ನದಿ, ಹಳ್ಳ ತುಂಬಿ ಹರಿಯುತ್ತಿದ್ದು ಅಪಾಯಕಾರಿಯಾಗಿದೆ. ಈ ಕಾಲು ಸಂಕದ ಮೂಲಕ ದಾಟಬೇಡಿ ಎಂದು ಇರ್ವತ್ತೂರು ಗ್ರಾ.ಪಂ.ಅಧಿಕೃತ ಆದೇಶದ ಬ್ಯಾನರ್ ಅಳವಡಿಸಲಾಗಿದೆ. ಮೂಡುಪಡುಕೋಡಿ ಗ್ರಾಮದ ಅಗರ್ದಬೈಲು ಎಂಬಲ್ಲಿ ಕಾಲು ಸಂಕವಿದೆ. ಈ ಕಾಲು ಸಂಕದ ಮೂಲಕ ಬಾಂಬಿಲ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದೆ.
ಮಳೆಗಾಲ ಅರಂಭವಾಗುತ್ತಿದ್ದ0ತೆ ಜಿಲ್ಲಾ ವಿಪತ್ತು ನಿರ್ವಹಣಾ ತಂಡದಿ0ದ ಜಾಗೃತಿಯನ್ನು ಮೂಡಿಸುವ ಮತ್ತು ಅಪಾಯಕಾರಿ ಸನ್ನಿವೇಶಗಳು ಕಂಡು ಬಂದಲ್ಲಿ ಸ್ಥಳೀಯ ಆಡಳಿತದ ಮೂಲಕ ಎಚ್ಚರಿಸುವ ಕಾರ್ಯ ನಡೆಯುವುದು ನಿರಂತರವಾಗಿ ನಡೆಯುತ್ತಾ ಬಂದಿದೆ. ಅಪಾಯಕಾರಿ ಕಾಲು ಸಂಕದಲ್ಲಿ ದಾಟುವುದನ್ನು ನಿಷೇಧಿಸಲಾಗಿದೆ ಎಂದು ಇರ್ವತ್ತೂರು ಗ್ರಾ.ಪಂ.ಎಚ್ಚರಿಕೆ ಫಲಕವನ್ನು ಹಾಕಿರುವುದರ ವಿರುದ್ದ ಗ್ರಾಮಸ್ಥರು ಗರಂ ಆಗಿದ್ದು ಇದರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಪ್ರತಿ ಮಳೆಗಾಲದಲ್ಲಿ ಈ ಕಾಲು ಸಂಕದ ಮೇಲೆ ನೀರು ಬರುತ್ತಿದ್ದು, ಎತ್ತರದ ಮತ್ತು ವಾಹನ ಓಡಾಟಕ್ಕೆ ಅನುಕೂಲಕರವಾದ ಸಂಕವನ್ನು ಮಾಡಿಕೊಡಿ ಎಂಬುದು ಇಲ್ಲಿನ ಗ್ರಾಮಸ್ಥರ ಬೇಡಿಕೆಯಾಗಿದೆ.