ಜನ ಮನದ ನಾಡಿ ಮಿಡಿತ

Advertisement

ಕೊಪ್ಪಳ: 3ನೇ ಪತ್ನಿಯ ಉಸಿರು ನಿಲ್ಲಿಸಿದ್ದ ಕಿರಾತಕ ಗಂಡ…. 23 ವರ್ಷದಿಂದ ನಾಪತ್ತೆಯಾಗಿದ್ದ ಪಾಪಿ ಈಗ ಅರೆಸ್ಟ್

ಮೂರನೇ ಹೆಂಡತಿಯ ಜೀವ ತೆಗೆದು ನಾಪತ್ತೆ ಆಗಿದ್ದ ವ್ಯಕ್ತಿಯನ್ನು ಪೊಲೀಸರು ಕೊನೆಗೂ 23 ವರ್ಷಗಳ ಬಳಿಕ ಅರೆಸ್ಟ್ ಮಾಡಿದ್ದಾರೆ.

ಹಾಲದಾಳ ಗ್ರಾಮದ ಆರೋಪಿ ಹನುಮಂತಪ್ಪ ನನ್ನ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಯು ತನ್ನ 3ನೇ ಹೆಂಡತಿ ರೇಣುಕಮ್ಮಳನ್ನ ಸುಳ್ಳು ಹೇಳಿ ಮದುವೆ ಆಗಿದ್ದನು. ನನಗೆ ಸರ್ಕಾರಿ ಕೆಲಸ ಇದೆ ಎಂದು ಹೆಂಡತಿಯ ಮನೆಯವರನ್ನು ನಂಬಿಸಿ ಮದುವೆಯಾಗಿದ್ದನು.

ಮದುವೆಯಾದ ಮೇಲೆ 2002ರಲ್ಲಿ ಹೆಂಡತಿಯನ್ನ ಯಾರಿಗೂ ಗೊತ್ತಾಗದ ಹಾಗೇ ಕೊಲೆ ಮಾಡಿ ಬಳಿಕ ಗೋಣಿಚೀಲದಲ್ಲಿ ಮೃತದೇಹ ಹಾಕಿ ಕಂಪ್ಲಿಗೆ ಹೋಗುತ್ತಿದ್ದ ಬಸ್‌ವೊಂದಕ್ಕೆ ಹಾಕಿದ್ದನು. ಇದಾದ ಮೇಲೆ ಆರೋಪಿಯು ಕೂಡ ನಾಪತ್ತೆ ಆಗಿದ್ದನು. ಇತ್ತೀಚೆಗೆ ಸ್ವಗ್ರಾಮ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮಕ್ಕೆ ಹನುಮಂತಪ್ಪ ಬಂದಿದ್ದನು. ಕೊಪ್ಪಳದ ಗಂಗಾವತಿ ಠಾಣೆಯ ಪೊಲೀಸರು 23 ವರ್ಷದ ಬಳಿಕ ಹನುಮಂತಪ್ಪನನ್ನ ಅರೆಸ್ಟ್ ಮಾಡಿದ್ದಾರೆ. ಅತ್ತ ಮಗಳನ್ನು ಕಳೆದುಕೊಂಡ ಪೋಷಕರು ಈಗಲೂ ಕಣ್ಣೀರು ಹಾಕುತ್ತಿದ್ದಾರೆ. ಈ ಹಿಂದೆ ಗಂಗಾವತಿ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!