ಹುಣಸೂರು: ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ತಾಲೂಕಿನ ಹನಗೋಡು ಗ್ರಾಮ ಪಂಚಾಯಿತಿಯ ಸ್ವಯಂಸೇವಕ ಬೋಧಕರಿಗೆ ಎರಡು ದಿನಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ಹನಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯನ್ನು ಕಾಯ್ರಕ್ರಮವನ್ನು ತಾಲೂಕು ಸಾಕ್ಷರತಾ ಕಾರ್ಯಕ್ರಮದ ನೋಡಲ್ ಅಧಿಕಾರಿಯಾದ ಬಿ.ಆರ್.ಪಿ ನಂದೀಶ್ ಉದ್ಘಾಟಿಸಿ, ಮಾತನಾಡಿ, ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿ ಮಾಡುವ ಮುಖೇನ ಎಲ್ಲರೂ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ಅವಕಾಶವನ್ನು ಸೃಷ್ಟಿಸುವ ಮಹತ್ಕಾರ್ಯವನ್ನು ನೀವು ಮಾಡುತ್ತಾ, ಆ ಮೂಲಕ ದೇಶ ಸೇವೆಯನ್ನು ಮಾಡಿದ ಹೆಮ್ಮೆ ನಿಮ್ಮದಾಗುತ್ತದೆ ಎಂದು ಸ್ವಯಂಸೇವಕ ಬೋಧಕರನ್ನು ಉದ್ದೇಶಿಸಿ ತಿಳಿಸಿದರು.
ಕಲಿತವರು ಕಲಿಯದವರಿಗೆ ಕಲಿಸುವ ಮೂಲಕ ಸಮಾಜದ ಋಣವನ್ನು ತೀರಿಸುವ ಉತ್ತಮ ಅವಕಾಶ ನಿಮಗೆ ದೊರೆತಿದ್ದು, ಅನಕ್ಷರಸ್ಥರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಮಗೌಡನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸುಬ್ಬೇಗೌಡ ರವರು ತರಬೇತಿದಾರರನ್ನು ಉದ್ದೇಶಿಸಿ ಮಾತನಾಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ, ಸ.ಹಿ.ಪ್ರಾ.ಶಾಲೆ ಹನಗೋಡು ಶಾಲೆಯ ಮುಖ್ಯ ಶಿಕ್ಷಕಿಯವರಾದ ಇಂದಿರಾ ರವರು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಮೂಲಕ ಸಾಕ್ಷರತ ಭಾರತ ನಿರ್ಮಾಣದಲ್ಲಿ ಕೈ ಜೋಡಿಸುತ್ತಿರುವ ಸ್ವಯಂಸೇವಕ ಬೋಧಕರು ಪುಣ್ಯದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ತಿಳಿಸುವ ಮೂಲಕ ಪ್ರೋತ್ಸಾಹಕದಾಯಕ ನುಡಿಗಳನ್ನು ನುಡಿದರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸೋಮಶೇಖರ್ ಸರ್ ರವರು ಬೋಧಕರ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಉದ್ಘಾಟನಾ ಕಾರ್ಯಕ್ರಮದ ನಿರೂಪಣೆಯನ್ನು ಬಿ.ಐ.ಇ.ಆರ್.ಟಿ ಶ್ರೀ ತ್ರಿನೇಶ್ ಎ.ಎನ್ ರವರು ನಡೆಸಿಕೊಟ್ಟರು. ಬಿ.ಐ.ಇ.ಆರ್.ಟಿ ಪ್ರಭಾಕರ್ ರವರು ಸ್ವಾಗತಿಸಿದರೆ, ಸಿ.ಆರ್.ಪಿ ಅಶ್ವಿನಿ ರವರು ವಂದಿಸಿದರು.