ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕಾಗಿದ್ದು ಎಲ್ಲೆಡೆ ವ್ಯಾಪಕವಾದ ಮಳೆ ಆಗ್ತಾ ಇದ್ದು ಅಪಾರ ಪ್ರಮಾಣದಲ್ಲಿ ನಾಶ ಉಂಟು ಮಾಡ್ತಾ ಇದೆ.
ಅದರಲ್ಲೂ ನಿರ್ಮಾಣ ಕಾರ್ಯ ಮುಗಿದು ಇನ್ನೇನು ದಿನಗಳನ್ನು ಕಳೆಯುತ್ತಿದ್ದ ರಾಷ್ಟೀಯ ಹೆದ್ದಾರಿಯ ತಡೆಗೋಡೆ ಕುಸಿಯುತ್ತಿರುವ ದೃಶ್ಯ ಭಯಾನಕವಾಗಿದೆ. ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ನ್ಯೂ ಬೇವಿಂಜದಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯವು ಮಳೆಯ ವ್ಯಾಪಕತೆಯನ್ನು ತಿಳಿಸ್ತಾ ಇದೆ. ಕಳಪೆ ಕಾಮಗಾರಿಗೆ ಸಾಕ್ಷಿ ಎಂಬ0ತೆ ಈ ಸನ್ನಿವೇಶ ಸಾಕ್ಷ್ಯ ನೀಡ್ತಾ ಇದೆ.