ಸಾದಾತ್ ಮದಾರಿ ಫೌಂಡೇಶನ್ (ರಿ) ಅಧೀನದ ಸಾದಾತ್ ವಲಿಯ್ಯ್ ಝಿಕ್ರ್ ಸ್ವಲಾತ್ ಮಜ್ಲಿಸ್ ಇದರ 21ನೇ ವಾರ್ಷಿಕ ಸಾಮೂಹಿಕ ವಿವಾಹ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ಮುಲ್ಕಿ ಕೆರೆಕಾಡು ಸಾದಾತ್ ಮಂಝಿಲ್ನಲ್ಲಿ ನಡೆಯಿತು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ಸಾಮೂಹಿಕ ವಿವಾಹ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ರು. ಎನ್.ಪಿ.ಎಮ್ ಜಲಾಲುದ್ದೀನ್ ತಂಙಳ್ ಈಶ್ವರಮಂಗಳ ದುಅ ನೆರವೇರಿಸಿದ್ದಾರೆ. ಸಾದಾತ್ ಮದಾರಿ ಫೌಂಡೇಶನ್ (ರಿ) ಪ್ರ.ಕಾರ್ಯದರ್ಶಿ ಇರ್ಷಾದ್ ಕೆರೆಕಾಡು ಟ್ರಸ್ಟ್ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ್ರು. ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಸೌಹಾರ್ದ ಭಾಷಣ ಮಾಡಿದ್ದಾರೆ.



