ಸಾಲು ಸಾಲು ದುರಂತ ಸಂಭವಿಸಿದರು ಪ್ರವಾಸಿಗರು ಮಾತ್ರ ಎಚ್ಚೆತ್ತೊಕೊಳ್ಳುತ್ತಿಲ್ಲ. ಅಪಾಯದ ಎಚ್ಚರಿಕೆ ಕೊಟ್ರೂ ಡೊಂಟ್ ಕೇರ್ ಎನ್ನದ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಾರೆ. ಇಂತಹ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ಉಡುಪಿಯ ಪ್ರಸಿದ್ಧ ತಾಣ ಮರವಂತೆ ಸಮುದ್ರ ತೀರದಲ್ಲಿ ಸಂಜೆ ಅಲೆಗಳ ಸೆಳೆತಕ್ಕೆ ಸಿಕ್ಕಿ ಸಮುದ್ರ ಪಾಲಾಗುತ್ತಿದ್ದ ಐವರನ್ನು ರಕ್ಷಣೆ ಮಾಡಲಾಗಿದೆ.
ಸೆಲ್ಫಿ ಹುಚ್ಚಿನಲ್ಲಿ ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ನಾಲ್ವರು ಹಾಗೂ ಗೋವಾ ಮೂಲದ ಒರ್ವ ಮಹಿಳೆಯನ್ನ ಲೈಫ್ ಗಾರ್ಡ್ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ. ಲೈಫ್ ಗಾರ್ಡ್ ಪೃಥ್ವಿರಾಜ್ ಒಪ್ಪಂದ, ಪ್ರಮೋದ್ ರಾಜ್ ಒಪ್ಪಂದ, ಬೀಚ್ ಉಸ್ತುವಾರಿ ಸುರೇಶ್ ಕೊಡೇರಿ, ಹಾಗು ಇಬ್ರಾಹಿಂ ಗಂಗೊಳ್ಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ನಂತ ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.