ಜನ ಮನದ ನಾಡಿ ಮಿಡಿತ

Advertisement

ಉಡುಪಿ: ನೀರಿನ ತೋಡಿನಲ್ಲಿ ಹೂಳು..! ಜನಜೀವನ ಅಲ್ಲೋಲ..ಕಲ್ಲೋಲ

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕು ಜೋಡು ರಸ್ತೆ, ಪಿಲಿಚಂಡಿ ಸ್ಥಾನದಲ್ಲಿ ಹರಿಯುವ ನೀರಿನ ತೋಡಿನಲ್ಲಿ ಹೂಳು ತುಂಬಿ ಜನರ ಜೀವನ ಅಲ್ಲೋಲ ಕಲ್ಲೋಲವಾಗಿದೆ.


ಇಲ್ಲಿನ ಪ್ರದೇಶದಲ್ಲಿ ಮಳೆಗಾಲದ ಪೂರ್ವಭಾವಿಯಾಗಿ ಹಲವು ವರ್ಷಗಳಿಂದ ತೋಡಿನ ಹೂಳು ತೆರವುಗೊಳಿಸಲು ಹಲವು ಬಾರಿ ಸೂಚಿಸಲಾಗಿತ್ತು. ಅಲ್ಲದೆ, ಈ ವಿಚಾರವನ್ನು ಮೂರು ವರ್ಷಗಳಿಂದ ಗ್ರಾಮ ಪಂಚಾಯತ್ ಗಮನಕ್ಕೆ ತರಲಾಗಿತ್ತು. ಅದನ್ನು ನಿರ್ಲಕ್ಷಿಸಿದ ಪರಿಣಾಮ ಇಂದು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಭಾಗದಲ್ಲಿ ಹಲವು ವರ್ಷಗಳಿಂದ ತೋಡಿನ ಹೂಳು ಎತ್ತಿಲ್ಲ. ಎರಡು ವರ್ಷಗಳಲ್ಲಿ ನೆರೆ ಬಂದು ಮನೆಯೊಳಗೆ ನೀರು ಪ್ರವೇಶಿಸಿ ಜನರ ಜೀವನ ಪರದಾಡುವಂತಾಗಿತ್ತು, ಅದೇ ರೀತಿ ಈ ಬಾರಿಯೂ ಇಲ್ಲಿನ ಮನೆಗಳಲ್ಲಿ ನೀರು ಹೋಗಿ ಜನರ ಜೀವನ ಅಸ್ತವ್ಯಸ್ತವಾಗಿದೆ.

ಮನೆಯ ಒಳಗೆ ನೀರು ತುಂಬಿ ಜೊತೆಗೆ ಅಪಾರ ವಸ್ತುಗಳು ಹಾನಿಯಾಗಿದೆ. ಸುಮಾರು ಮನೆಯ ಒಳಗೆ ನೀರು ತುಂಬಿದ್ದು, ಮನೆಯ ಮಂದಿಗೆ ಮನೆಯಿಂದ ಹೊರಬರಲೂ ಸಾಧ್ಯವಿಲ್ಲದಂತಾಗಿದೆ. ಈ ಮನೆಯಲ್ಲಿ ಸುಮಾರು ಹದಿನೈದು ಸಣ್ಣ ಸಣ್ಣ ಮಕ್ಕಳೇ ಇದ್ದು, ಮನೆಯು ನೀರಿನಿಂದ ತುಂಬಿ ರಸ್ತೆಯಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಜೀವನ ಜೊತೆಯೂ ಸರಕಾರದ ಆಟ ಎಂಬ0ತೆ ಮನೆ ಹಾಗೂ ಮಕ್ಕಳ ಪಾಡನ್ನು ಕೇಳುವವರಿಲ್ಲ…ಮನೆಯ ಹತ್ತಿರದಲ್ಲಿಯೂ ಯಾವುದೇ ರೀತಿಯ ನೀರು ಹೋಗುವ ವ್ಯವಸ್ಥೆಯಿಲ್ಲದೆ, ರಸ್ತೆ ಬದಿಯಲ್ಲಿ ಮಾತ್ರ ನೀರು ಹೋಗುವ ವ್ಯವಸ್ಥೆಯನ್ನು ಅಳವಡಿಸಿದ್ದಾರೆ.ಮೂರು ವರ್ಷದಿಂದ ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದರೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಈ ಸಾಮಾನ್ಯ ಜನರ ಜೀವನದ ಜೊತೆಗೆ ಚೆಲ್ಲಾಟ ಆಡುವ ಬದಲು ಆದಷ್ಟು ಬೇಗ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿ ಈ ಮೂಲಕ ಗ್ರಾಮಸ್ಥರು ವಿನಂತಿಸಿಕೊ0ಡಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!