ರಾಜ್ಯ ಸರ್ಕಾರದ ಅದಕ್ಷ ಆಡಳಿತ ಕ್ರಮದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 23ರಂದು, ಬಿಜೆಪಿ ಸಮಿತಿಯ ನೇತೃತ್ವದಲ್ಲಿ ಜನ ಸಾಮಾನ್ಯರು ಒಳಗೊಂಡ0ತೆ 223 ಗ್ರಾಮ ಪಂಚಾಯತ್ಗಳಲ್ಲಿ, 2ನಗರ ಸಭಾಗಳಲ್ಲಿ, 3 ಪುರಭವನಗಳಲ್ಲಿ, 8ನಗರ ಪಟ್ಟಣಗಳಲ್ಲಿ, 1 ಮಹಾ ನಗರದ ಪಾಲಿಕೆಯ ಮುಂಭಾಗದಲ್ಲಿ ಜನಾಂದೋಲನ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಸರ್ಕಾರದ ವಿರುದ್ದ ಕಳೆದ ವರ್ಷಗಳಿಂದಲೇ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಾ ಇದೆ. ಅಕ್ರಮ ಸಕ್ರಮ ಅರ್ಜಿಗಳ ತಿರಸ್ಕಾರ, ಆಶ್ರಯ ಮನೆಯ ಕನಸಿಗೆ ವಿಘ್ನ, ವಯಸ್ಕರ ಪಿಂಚಣಿ ವೇತನವನ್ನು ಸರಿಯಾದ ಸಮಯದಲ್ಲಿ ನೀಡದೇ ಇರುವುದು, ವಿದ್ಯುತ್ ಬೆಲೆ ಏರಿಕೆ, ಶೀಘ್ರ ಮಳೆ ಪರಿಹಾರಕ್ಕೆ ಆಗ್ರಹಿಸಿ ಈ ಜನ ಆಂದೋಲನವನ್ನು ನಡೆಸಲಾಗುವುದು ಎಂದಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ, ಶಾಂತಿ ಪ್ರಸಾದ್, ಸಂಜಯ್ ಪ್ರಭು ಉಪಸ್ಥಿತರಿದ್ರು.