ಕರಾವಳಿ

ಹನಗೋಡು ಗ್ರಾಮ ಪಂಚಾಯಿತಿಯ ಸ್ವಯಂಸೇವಕ ಬೋಧಕರಿಗೆ ಎರಡು ದಿನಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮ

ಹುಣಸೂರು: ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ತಾಲೂಕಿನ ಹನಗೋಡು ಗ್ರಾಮ ಪಂಚಾಯಿತಿಯ ಸ್ವಯಂಸೇವಕ ಬೋಧಕರಿಗೆ ಎರಡು ದಿನಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ಹನಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ತರಬೇತಿಯನ್ನು ಕಾಯ್ರಕ್ರಮವನ್ನು ತಾಲೂಕು ಸಾಕ್ಷರತಾ ಕಾರ್ಯಕ್ರಮದ ನೋಡಲ್ ಅಧಿಕಾರಿಯಾದ ಬಿ.ಆರ್.ಪಿ ನಂದೀಶ್ ಉದ್ಘಾಟಿಸಿ, ಮಾತನಾಡಿ, ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿ ಮಾಡುವ ಮುಖೇನ ಎಲ್ಲರೂ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ಅವಕಾಶವನ್ನು ಸೃಷ್ಟಿಸುವ ಮಹತ್ಕಾರ್ಯವನ್ನು ನೀವು ಮಾಡುತ್ತಾ, ಆ ಮೂಲಕ ದೇಶ ಸೇವೆಯನ್ನು ಮಾಡಿದ ಹೆಮ್ಮೆ ನಿಮ್ಮದಾಗುತ್ತದೆ ಎಂದು ಸ್ವಯಂಸೇವಕ ಬೋಧಕರನ್ನು ಉದ್ದೇಶಿಸಿ ತಿಳಿಸಿದರು.
ಕಲಿತವರು ಕಲಿಯದವರಿಗೆ ಕಲಿಸುವ ಮೂಲಕ ಸಮಾಜದ ಋಣವನ್ನು ತೀರಿಸುವ ಉತ್ತಮ ಅವಕಾಶ ನಿಮಗೆ ದೊರೆತಿದ್ದು, ಅನಕ್ಷರಸ್ಥರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಮಗೌಡನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸುಬ್ಬೇಗೌಡ ರವರು ತರಬೇತಿದಾರರನ್ನು ಉದ್ದೇಶಿಸಿ ಮಾತನಾಡಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ, ಸ.ಹಿ.ಪ್ರಾ.ಶಾಲೆ ಹನಗೋಡು ಶಾಲೆಯ ಮುಖ್ಯ ಶಿಕ್ಷಕಿಯವರಾದ ಇಂದಿರಾ ರವರು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಮೂಲಕ ಸಾಕ್ಷರತ ಭಾರತ ನಿರ್ಮಾಣದಲ್ಲಿ ಕೈ ಜೋಡಿಸುತ್ತಿರುವ ಸ್ವಯಂಸೇವಕ ಬೋಧಕರು ಪುಣ್ಯದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ತಿಳಿಸುವ ಮೂಲಕ ಪ್ರೋತ್ಸಾಹಕದಾಯಕ ನುಡಿಗಳನ್ನು ನುಡಿದರು.

ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸೋಮಶೇಖರ್ ಸರ್ ರವರು ಬೋಧಕರ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಉದ್ಘಾಟನಾ ಕಾರ್ಯಕ್ರಮದ ನಿರೂಪಣೆಯನ್ನು ಬಿ.ಐ.ಇ.ಆರ್.ಟಿ ಶ್ರೀ ತ್ರಿನೇಶ್ ಎ.ಎನ್ ರವರು ನಡೆಸಿಕೊಟ್ಟರು. ಬಿ.ಐ.ಇ.ಆರ್.ಟಿ ಪ್ರಭಾಕರ್ ರವರು ಸ್ವಾಗತಿಸಿದರೆ, ಸಿ.ಆ‌ರ್.ಪಿ ಅಶ್ವಿನಿ ರವರು ವಂದಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

“ಕೊನೆ ಪಯಣ”…….

ಬದುಕು ಅನೀರೀಕ್ಷಿತ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿದವರೆಲ್ಲ ಸುಟ್ಟು ಕರಕಲಾದ ಶವಗಳಾಗಿ ಹಿಂತಿರುಗಿದ್ದಾರೆ. ಯಾರು ಊಹಿಸದ,…

17 hours ago

ವಿಮಾನ ದುರಂತದ ಬಗ್ಗೆ ವಿಶ್ವಾಸ್ ಕುಮಾರ್ ಹೇಳಿದ ಅಚ್ಚರಿ ಸಂಗತಿ

ವಿಶ್ವಾಸ್ ಕುಮಾರ್ ರಮೇಶ್ ಅನ್ನೋರು ಅಹ್ಮದಾಬಾದ್ ವಿಮಾನ ದುರಂತದಿ0ದ ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ. ಸದ್ಯ ಅಹ್ಮದಾಬಾದ್ ಆಸ್ಪತ್ರೆಯಲ್ಲಿ…

17 hours ago

ದುಬೈ: ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಕಾಸರಗೋಡು ಶ್ರೀಯುತ ಸುಬ್ರಾಯ ಹೊಳ್ಳರು

ದಶಮಾನೋತ್ಸವ ಸಡಗರದಲ್ಲಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ ವರ್ಷಂಪ್ರತಿ, ದುಬಾಯಿ ಅಥವ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು…

19 hours ago

ಮಂಗಳೂರು: ವಿಶೇಷ ಕಾರ್ಯಪಡೆ ಘಟಕ ಲೋಕಾರ್ಪಣೆಗೊಳಿಸಿದ ಡಾ.ಜಿ.ಪರಮೇಶ್ವರ್

ಕರಾವಳಿ ಹಾಗೂ ಮಲೆನಾಡು ಭಾಗದ ಕೋಮುಗಲಭೆ ಪ್ರಚೋದಿಸುವ ಸರಣಿ ಹತ್ಯೆಗಳ ತಡೆಗೆ ರಾಜ್ಯ ಸರಕಾರ ರಚಿಸಿರುವ ವಿಶೇಷ ಕಾರ್ಯಪಡೆ ಘಟಕವನ್ನು…

21 hours ago

ಉಡುಪಿ: ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೃತಕ ನೆರೆ ಸೃಷ್ಟಿ…!

ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಬ್ರಹ್ಮಾವರ ಭರಣಿ…

21 hours ago

ಮಂಗಳೂರು: ವಿಮಾನ ಪತನ ;ಮಂಗಳೂರು ಮೂಲದ ಸಹ ಪೈಲಟ್ ಕ್ಯಾ. ಕ್ಲೈವ್ ಕುಂದರ್ ಸಾವು

ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಸಹ ಪೈಲಟ್ ಮಂಗಳೂರು ಮೂಲದವರು ಎಂದು ಹೇಳಲಾಗಿದೆ. ಈ ವಿಮಾನದಲ್ಲಿದ್ದ 242…

21 hours ago