ಅಹ್ಮದಾಬಾದ್ನ ಟ್ರಾಫಿಕ್ನಲ್ಲಿ ಸಿಲುಕಿ ಲಂಡನ್ ವಿಮಾನ ತಪ್ಪಿಸಿಕೊಂಡ ಮಹಿಳೆಯೊಬ್ಬರು ಸಾವಿನಿಂದ ಪಾರಾಗಿದ್ದಾರೆ. ಅವರು ಹತ್ತಬೇಕಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ವಿಮಾನ ತಪ್ಪಿದ್ದಕ್ಕೆ ನಿರಾಸೆಗೊಂಡಿದ್ದ ಭೂಮಿ, ಇದೀಗ ಇದೇ ತನ್ನ ಜೀವ ಉಳಿಸಿದೆ ಎಂದು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಟ್ರಾಫಿಕ್ ಅನ್ನು ದಿನನಿತ್ಯ ನಾವು ಬೈತಾ ಇರ್ತೀವಿ.. ಜಾಮ್ ಆದ್ರೆ ಸರಿಯಾದ ಸಮಯಕ್ಕೆ ಹೋಗಿ ತಲುಪೋದಕ್ಕೆ ಆಗಲ್ಲ.. ಟ್ರಾಫಿಕ್ನಲ್ಲಿ ಸಿಲುಕಿದ್ರೆ ಜೀವ ಹೋಗುತ್ತೆ ಅಂತ ಗೊಣಗಾಡ್ತೀವಿ. ಟ್ರಾಫಿಕ್ ಜಾಮ್ ಅಂತ ಬೈಕೊಳ್ತಿದ್ದ ಮಹಿಳೆಗೆ.. ಅದೇ ಟ್ರಾಫಿಕ್ ಈಗ ಜೀವ ಉಳಿಸಿದೆ.
ಅಹ್ಮದಾಬಾದ್ನ ಭಾರೀ ಟ್ರಾಫಿಕ್ನಲ್ಲಿ ಸಿಲುಕಿದ್ದ ಭೂಮಿ ಚೌಹಾಣ್ಗೆ.. ತಾವು ಹತ್ತಬೇಕಿದ್ದ ಲಂಡನ್ ವಿಮಾನ ತಪ್ಪಿಹೋಗುತ್ತದೆಯೇನೋ ಎಂಬ ಆತಂಕ, ಚಡಪಡಿಕೆ ಇತ್ತು. ಎರಡು ವರ್ಷಗಳ ನಂತರ ಭಾರತಕ್ಕೆ ಬಂದು.. ಮತ್ತೆ ಲಂಡನ್ನಲ್ಲಿರುವ ಪತಿಯನ್ನ ಸೇರಬೇಕೆಂಬ ತವಕದಲ್ಲಿದ್ದ ಅವರಿಗೆ, ಆ ಟ್ರಾಫಿಕ್ ತೀವ್ರ ಕಿರಿಕಿರಿ ಎನಿಸಿತ್ತು. ಕೊನೆಗೂ ಏರ್ಪೋರ್ಟ್ ತಲುಪಿದಾಗ ತಿಳಿಯಿತು. ಅವರು ಹತ್ತಬೇಕಿದ್ದ ಏರ್ ಇಂಡಿಯಾ ವಿಮಾನ ಎಐ-171 ಟೇಕಾಫ್ ಆಗಿದೆ. ಈ ವಿಚಾರ ಅವರಿಗೆ ಭಾರೀ ನಿರಾಸೆ ತಂದಿತ್ತು.. ಆದರೆ, ಕೆಲವೇ ಗಂಟೆಗಳಲ್ಲಿ ಆ ಹತಾಶೆ, ಅವರ ಪಾಲಿಗೆ ಭಯಾನಕ ಆಘಾತವಾಗಿ ಬದಲಾಯಿತು. ಅವರು ಹತ್ತಬೇಕಿದ್ದ ವಿಮಾನ ಟೇಕಾಫ್ ಆದ ಐದೇ ನಿಮಿಷದಲ್ಲಿ ಪತನಗೊಂಡು, ಅದರಲ್ಲಿ ಪ್ರಯಾಣಿಸುತ್ತಿದ್ದ 241 ಜನರಲ್ಲಿ ಬಹುತೇಕರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದು ಒಂದು ಕ್ಷಣ ಮಹಿಳೆ ದಿಕ್ಕೆ ತೋಚದಂತೆ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಟ್ರಾಫಿಕ್ನಿಂದ ಲೇಟ್ ಆಗಿದ್ದಕ್ಕೆ ವಿಮಾನ ಮಿಸ್ ಆಗಿ ಬೇಸರಗೊಂಡಿದ್ದ ಭೂಮಿ ಚೌಹಾಣ್, ಟ್ರಾಫಿಕ್ಕಿನಿಂದಲೇ ಜೀವದಾನ ಸಿಕ್ಕಿದೆ. ನನ್ನ ಗಣಪತಿ ಬಪ್ಪಾ ನನ್ನನ್ನ ಉಳಿಸಿದ ಎನ್ನುವಾಗ ಅವರ ದನಿಯಲ್ಲಿ ಕೃತಜ್ಞತಾ ಭಾವ ಕಾಣ್ತಿತ್ತು. ಆದ್ರೆ ಇದೇ ಅದೃಷ್ಟ ಉಳಿದವರಿಗೆ ಇರಲಿಲ್ಲ ಅನ್ನೋದೇ ನೋವಿನ ಸಂಗತಿಯಾಗಿದೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…