ಕೆಲವೊಂದು ಭಾವನೆಗಳೇ ಹಾಗೆ ಅವುಗಳಿಗೆ ವಯಸ್ಸು, ಪರಿಸ್ಥಿತಿ, ಒಳ್ಳೆಯದು, ಕೆಟ್ಟದು ಹೀಗೆ ಯಾವುದರ ಪರಿವೂ ಇರುವುದಿಲ್ಲ. ಅಂತಹದೇ ಭಾವನೆಗಳ ಪೈಕಿ ಪ್ರೀತಿಯೂ ಒಂದು. ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಂದಾಪುರ ಮಹಿಳೆ ಹೀನಾ ಕೌಸರ್ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡೆತ್ ನೋಟ್ ಬರೆದಿಟ್ಟು ಅಸಲಿಗೆ ಆಕೆ ಹೋಗಿದ್ದೆಲ್ಲಿಗೆ..? ತನ್ನ ಚಪ್ಪಲಿ, ಸ್ಕೂಟರ್ ಎಲ್ಲವನ್ನು ನದಿ ತೀರದಲ್ಲಿ ಬಿಟ್ಟು ಆಕೆ ಆಡಿದ ಸೂಸೈಡ್ ಹೈಡ್ರಾಮಾ ಹೇಗಿತ್ತು ಗೊತ್ತಾ?
ಈಕೆ ಕುಂದಾಪುರ ವಿಠ್ಠಲವಾಡಿ ನಿವಾಸಿ 33 ವರ್ಷದ ಹೀನಾ ಕೌಸರ್ ಅನ್ನುವ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯ ಮನೆಯಲ್ಲಿ ವಾಸವಿದ್ಲು. ಇನ್ನು ಆಕೆಯ ಗಂಡ ವಿದೇಶದಲ್ಲಿ ಕೆಲ್ಸ ಮಾಡ್ತಾಯಿದ್ದು ಆಗಾಗ ಊರಿಗೆ ಬರ್ತಾ ಇದ್ನನಂತೆ. ಹೀಗೆ ಎಲ್ಲವು ಶಾಂತವಾಗೇ ಇತ್ತು. ಆದ್ರೆ ಜೂನ್ 8 ರಾತ್ರೋರಾತ್ರಿ ಹೀನಾ ಕೌಸರ್ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ಳು . ಗಾಬರಿಕೊಂಡ ಆಕೆಯ ಮನೆಯವರು ಮೇಲಿಂದ ಮೇಲೆ ಆಕೆಗೆ ಕರೆ ಮಾಡಿದ್ರು. ಆದ್ರೆ ಯಾವುದೇ ಪ್ರಯೋಜನವಾಗ್ಲಿಲ್ಲ ಆಕೆಯ ಫೋನ್ ಆಗಲೇ ಸ್ವಿಚ್ ಆಫ್ ಆಗಿತ್ತು. ಇದ್ರಿಂದ ಮತ್ತಷ್ಟು ಗಾಬರಿಕೊಂಡ ಮನೆಯವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು .
ತಕ್ಷಣವೇ ಪೊಲೀಸರು ಕೂಡ ತನಿಖೆ ಆರಂಭಿಸಿದ್ರು. ಮರುದಿನ ನಸುಕಿನ ಜಾವ ನಾಲ್ಕು ಗಂಟೆಗೆ ಕೋಡಿ ಸೇತುವೆಯ ಬಳಿ ಹೀನಾ ಕೌಸರ್ ಚಪ್ಪಲಿಗಳು ಮತ್ತು ಆಕೆಯ ಸ್ಕೂಟರ್ ಪತ್ತೆಯಾಗಿತ್ತು. ಇದಕ್ಕೆ ಪುಷ್ಟಿ ಎಂಬAತೆ ಆಕೆ ಬರೆದಿದ್ದ ಡೆತ್ ನೋಟ್ ಕೂಡ ಪೋಲೀಸರ ಕೈ ಸೇರುತ್ತದೆ. ಎಲ್ಲವನ್ನು ತಾಳೆ ಹಾಕಿ ನೋಡಿದ ಪೊಲೀಸರು ಹೀನಾ ಕೌಸರ್ ನದಿಗೆ ಹಾರಿ ಸೂಸೈಡ್ ಮಾಡಿರಬಹುದೆಂದು ದೃಢವಾಗಿ ಊಹಿಸಿ ನದಿಯಲ್ಲಿ ಹುಡುಕಾಟ ಕೂಡ ಆರಂಭಿಸಿದ್ರು. ಅಗ್ನಿಶಾಮಕ ದಳದಿಂದ ಕಳೆದೆರಡು ದಿನಗಳಿಂದ ಹೀನ ಕೌಸರ್ ಗಾಗಿ ತೀವ್ರ ಶೋಧ ನಡೆತಿತ್ತು. ಎಲ್ಲವೂ ಮುಗಿಯಿತು ಇನ್ನೇನು ಆಕೆಯ ಮೃತದೇಹ ಸಿಕ್ಕಿಯೇ ಬಿಡುತ್ತದೆ ಎಂಬುವಷ್ಟರಲ್ಲಿ ಇದೀಗ ಈ ಪ್ರಕರಣಕ್ಕೆ ಅನೀರಿಕ್ಷಿತ ಟ್ವಿಸ್ಟ್ ಒಂದು ಸಿಕ್ಕಿದೆ. ಅಸಲಿಗೆ ಹೀನಾ ನದಿಗೆ ಹಾರಿಯೇ ಇಲ್ಲ ಡೆತ್ ನೋಟ್, ಚಪ್ಪಲಿ, ಸ್ಕೂಟರ್ ಎಲ್ಲವನ್ನು ಸಿಗುವಂತೆ ಮಾಡಿ ಸೂಸೈಡ್ ಹೈಡ್ರಾಮಾ ಆಡಿದ್ದಳು. ಅಷ್ಟಕ್ಕೂ ಆಕೆ ಸಾಯುವ ನಾಟಕ ಆಡಿದ್ಯಾಕೆ? ಅನ್ನೋ ಪ್ರಶ್ನೆಗೆ ಮತ್ತದೇ ಉತ್ತರ ಪ್ರೀತಿ. ಹೌದು ಹೀನಾ ಸೂಸೈಡ್ ಡ್ರಾಮಾವಾಡಿ 26 ವರ್ಷದ ಸಾಹಿಲ್ ಅನ್ನುವ ಯುವಕನ ಜೊತೆ ಪರಾರಿಯಾಗಿದ್ದಾಳೆ. ಎರಡು ಮಕ್ಕಳ ತಾಯಿ ಗಂಡ, ಮಕ್ಕಳು ಎಲ್ಲವನ್ನು ಮರೆತು ಹುಚ್ಚು ಪ್ರೀತಿ ಹರಸಿ ತನ್ನಗಿಂತ ಏಳು ವರ್ಷ ಚಿಕ್ಕವನ ಜೊತೆ ಓಡಿಹೋಗಿದ್ದಾಳೆ ಅಂದ್ರೆ ಪ್ರೀತಿಗೆ ನಿಜಕ್ಕೂ ಕಣ್ಣು ಕಾಣೋದಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.
ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ…
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ…
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…
ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…