೆ ಸೇನೆಯ ನಾಯಕರಾದವರು ಈ ಶಬ್ದವನ್ನು ಉಲ್ಲೇಖಿಸುವುದನ್ನು ತಪ್ಪಿಸುತ್ತಿದ್ದಾರೆ. ಸಮರ ನಡೆಸುವ ದೃಷ್ಟಿಯಿಂದ ಗಮನಿಸಿದರೆ, ಇದು ಕೇವಲ ವಿರಾಮ ಅಥವಾ ಸ್ಥಗಿತವಲ್ಲ; ಇದು ಅಪರೂಪದ ಮತ್ತು ನಿಸ್ಸಂದಿಗ್ಧವಾಗಿಯೂ ಸೇನೆಯ ಜಯದ ನಂತರದ ವ್ಯೂಹಾತ್ಮಕ ಹಿಡಿತವಾಗಿದೆ.

ನಿಖರವಾದ ಸೇನಾ ಕಾರ್ಯಾಚರಣೆಯು ನಾಲ್ಕು ದಿನಗಳ ನಂತರ, ಅದು ತನ್ನ ಉದ್ದೇಶ ಸಾಧನೆಯಲ್ಲಿ ಪೂರ್ಣಗೊಂಡಿದೆ. ಭಾರತ ಭಾರೀ ಗೆಲುವನ್ನು ಸಾಧಿಸಿದೆ. ಆಪರೇಶನ್ ಸಿಂದೂರ ತನ್ನ ವ್ಯೂಹಾತ್ಮಕ ಗುರಿಗಳನ್ನು ಸಾಧಿಸಿದ್ದು ಮಾತ್ರವಲ್ಲ ಅದನ್ನೂ ಮೀರಿದ ಸಾಧನೆ ಮಾಡಿದೆ. ಭಯೋತ್ಪಾದಕರ ಮೂಲಸೌಕರ್ಯಗಳನ್ನು ನಾಶ ಮಾಡಿದೆ, ಸೇನಾ ಹಿರಿಮೆಯನ್ನು ತೋರಿಸಿದೆ, ನಿರೋಧಕತ್ವವನ್ನು ಪುನಸ್ಥಾಪಿಸಿದೆ ಮತ್ತು ಹೊಸ ರಾಷ್ಟ್ರೀಯ ಭದ್ರತಾ ಸಿದ್ಧಾಂತವನ್ನು ಅನಾವರಣ ಮಾಡಿದೆ. ಇದು ಸಾಂಕೇತಿತ ಶಕ್ತಿ ಅಲ್ಲ. ಇದು ನಿರ್ಣಯಾತ್ಮಕ ಶಕ್ತಿ, ಸ್ಪಷ್ಟವಾಗಿ ಅನ್ವಯಿಕವಾದುದು. 2025 ರ ಏಪ್ರಿಲ್ 22ರಂದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಭಾರತೀಯ ನಾಗರಿಕರನ್ನು, ಹೆಚ್ಚಾಗಿ ಹಿಂದೂ ಪ್ರವಾಸಿಗರನ್ನು ಹತ್ಯೆ ಮಾಡಲಾಯಿತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಅಂಗಸAಸ್ಥೆಯಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತುಕೊಂಡಿತು. ದಶಕಗಳಿಂದ ಈ ಗುಂಪು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಬೆಂಬಲಿತವಾಗಿದೆ. ಆದರೆ ಭಾರತದ ನಿಲುವು ಈ ಬಾರಿ ಹಿಂದಿನ ದಾಳಿಗಳಿಗಿಂತ ಭಿನ್ನವಾಗಿತ್ತು, ಈ ಬಾರಿ ಭಾರತ ಕಾಯಲಿಲ್ಲ. ಅದು ಅಂತರರಾಷ್ಟ್ರೀಯ ಮಧ್ಯಸ್ಥಿಕೆಗೆ ಮನವಿ ಮಾಡಲಿಲ್ಲ ಅಥವಾ ರಾಜತಾಂತ್ರಿಕ ಕ್ರಮಗಳಿಗೆ ಮನವಿ ಮಾಡಲಿಲ್ಲ. ಅದು ಯುದ್ಧ ವಿಮಾನಗಳನ್ನು