ತೋಟದ ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿ ಬಾಲಕಿ ಸಾವನ್ನಪ್ಪಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿ ಇಂಪನಾ ಕೊಂಡುಗುಳಿ (7) ಪೋಷಕರೊಡನೆ ಮಲಗಿದ್ದಾಗ ತಡರಾತ್ರಿ ಹಾವು ಕಚ್ಚಿದೆ.

ಏನೋ ಕಚ್ಚಿದೆ ಎಂದು ಪೋಷಕರಿಗೆ ತಿಳಿಸಿದ್ದಾಳೆ. ಹುಳು ಕಚ್ಚಿರಬಹುದು ಎಂದು ಮತ್ತೆ ಮಲಗಿಸಿದ್ದಾರೆ. ನಂತರ ರಾತ್ರಿ 3 ಗಂಟೆ ಸುಮಾರಿಗೆ ಬಾಲಕಿ ಇಂಪನಾ ಬಾಯಿಯಿಂದ ನೊರೆ ಬರಲು ಪ್ರಾರಂಭಿಸಿದೆ. ಬಾಯಿ ಊತ ಹೆಚ್ಚಾಗತೊಡಗಿದೆ. ತಕ್ಷಣ ಬಾಲಕಿ ತಂದೆ ಸಂತೋಷ ಅವಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಇಂಪನಾ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ.
ಮೃತಳು ತಂದೆ – ತಾಯಿ, ಸಹೋದರ ಸಹೋದರಿಯರನ್ನು ಅಗಲಿದ್ದಾಳೆ



