ಬಿ.ಸಿ ರೋಡ್ – ಸುರತ್ಕಲ್ ಅಪಾಯಕಾರಿ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಗುಂಡಿಗಳಿಂದ ವಾಹನ ಸವಾರರ ಸಾವಿಗೆ ಹೆದ್ದಾರಿ ಪ್ರಾಧಿಕಾರವೇ ನೇರ ಹೊಣೆ. ಆದಷ್ಟು ಬೇಗ ಹೆದ್ದಾರಿ ದುರಸ್ತಿಗೊಳಿಸಬೇಕು ಇಲ್ಲವಾದರೆ ಡಿವೈಎಫ್ಐ ಸಂಘಟನೆಯ ವತಿಯಿಂದ ರಸ್ತೆ ತಡೆ ನಡೆಸಿ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ಼್ ಎಚ್ಚರಿಸಿದ್ದಾರೆ.

ಸುರತ್ಕಲ್ನಿಂದ ಬಿಸಿ ರೋಡ್ನಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚಬೇಕು, ಕುಳೂರು ಸೇತುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಬೇಜವಾಬ್ದಾರಿಯುತ ಅಧಿಕಾರಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ಟೈಟಸ್ ಫೆರಾರಾವ್ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿಯಿಂದ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ಬೇಜವಾಬ್ದಾರಿ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ, ಅಧ್ಯಕ್ಷರಾದ ಜಗದೀಶ್ ಬಜಾಲ್, ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ಶ್ರೀನಾಥ್ ಕುಲಾಲ್, ತಯ್ಯೂಬ್ ಬೆಂಗರೆ, ಆಶಾ ಬೈಕಂಪಾಡಿ, ಪ್ರಮಿಳಾ ಶಕ್ತಿನಗರ, ಜೋಕಟ್ಟೆ ಗ್ರಾಮಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವಾ, ಇಕ್ಬಾಲ್ ಜೋಕಟ್ಟೆ, ಸೆಲ್ವಿಯಾ ಜೋಕಟ್ಟೆ, ಡಿವೈಎಫ್ಐ ಸುರತ್ಕಲ್ ಮುಖಂಡ ಮಕ್ಸೂದ್, ರಿಹಾಬ್ , ಬಿ.ಎಮ್ ಅಬುಸಾಲಿ, ರಿಯಾಜ್ ಎಲ್ಯಾರ್ ಪದವು, ಆಸೀಫ್ ಉರುಮನೆ, ಮುಸ್ತಫಾ ಬೈಕಂಪಾಡಿ ಮುಂತಾದವರು ಪಾಲ್ಗೊಂಡರು.



