ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ.

ಇದರ ವತಿಯಿಂದ ನಡೆಯುವ ಅಮೃತ ಪ್ರಕಾಶ 44ನೇ ಸರಣಿ ಕೃತಿ ಶ್ರೀಮತಿ ವಜ್ರ ರಾವ್ ಅವರ ಲೇಖನ ಸಂಕಲನ “ಮರೆಯದ ಮಾತುಗಳು” ಕೃತಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಲೇಖಕರು ಹಾಗೂ ಐಸಿಎಎಲ್ ಮಂಗಳೂರು ಇದರ ಮಾಜಿ ಚೀಯರ್ಮಾನ್ ಎಸ್.ಎಸ್. ನಾಯಕ್ ಕೃತಿ ಉದ್ಘಾಟನೆ ಮಾಡಿ ಮಾತನಾಡಿ, ಅಮೃತ ಪ್ರಕಾಶ ಪತ್ರಿಕೆಯ ಮೂಲಕ ಅನೇಕ ಕವಿಗಳ ಪರಿಚಯ ಮತ್ತು ಕೃತಿಗಳ ಲೋಕಾರ್ಪಣೆಯಾಗಿದೆ. ಇಂದು 44 ನೇ ಕೃತಿ ಲೋಕಾರ್ಪಣೆಯಾಗಿದೆ ಈ ಕೃತಿಯಲ್ಲಿ ಕವಿಯ ಅನುಭವನ್ನು ಸರಳವಾಗಿ ಅರ್ಥಭರಿತವಾಗಿ ಹೇಳಲಾಗಿದೆ. ಹಳೆಯ ಆಚಾರ ವಿಚಾರಗಳನ್ನು ಇದರಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರು ಹಾಗೂ ಲೇಖಕರು ಹರಿಕಥಾ ಪರಿಷತ್ (ರಿ), ಮಂಗಳೂರು ಇದರ ಅಧ್ಯಕ್ಷರಾದ ಮಹಾಬಲ ಶೆಟ್ಟಿ ವಹಿಸಿದ್ರು. ಕೃತಿಯ ಲೇಖಕಿ ಶ್ರೀಮತಿ ವಜ್ರಾ ರಾವ್, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಕವಿಯತ್ರಿ ಶಿಕ್ಷಕಿ ಸುರೇಖಾ ಯಾಳವಾರ ಉಪಸ್ಥಿತರಿದ್ರು



