ಟೇಬಲ್ ಗುದ್ದಿ ಸುಹಾಸ್ ಶೆಟ್ಟಿ ಮನೆಗೆ ಹೋಗಬಾರದು ಎಂದು ಗೃಹ ಸಚಿವರಿಗೆ ಹಾಕಿದ ಧಮ್ಕಿಗೆ ಹೆದರಿ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕ ಸುಹಾಸ್ ಮನೆಗೆ ಹೋಗಿಲ್ಲ.

ಇಂತಹ ಸರಕಾರ ಕೊಲೆ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಲು ಬಿಡುವುದಿಲ್ಲ. ಇಡೀ ಕಾಂಗ್ರೆಸ್ ಪಕ್ಷ ಬೆನ್ನುಮೂಳೆ ಇಲ್ಲದೇ ಮತಾಂಧರರ ಮುಂದೆ ಮಂಡಿಯೂರಿದೆ ಎಂದು ವಾಗ್ಮಿ ಶ್ರೀಕಾಂತ್ ಶೆಟ್ಟಿ ಹೇಳಿದ್ದಾರೆ. ಅವರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ನೀಡಬೇಕು ಎಂದು ಆಗ್ರಹಿಸಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಹಮ್ಮಿಕೊಂಡಿದ್ದ ಬಜಪೆ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ್ರು. ಮಳೆಯಿಂದ ಬಜಪೆಯ ಮಣ್ಣಿನಿಂದ ಸುಹಾಸ್ ಶೆಟ್ಟಿಯ ರಕ್ತದ ಕಲೆಗಳನ್ನು ಅಳಿಸಲು ಮಾತ್ರ ಸಾಧ್ಯ. ನಮ್ಮ ಎದೆಯಲ್ಲಿ ಉರಿಯುವ ಸೇಡಿನ ಬೆಂಕಿಯನ್ನು ಆರಿಸಲು ಸಾಧ್ಯವಿಲ್ಲ. ಸುಹಾಸ್ ಶೆಟ್ಟಿ ಬಲಿದಾನಕ್ಕೆ ಉತ್ತರವನ್ನು ಎಲ್ಲಿ? ಹೇಗೆ? ಮತ್ತು ಅದು ನಿಮ್ಮದೇ ರೀತಿಯ ಭಾಷೆಯಲ್ಲಿ ಕೊಡಬೇಕು ಎಂಬುದನ್ನು ಹಿಂದೂ ಸಮಾಜ ತೀರ್ಮಾನ ಮಾಡುತ್ತದೆ ಎಂದು ಕಿಡಿಕಾರಿದ್ರು.



