ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: `ಹಲಸು ಹಬ್ಬ’ ಮಂಗಳೂರಿನ ಬಾಳಂಬಟ್ಟ ಸಭಾಂಗಣದಲ್ಲಿ ಆರಂಭ

ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಹಲಸು ಹಬ್ಬ ಮಂಗಳೂರಿನ ಬಾಳಂಬಟ್ಟ ಸಭಾಂಗಣದಲ್ಲಿ ಆರಂಭವಾಯಿತು.

ಹಲಸಿನ ಹಣ್ಣಿನಿಂದಾಗುವ ಆರೋಗ್ಯದ ಪರಿಣಾಮಗಳು, ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ಬಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಣ್ಯರ ಗಮನ ಸೆಳೆದ್ರು. ವಿವಿಧ ತಳಿಯ ಹಲಸಿನ ಹಣ್ಣುಗಳು ಮೇಣ ರಹಿತ ಹಲಸು, ಹಲಸಿನ ಹಣ್ಣಿನಿಂದ ತಯಾರಿಸಲಾದ ಹೋಳಿಗೆ, ಹಲಸಿನ ಮಿಲ್ಕ್ ಶೇಕ್, ಹಲಸಿನ ಕಬಾಬ್, ಗಾರಿಗೆ, ಹಲಸಿನ ಮಂಚೂರಿ ಸಹಿತ ವಿವಿಧ ಭಕ್ಷಗಳು ಹಲಸಿನ ಹಬ್ಬಕ್ಕೆ ಭೇಟಿ ನೀಡಿದವರ ಬಾಯ್ರಚಿಯನ್ನು ತಣಿಸುತ್ತಿದ್ದವು. ಹಲಸಿನ ಹಣ್ಣಿನ ಸೊಳೆಗಳನ್ನು ಸುಲಿದು ಮಾರಾಟ ಮಾಡಲಾಗುತ್ತಿತ್ತು. ನಗರದ ಬಹುಮಹಡಿಗಳಲ್ಲಿ ವಾಸವಾಗಿರುವವರಿಗೆ ಹಲಸಿನ ಹಣ್ಣನ್ನು ಸುಲಿಯುವುದು ಬಲು ಕಷ್ಟ. ಜೊತೆಗೆ ಮೇಣ ಇದ್ದರಂತೂ ಅದರ ಉಸಾಬರಿಯೇ ಬೇಡ ಎನ್ನುವವರು ಅಧಿಕ. ಹಲಸಿನ ಹಬ್ಬ ನಗರ ಪ್ರದೇಶದವರಿಗೆ ಹಲಸಿನ ಹಣ್ಣಿನ ರುಚಿ ನೋಡುವ ಅವಕಾಶವನ್ನು ಒದಗಿಸಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!