ಜನ ಮನದ ನಾಡಿ ಮಿಡಿತ

ಬ್ರಹ್ಮಾವರ: 42 ವರ್ಷಗಳ ಸತತ ಯೋಗ ಅಭ್ಯಾಸಿಯ ಅನಿಸಿಕೆ

ಬ್ರಹ್ಮಾವರ ತಾಲೂಕು ಯಡ್ತಾಡಿ ಗ್ರಾಮದ ಪ್ರಗತಿಪರ ರೈತ ಹಾಗೂ ಸಮಾಜಸೇವಕ 79ರ ಇಳಿ ವಯಸ್ಸಿನ ಯಡ್ತಾಡಿ ಸತೀಶಕುಮಾರ ಶೆಟ್ಟಿ ಅವರು ಯೋಗ ಧ್ಯಾನ ಹಾಗೂ ಪ್ರಾಣಾಯಾಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊ0ಡಿದ್ದಾರೆ.

ತಾವು 1983 ರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಯೋಗ ವಿಭಾಗದಿಂದ ವೈಜ್ಞಾನಿಕವಾಗಿ ಯೋಗ ಕಲಿತು ಪ್ರತಿದಿನ ತಪ್ಪದೇ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಘಂಟೆ ಯೋಗಾಭ್ಯಾಸ ಮಾಡುತ್ತಿದ್ದು ತಮ್ಮ ಆರೋಗ್ಯ ಕಾಪಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಇವರು ಹಲವಾರು ಯೋಗ ಶಿಬಿರಗಳಲ್ಲಿ ಭಾಗವಹಿಸಿ ಯೋಗದ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಲಹೆ ಸೂಚನೆ ನೀಡಿರುತ್ತಾರೆ. ನಮ್ಮ ದೇಶದ ಪ್ರಾಚೀನ ಋಷಿ ಪರಂಪರೆಯಿ0ದ ಬಂದ ಈ ಜ್ಞಾನ ಭಂಡಾರದ ಕುರಿತು ಹಲವಾರು ಪುಸ್ತಕಗಳನ್ನು ಓದಿ ಅದರ ಪ್ರಯೋಜನ ಪಡೆದಿರುತ್ತಾರೆ. ತಮ್ಮ ಮಕ್ಕಳಿಗೂ ಚಿಕ್ಕಂದಿನಲ್ಲೇ ಯೋಗಾಭ್ಯಾಸದ ಕುರಿತು ಆಸಕ್ತಿ ಹುಟ್ಟಿಸಿರುತ್ತಾರೆ. ಯೋಗ ಅಭ್ಯಾಸವನ್ನು ನುರಿತ ಗುರುಗಳಿಂದಲೇ ಅವರ ಮಾರ್ಗದರ್ಶನದಲ್ಲಿ ಯೋಗ ಕಲಿಯಬೇಕೆಂದು ಅವರ ಸಲಹೆ. ಯೋಗಾಭ್ಯಾಸವನ್ನು ಎಂಟು ವರ್ಷದ ಮಕ್ಕಳ ನಂತರ ವೃದ್ಧರೂ ಅತಿವೃದ್ಧರೂ ವ್ಯಾಧಿತರೂ ದುರ್ಬಲರೂ ಅವರವರ ಶಕ್ತ್ಯಾನುಸಾರ ನಿರಂತರ ಮಾಡಿದಲ್ಲಿ ಸಿದ್ಧಿಯನ್ನು ಪಡೆಯಬಹುದು. ಪ್ರತಿದಿನ ಬೆಳಿಗ್ಗೆ ಶೌಚ, ದಂತ ಧಾವನಾದಿಗಳನ್ನು ತೀರಿಸಿ, ಪ್ರಶಾಂತ ಗಾಳಿ ಬೆಳಕು ಇರುವ ವಾತಾವರಣದಲ್ಲಿ ಯೋಗ ಪ್ರಾಣಾಯಾಮ ಧ್ಯಾನ ಮಾಡತಕ್ಕದ್ದು. ಸಹನೆ, ಶ್ರದ್ಧೆ, ಮಿತ ಆಹಾರ, ತಾಳ್ಮೆಯಿಂದ ಯೋಗಾಭ್ಯಾಸ ಮಾಡಿದಲ್ಲಿ ತುಂಬಾ ಪ್ರಯೋಜನ ಪಡೆಯಬಹುದು ಎಂದು ಶೆಟ್ಟರ ಅಭಿಪ್ರಾಯ. ತನ್ನ ನಿರಂತರ ಯೋಗ ಸಾಧನೆಗೆ ಸಹಕರಿಸಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾಕ್ಟರ್ ಮಂಜುನಾಥ ಹಂದೆ ಅಲ್ಲದೆ ತಮ್ಮ ಕುಟುಂಬ ವೈದ್ಯರಾದ ಡಾಕ್ಟರ್ ರಾಮಚಂದ್ರ ಬಾಯಿರಿ ಹಾಗೂ ಮಣಿಪಾಲದ ಯೋಗ ಕೇಂದ್ರದವರಿಗೂ ಅವರು ತಮ್ಮ ಕೃತಜ್ಞತೆ ವ್ಯಕ್ತಪಡಿಸಿರುತ್ತಾರೆ. ನಮ್ಮ ಪ್ರಧಾನಮಂತ್ರಿ ಮೋದಿ ಅವರು ಪ್ರತಿವರ್ಷ ಜೂನ್ 21ರಂದು ವಿಶ್ವಯೋಗ ದಿನವೆಂದು ಘೋಷಿಸಿದ್ದು ಅದು ಈಗ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಈ ವಿಶ್ವಯೋಗ ದಿನದ ಪ್ರಯೋಜನವನ್ನು ಎಲ್ಲರೂ ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿಶ್ವ ಯೋಗ ದಿನಾಚರಣೆಯ ಸಂದರ್ಭ ಸಂದೇಶ ನೀಡಿರುತ್ತಾರೆ.

