ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಾದ್ಯ0ತ ಮುಂಗಾರು ಅಬ್ಬರ ಜೋರಾಗಿದ್ದು, ನೆರೆ ಪರಿಸ್ಥಿತಿ ಎದುರಾಗಿದೆ.
ಈ ಮಧ್ಯೆ ರಭಸವಾಗಿ ಹರಿಯುತ್ತಿದ್ದ ನೆರೆ ನೀರಿನಲ್ಲಿ ಬೈಕ್ ಚಲಾಯಿಸಿ ಯುವಕರು ಹುಚ್ಚಾಟ ಮೆರೆದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವು0ದದ ಬಡಾಕೆರೆ ಎಂಬಲ್ಲಿ ನಡೆದಿದೆ. ರಭಸವಾಗಿ ಹರಿಯುತ್ತಿದ್ದ ನೆರೆ ನೀರಿನಲ್ಲಿ ವಾಹನ ಚಲಾಯಿಸಿದ ಪರಿಣಾಮ ಬೈಕ್ ಸಮೇತ ಯುವಕರು ಕೊಚ್ಚಿಹೋಗಿದ್ದರು. ಅದೃಷ್ಟವಶಾತ್ ಕೂದಲೆಲೆಯ ಅಂತರದಲ್ಲಿ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯುವಕರ ಈ ಹುಚ್ಚಾಟದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.