ಮಹಾರಾಷ್ಟ್ರದ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾದ ಮಾವಲ್ ತಾಲೂಕಿನ ಕುಂದಮಾಲಾದಲ್ಲಿ ಪ್ರವಾಸಿಗರಿಂದ ತುಂಬಿದ್ದ ಸೇತುವೆ ಮುರಿದು ಬಿದ್ದು ನಾಲ್ಕು ಮಂದಿ ನೀರು ಪಾಲಾಗಿದ್ದಾರೆ.
ಇಂದ್ರಯಾನಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಕಬ್ಬಿಣದ ಸೇತುವೆ ತುಕ್ಕು ಹಿಡಿದು ದುರ್ಬಲವಾಗಿತ್ತು. ಸೇತುವೆಯ ಮೇಲೆ ನಡೆದಾಡಬಾರದು ಎಂದು ಎಚ್ಚರಿಕೆ ಫಲಕಗಳನ್ನೂ ಅಳವಡಿಸಲಾಗಿತ್ತು. ಆದರೆ ಮಳೆ ವೈಭವ ನೋಡಲು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರು ಅದನ್ನು ಉಲ್ಲಂಘಿಸಿ ಸೇತುವೆಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ರು. ಪ್ರವಾಸಿಗರ ಭಾರ ತಾಳಲಾರದೆ ಸೇತುವೆ ಮುರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಇತರ ಮೂವತ್ತೆಂಟು ಮಂದಿ ಗಾಯಗೊಂಡಿದ್ದಾರೆ. ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರೆ ಫಡ್ನವಿಸ್ ದುಃಖ ವ್ಯಕ್ತಪಡಿಸಿದ್ದಾರೆ.