ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಹಲಸು ಹಬ್ಬ ಮಂಗಳೂರಿನ ಬಾಳಂಬಟ್ಟ ಸಭಾಂಗಣದಲ್ಲಿ ಆರಂಭವಾಯಿತು.
ಹಲಸಿನ ಹಣ್ಣಿನಿಂದಾಗುವ ಆರೋಗ್ಯದ ಪರಿಣಾಮಗಳು, ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ಬಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಣ್ಯರ ಗಮನ ಸೆಳೆದ್ರು. ವಿವಿಧ ತಳಿಯ ಹಲಸಿನ ಹಣ್ಣುಗಳು ಮೇಣ ರಹಿತ ಹಲಸು, ಹಲಸಿನ ಹಣ್ಣಿನಿಂದ ತಯಾರಿಸಲಾದ ಹೋಳಿಗೆ, ಹಲಸಿನ ಮಿಲ್ಕ್ ಶೇಕ್, ಹಲಸಿನ ಕಬಾಬ್, ಗಾರಿಗೆ, ಹಲಸಿನ ಮಂಚೂರಿ ಸಹಿತ ವಿವಿಧ ಭಕ್ಷಗಳು ಹಲಸಿನ ಹಬ್ಬಕ್ಕೆ ಭೇಟಿ ನೀಡಿದವರ ಬಾಯ್ರಚಿಯನ್ನು ತಣಿಸುತ್ತಿದ್ದವು. ಹಲಸಿನ ಹಣ್ಣಿನ ಸೊಳೆಗಳನ್ನು ಸುಲಿದು ಮಾರಾಟ ಮಾಡಲಾಗುತ್ತಿತ್ತು. ನಗರದ ಬಹುಮಹಡಿಗಳಲ್ಲಿ ವಾಸವಾಗಿರುವವರಿಗೆ ಹಲಸಿನ ಹಣ್ಣನ್ನು ಸುಲಿಯುವುದು ಬಲು ಕಷ್ಟ. ಜೊತೆಗೆ ಮೇಣ ಇದ್ದರಂತೂ ಅದರ ಉಸಾಬರಿಯೇ ಬೇಡ ಎನ್ನುವವರು ಅಧಿಕ. ಹಲಸಿನ ಹಬ್ಬ ನಗರ ಪ್ರದೇಶದವರಿಗೆ ಹಲಸಿನ ಹಣ್ಣಿನ ರುಚಿ ನೋಡುವ ಅವಕಾಶವನ್ನು ಒದಗಿಸಿದೆ.
ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ…
ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ…
ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿ, ಇವರ…
ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ…
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿಯಿಂದ ಹಳೇ ಸೇತುವೆ ಕಡೆಗೆ ಸಾಗುವ ದಾರಿಯ…
ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…