ಜನ ಮನದ ನಾಡಿ ಮಿಡಿತ

ಮಂಗಳೂರು: ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಸರ್ವಪಕ್ಷಗಳ ನಿಯೋಗಕ್ಕೆ ಆಯ್ಕೆ

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ಕೇಂದ್ರ ಸರ್ಕಾರ ಅಂತಿಮಗೊಳಿಸಿದ ಸರ್ವ ಪಕ್ಷಗಳ ನಿಯೋಗಕ್ಕೆ ದಕ್ಷಿಣ ಕನ್ನಡದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟದ ಈ ನಿಯೋಗಕ್ಕೆ ಕ್ಯಾ. ಚೌಟ ಅವರು ನೇಮಕವಾಗಿರುವುದನ್ನು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ. ಕ್ಯಾ. ಚೌಟ ಒಳಗೊಂಡಂತೆ ವಿಶ್ವ ವೇದಿಕೆಯ ಈ ನಿಯೋಗದಲ್ಲಿ ಕರ್ನಾಟಕದಿಂದ ಇಬ್ಬರು ಸಂಸದರು ಆಯ್ಕೆ ಆಗಿದ್ದಾರೆ. ಅದರಲ್ಲೂ ಕರಾವಳಿ ಕರ್ನಾಟಕದಿಂದ ಕ್ಯಾ. ಚೌಟ ಆಯ್ಕೆಯಾಗಿದ್ದಾರೆ. 59 ಸದಸ್ಯರ ತಂಡವನ್ನು ಒಟ್ಟು ಏಳು ನಿಯೋಗಗಳನ್ನಾಗಿ ಮಾಡಿ ವಿವಿಧ ದೇಶಗಳಿಗೆ ಕಳುಹಿಸಿಕೊಡಲಾಗುತ್ತಿದ್ದು, ಈ ಪೈಕಿ ಡಿಎಂಕೆಯ ಕನಿಮೊಳಿ ನೇತೃತ್ವದ ತಂಡದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಸೇರಿ ಐವರು ಸಂಸದರು ಮೂವರು ಅಧಿಕಾರಿಗಳು ಇರಲಿದ್ದು, ಇವರು ಗ್ರೀಸ್ , ರಷ್ಯಾ, ಸ್ಪೇನ್, ಸ್ಲೊವೇನಿಯ್ ಹಾಗೂ ಲಾಟ್ವಿಯ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಕ್ಯಾ. ಚೌಟ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು “ಭಯೋತ್ಪಾನೆ ವಿರುದ್ದ ಹಾಗೂ ಪಾಕಿಸ್ತಾನ ಮೇಲಿನ ಅಪರೇಷನ್ ಸಿಂದೂರ್ ಬಗ್ಗೆ ಜಗತ್ತಿಗೆ ವಾಸ್ತವ ವಿಚಾರವನ್ನು ತಿಳಿಸುವ ಸರ್ವ ಪಕ್ಷದ ನಿಯೋಗದಲ್ಲಿ ಕ್ಯಾ. ಚೌಟ ಸ್ಥಾನ ಪಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಅತ್ಯಂತ ಖುಷಿಯ ಹಾಗೂ ಹೆಮ್ಮೆಯ ವಿಚಾರ. ಸೇನೆಯಲ್ಲಿದ್ದು ದೇಶ ಸೇವೆ ಮಾಡಿರುವ ಕ್ಯಾ. ಚೌಟ ಅವರ ಆಯ್ಕೆ ಅತ್ಯಂತ ಔಚಿತ್ಯಪೂರ್ಣವಾಗಿದೆ. ಏಕೆಂದರೆ ನಮ್ಮ ದೇಶದ ಸೇನಾಪಡೆಯು ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯುವ ಮೂಲಕ ಭಾರತದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದ್ರು.

Leave a Reply

Your email address will not be published. Required fields are marked *

ಉಡುಪಿ: ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆದ್ರೂ ಡಿಸಿ ಗೈರು

ಮಂಗಳೂರು: ನವಯುಗ ಎಕ್ಸ್ಪ್ರೆಸ್ ಪುನರಾರಂಭಕ್ಕೆ ಆಗ್ರಹ

ಮಂಗಳೂರು: ಇದು ಕಂಡ್ರೋ ನಿಜವಾದ ಹಿಂದೂ-ಮುಸ್ಲಿಂ ಬಾಂಧವ್ಯ

ಮಂಗಳೂರು: ನಂತೂರ್ ಜಂಕ್ಷನ್‌ನಲ್ಲಿ ಮೂರು ದಿಕ್ಕುಗಳಲ್ಲಿ ಎಡಭಾಗಗಳು ಸಿಗ್ನಲ್‌ನಿಂದ ಮುಕ್ತ

ಉಡುಪಿ: ಮಾನವೀಯತೆಯಿಂದ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ ; ನ್ಯಾ.ಸಂತೋಷ್ ಹೆಗ್ಡೆ

ಉಡುಪಿ: ಮರವಂತೆ ಬೀಚ್‌ನಲ್ಲಿ ತಪ್ಪಿದ ಬಾರೀ ದುರಂತ; ಐವರ ರಕ್ಷಣೆ

ಸುಬ್ರಹ್ಮಣ್ಯ: ಗುಂಡ್ಯ ಹೊಳೆಯಲ್ಲಿ ನೀರಲ್ಲಿ ಮುಳುಗಿ ಚೇತನ್ ಮೃತ್ಯು…!!

ಮೈಸೂರು: ಮೋದಿ ಬದುಕಿರುವುದು ಪ್ರಚಾರದಿಂದ; ಸಿಎಂ ಸಿದ್ದರಾಮಯ್ಯ

ಮಂಗಳೂರು: ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದ ಸುಹಾಸ್ ಶೆಟ್ಟಿ ತಾಯಿ

error: Content is protected !!