ಜನ ಮನದ ನಾಡಿ ಮಿಡಿತ

ಉಡುಪಿ: ಮಾನವೀಯತೆಯಿಂದ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ ; ನ್ಯಾ.ಸಂತೋಷ್ ಹೆಗ್ಡೆ

ಮಾನವೀಯತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ನೀಡಲಾಗುವ ಪದ್ಮ ವಿಭೂಷಣ ಜಾರ್ಜ್ ಫೆರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಉಡುಪಿ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿ ಅವರು ಮಾತನಾಡಿದ್ರು. ದೇಶದಲ್ಲಿ ಹಗರಣಗಳು ನಡೆಯದಿದ್ದರೆ ದೇಶದ ಆರ್ಥಿಕ ಸ್ಥಿತಿ ಇನ್ನಷ್ಟು ಎತ್ತರಕ್ಕೆ ಹೋಗುತ್ತಿತ್ತು. ಈ ಹಗರಣಗಳಿಂದ ತೊಂದರೆ ಅನುಭವಿಸುವುದು ಸರಕಾರದಿಂದ ಸವಲತ್ತುಗಳನ್ನು ಪಡೆಯಬೇಕಾಗಿದ್ದ ಸಮಾಜದ ಕಟ್ಟಕಡೆಯ ವ್ಯಕ್ತಿ. ಇದರಿಂದ ಶ್ರೀಮಂತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಕೋಟಿ ಕೋಟಿ ಹಗರಣಗಳು ನಡೆಯುತ್ತಿದ್ದರೆ ಮುಂದೆ ಸಮಾಜದಲ್ಲಿ ಶಾಂತಿ ಇರುವುದಿಲ್ಲ. ಯಾರಿಗೆ ಹಣ ಸೇರಬೇಕೊ ಅವರಿಗೆ ಹಣ ಸಿಗದಿದ್ದರೆ ಈ ದೇಶದಲ್ಲಿ ಕ್ರಾಂತಿ ಆಗಬಹುದು. ದೇಶದಲ್ಲಿ ಭಾಷೆ ಹಾಗೂ ಧರ್ಮದ ಆಧಾರದಲ್ಲಿ ಕ್ರಾಂತಿಯಾದರೆ 25ಕ್ಕೂ ಅಧಿಕ ಬೇರೆ ದೇಶಗಳ ಸೃಷ್ಠಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆದ್ರೂ ಡಿಸಿ ಗೈರು

ಮಂಗಳೂರು: ನವಯುಗ ಎಕ್ಸ್ಪ್ರೆಸ್ ಪುನರಾರಂಭಕ್ಕೆ ಆಗ್ರಹ

ಮಂಗಳೂರು: ಇದು ಕಂಡ್ರೋ ನಿಜವಾದ ಹಿಂದೂ-ಮುಸ್ಲಿಂ ಬಾಂಧವ್ಯ

ಮಂಗಳೂರು: ನಂತೂರ್ ಜಂಕ್ಷನ್‌ನಲ್ಲಿ ಮೂರು ದಿಕ್ಕುಗಳಲ್ಲಿ ಎಡಭಾಗಗಳು ಸಿಗ್ನಲ್‌ನಿಂದ ಮುಕ್ತ

ಉಡುಪಿ: ಮರವಂತೆ ಬೀಚ್‌ನಲ್ಲಿ ತಪ್ಪಿದ ಬಾರೀ ದುರಂತ; ಐವರ ರಕ್ಷಣೆ

ಸುಬ್ರಹ್ಮಣ್ಯ: ಗುಂಡ್ಯ ಹೊಳೆಯಲ್ಲಿ ನೀರಲ್ಲಿ ಮುಳುಗಿ ಚೇತನ್ ಮೃತ್ಯು…!!

ಮೈಸೂರು: ಮೋದಿ ಬದುಕಿರುವುದು ಪ್ರಚಾರದಿಂದ; ಸಿಎಂ ಸಿದ್ದರಾಮಯ್ಯ

ಮಂಗಳೂರು: ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದ ಸುಹಾಸ್ ಶೆಟ್ಟಿ ತಾಯಿ

ಮಂಗಳೂರು: ಹೃದಯಾಘಾತದಿಂದ ನಿಧನ ಹೊಂದಿದ ಯಕ್ಷಗಾನ ಕಲಾವಿದ..!!

error: Content is protected !!