ಕೇಂದ್ರದಿ0ದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವೆಂದಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮಂಗಳೂರು ಉತ್ತರ ಶಾಸಕ ಭರತ್ ವೈ ಶೆಟ್ಟಿ ಸವಾಲ್ ಹಾಕಿದ್ದಾರೆ.

ಸಿದ್ದರಾಮಯ್ಯ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ದವೆಂದು ಭರತ್ ಶೆಟ್ಟಿ ಹೇಳಿದ್ರು. ಇಡಿ ರಾಜ್ಯದಲ್ಲಿ ಅತೀ ಹೆಚ್ಚು ಜಿಡಿಪಿ ರೇಟ್ ಇರೋದು ಮಂಗಳೂರಿಗೆ. ಬೆಂಗಳೂರು ಬಳಿಕ ಅತೀ ಹೆಚ್ಚು ಟ್ಯಾಕ್ಸ್ ಪೇಮೆಂಟ್ ಆಗೋದು ಮಂಗಳೂರಿನಿ0ದ, ಆದರೆ ಸಿದ್ದರಾಮಯ್ಯ ಮಂಗಳೂರಿಗೆ ಏನು ಕೊಟ್ಟಿದ್ದಾರೆ? ಸುಮ್ಮನೆ ಇಲ್ಲಿ ಬಂದು ಭಾಷಣ ಬಿಟ್ಟು ಓಡೋದು ಅಲ್ಲ. ಬೆಂಗಳೂರು ಬಳಿಕ ಮಂಗಳೂರಿಗೆ ಅತೀ ಹೆಚ್ಚು ಅನುದಾನ ನೀಡಬೇಕಿದೆ. ನಮ್ಮ ಟ್ಯಾಕ್ಸ್ ಹಣವನ್ನ ವಾಪಾಸ್ ಕೇಳಿದ್ದೇವೆ ಅಷ್ಟೇ. ಸಿದ್ದರಾಮಯ್ಯ ಜೊತೆ ಚರ್ಚೆಗೆ ನಾನು ರೆಡಿಯಿದ್ದೇನೆ ಎಂದು ಟಾಂಗ್ ಕೊಟ್ಟಿದ್ದಾರೆ.