Leave a Reply

Your email address will not be published. Required fields are marked *

ಕೊಲ್ಕತ್ತಾದ ಏರ್ ಇಂಡಿಯಾದ ವಿಮಾನದಲ್ಲಿ ದೋಷ!!!???

ವಿಟ್ಲ: ಕನ್ಯಾನ ಗ್ರಾಮದ ಮಂಡ್ಯೂರು ಎಂಬಲ್ಲಿ ಭೂಮಿಕಂಪನ…!

ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಪರದಾಟ..!

ಮಂಗಳೂರು: ಸರ್ಕಾರದ ವಿರುದ್ದ ಕೇಳಿ ಬರುತ್ತಿವೆ ಭ್ರಷ್ಟಾಚಾರದ ಆರೋಪಗಳು ; ಕ್ಯಾ.ಬ್ರಿಜೇಶ್ ಚೌಟ

ಹುಣಸೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ರ‍್ಯಾಂಕ್ ರಾಜ್ಯಕ್ಕೆ ಮೊದಲನೇ ರ‍್ಯಾಂಕ್ ಪಡೆದ ಹುಣಸೂರಿನ ಎಸ್ ಶ್ರೇಯಸ್

ಮಿಷನ್ “ವಿಕಸಿತ್ ಭಾರತ್ 2047”

ಉಡುಪಿ: ನೆರೆನೀರಿನಲ್ಲಿ ಬೈಕ್ ಚಲಾಯಿಸಿ ಯುವಕರ ಹುಚ್ಚಾಟ ; ವಿಡಿಯೋ ವೈರಲ್

ಉಡುಪಿ: ಯುವ ಪಡೆಯನ್ನು ಸಂಘಟಿಸಿ ಪಕ್ಷದ ಬಲವರ್ಧನೆ ಮಾಡಬೇಕಿದೆ; ಕುತ್ಯಾರು ನವೀನ್ ಶೆಟ್ಟಿ

ಉಡುಪಿ: ನಾನು ಪಕ್ಷದ ಹೆಸರಲ್ಲಿ ಯಾವುದೇ ಹಣ ವಸೂಲಿ ಮಾಡಿಲ್ಲ; ಕಿಶೋರ್ ಕುಮಾರ್ ಕುಂದಾಪುರ

error: Content is protected !!