ಕಳುಹಿಸಿತು. ಮೇ 7 ರಂದು, ಭಾರತವು ಸಿಂದೂರ ಕಾರ್ಯಾಚರಣೆಯನ್ನು ಆರಂಭ ಮಾಡಿತು , ಇದು ತ್ವರಿತವಾಗಿ ಮತ್ತು ಖಚಿತವಾಗಿ ನಿಖರ ಗುರಿಯೊಂದಿಗೆ ಕೈಗೊಂಡ ಸೇನಾ ಅಭಿಯಾನವಾಗಿದೆ. ಭಾರತೀಯ ವಾಯುಪಡೆಯು ಪಾಕಿಸ್ತಾನದ ಒಳಗೆ ನುಗ್ಗಿ 9 ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿ ಇಟ್ಟು ನಾಶ ಮಾಡಿತು, ಜೈಸ್ಹ್-ಇ-ಮಹ್ಮದ್ ಮತ್ತು ಲಷ್ಕರ್-ಇ-ತೈಬಾಗಳ ಕೇಂದ್ರ ಕಚೇರಿಗಳು, ಕಾರ್ಯಾಚರಣಾ ತಾಣಗಳು ಇದರಲ್ಲಿ ಸೇರಿವೆ. ಸಂದೇಶ ಬಹಳ ಖಚಿತವಾಗಿತ್ತು: ಪಾಕಿಸ್ತಾನದ ನೆಲದ ಮೇಲಿನಿಂದ ಆರಂಭವಾದ ಉಗ್ರರ ದಾಳಿಗಳು ಇದೀಗ ಯುದ್ಧದ ಕೃತ್ಯಗಳಾಗಿ ಪರಿಗಣಿತವಾಗುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ತತ್ವ ಸಿದ್ಧಾಂತವನ್ನು ಯಾವುದೇ ತಪ್ಪುಗಳಿಲ್ಲದೇ ಸುಸ್ಪಷ್ಟವಾಗಿ ಮಂಡಿಸಿದ್ದಾರೆ: “ಭಾರತ ಪರಮಾಣು ಅಸ್ತ್ರದ ಬೆದರಿಕೆಯನ್ನು ಅಂದರೆ ಅದರ ಹೆಸರಿನಲ್ಲಿ ಮಾಡುವ ಬ್ಲ್ಯಾಕ್ ಮೇಲ್ ನ್ನು ಸಹಿಸುವುದಿಲ್ಲ. ಅಣ್ವಸ್ತ್ರದ ಬ್ಲ್ಯಾಕ್ ಮೇಲ್ ನಡಿಯಲ್ಲಿ ಮತ್ತು ಅದರ ಹೆಸರಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಉಗ್ರವಾದಿಗಳ ಅಡಗುದಾಣಗಳ ಮೇಲೆ ಭಾರತ ನಿಖರವಾಗಿ ಮತ್ತು ನಿರ್ಣಾಯಕವಾಗಿ ದಾಳಿ ಮಾಡುತ್ತದೆ.” ಇದು ವ್ಯೂಹಾತ್ಮಕ ಸಿದ್ಧಾಂತದ ಅನಾವರಣ. ಮೋದಿಯವರು ಹೇಳಿದಂತೆ, “ಉಗ್ರವಾದ ಮತ್ತು ಮಾತುಕತೆ ಜೊತೆಯಾಗಿ ಸಾಗಲಾರದು. ನೀರು ಮತ್ತು ರಕ್ತ ಜೊತೆಯಾಗಿ ಹರಿಯಲಾಗದು.” ಮೇ 7ರಂದು ಪಾಕಿಸ್ತಾನದ ಭೂಭಾಗದ ಒಳಗೆ ಒಂಬತ್ತು ನಿಖರವಾದ ಗುರಿಗಳನ್ನು ಕೇಂದ್ರೀಕರಿಸಿ ದಾಳಿಗಳನ್ನು ನಡೆಸಲಾಯಿತು. ಗುರಿಗಳಲ್ಲಿ ಬಹಾವಲ್ಪುರ, ಮುರಿಡ್ಕೆ, ಮುಜಾಫರಾಬಾದ್ ಮತ್ತು ಇತರ ಸ್ಥಳಗಳಲ್ಲಿಯ ಪ್ರಮುಖ ಉಗ್ರವಾದಿ ತರಬೇತಿ ಶಿಬಿರಗಳು ಮತ್ತು ಸಾರಿಗೆ ಕೇಂದ್ರಗಳು ಒಳಗೊಂಡಿದ್ದವು. ಮೇ 8ರಂದು ಪಾಕಿಸ್ತಾನವು ಭಾರತದ ಪಶ್ಚಿಮ ರಾಜ್ಯಗಳಲ್ಲಿ ಭಾರೀ ಡ್ರೋನ್ ದಾಳಿಯೊಂದಿಗೆ ಪ್ರತಿಕ್ರಿಯಿಸಿತು. ಭಾರತದ ಬಹು-ಸ್ತರದ ವಾಯು ರಕ್ಷಣಾ ಜಾಲ ದೇಶೀಯವಾಗಿ ನಿರ್ಮಿಸಲಾದುದು ಮತ್ತು ಇಸ್ರೇಲ್ ಹಾಗು ರಷ್ಯಾದ ವ್ಯವಸ್ಥೆಗಳ ಮೂಲಕ ಸಂಯೋಜಿಸಿದುದು ಅವೆಲ್ಲವನ್ನೂ ನಿಷ್ಕ್ರಿಯಗೊಳಿಸಿತು. ಮೇ 9 ರಂದು ಭಾರತವು ಆರು ಪಾಕಿಸ್ತಾನಿ ಮಿಲಿಟರಿ ವಾಯುನೆಲೆಗಳ ಮೇಲೆ ಮತ್ತು ಯು.ಎ.ವಿ. ಸಮನ್ವಯ ತಾಣಗಳ ಮೇಲೆ ಇನ್ನಷ್ಟು ದಾಳಿಗಳನ್ನು ನಡೆಸಿತು. ಮೇ 10 ರಂದು ಗುಂಡು ಹಾರಿಸುವ, ದಾಳಿಯ ಕಾರ್ಯಾಚರಣೆಗಳಿಗೆ ತಾತ್ಕಾಲಿಕ ನಿಲುಗಡೆ ನೀಡಲಾಯಿತು. ಭಾರತ ಇದನ್ನು ಕದನ ವಿರಾಮ ಎಂದು ಕರೆಯಲಿಲ್ಲ. ಭಾರತೀಯ ಸೇನೆ ಇದನ್ನು ದಾಳಿಯ ಸ್ಥಾಗಿತ್ಯ (ಸ್ಟಾಪೇಜ್ ಆಫ್ ಫೈರಿಂಗ್) ಎಂದು ಉಲ್ಲೇಖಿಸಿತು – ಇದು ಪರಿಸ್ಥಿತಿಯ ಮೇಲೆ ವ್ಯೂಹಾತ್ಮಕ ನಿಯಂತ್ರಣವನ್ನು ಸಾಧಿಸುವ ಅರ್ಥಪೂರ್ಣ ಮತ್ತು ಉದ್ದೇಶಪೂರ್ವಕ ಆಯ್ಕೆಯಾಗಿತ್ತು. ಇದು ಕೇವಲ ತಂತ್ರಾತ್ಮಕ ಯಶಸ್ಸು ಮಾತ್ರವಲ್ಲ. ಇದು ಯುದ್ಧಭೂಮಿಯಲ್ಲಿ ಬೆಂಕಿ ಉಗುಳುತ್ತಿರುವಾಗಲೇ ತನ್ನ ತತ್ವ ಸಿದ್ಧಾಂತವನ್ನು ಜಾರಿ ಮಾಡುವ ಮಾದರಿ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ…

2 days ago

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ…

2 days ago

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…

3 days ago

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…

3 days ago

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…

3 days ago

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…

3 days ago