ಇನ್ನು ಆರು ದಿನಗಳಲ್ಲಿ ಜಪಾನಿನಲ್ಲಿ ಭಾರೀ ಸುನಾಮಿ ಸಂಭವಿಸುತ್ತದೆ ಎಂಬ ಭಯ, ಜಪಾನಿಗೆ ಪ್ರವಾಸಕ್ಕೆ ತೆರಳುವವರು ತಮ್ಮ ಪ್ರವಾಸ ರದ್ದು ಮಾಡುವಂತಹ ಸ್ಥಿತಿ ತಂದಿದೆ.
ಜುಲೈ 5 ರಂದು ಸುನಾಮಿ ಜಪಾನಿಗೆ ಅಪ್ಪಳಿಸುತ್ತದೆಂದು ಬಲ್ಗೇರಿಯನ್ ಭವಿಷ್ಯ ತಜ್ಞರಾದ ಬಾಬಾ ವಂಗ ಹೇಳಿದ್ದಾರೆ ಎನ್ನಲಾದ ಭವಿಷ್ಯ ಈ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಅಲ್ಲಿಯ ಪ್ರವಾಸೋದ್ಯಮ ಕುಸಿದಿದೆ. ಜಪಾನಿನ ಸಮುದ್ರದಲ್ಲಿ ಭೂಕಂಪ ಸಂಭವಿಸುತ್ತದೆ, ಜ್ವಾಲಾಮುಖಿ ಭುಗಿಲೆದ್ದು ಲಾವಾರಸ ಕಾರುತ್ತದೆ, ಸುನಾಮಿ ಅಪ್ಪಳಿಸುತ್ತದೆ ಎಂಬೆಲ್ಲ ವದಂತಿಗಳು ಹರಿದಾಡತೊಡಗಿವೆ. 2011ರಲ್ಲಿ ಸಂಭವಿಸಿದ ಭೂಕಂಪಕ್ಕಿಂತ ಪ್ರಬಲ ಭೂಕಂಪ ಈ ವರ್ಷ ಸಂಭವಿಸಲಿದ್ದು, ಜಪಾನ್ ಮತ್ತು ಫಿಲಿಪೈನ್ಸ್ ನಡುವೆ ಸಾಗರದಲ್ಲಿ ದೊಡ್ಡ ಬಿರುಕು ಉಂಟಾಗಲಿದೆಯಂತೆ. ಬಲ್ಗೇರಿಯಾ ಮೂಲದ ಭವಿಷ್ಯಕಾರ್ತಿಯಾದ ಬಾಬಾ ವಂಗಾ ಅವರು 1911 ರಿಂದ 1996ರವರೆಗೆ ಬದುಕಿದ್ರು. ತಮ್ಮ ಜೀವಿತಾವಧಿಯಲ್ಲಿ ಅವರು ನುಡಿದ ಅನೇಕ ಭವಿಷ್ಯಗಳು ನಿಜವಾಗಿವೆ. ಕೊಲ್ಲಿ ಯುದ್ದದ ಬಗ್ಗೆ ಅವರು ಮೊದಲೇ ಭವಿಷ್ಯ ನುಡಿದಿದ್ದಾರೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ರೋಗದ ಬಗ್ಗೆಯೂ ಅವರ ಭವಿಷ್ಯವಾಣಿಯಲ್ಲಿ ಸೂಚನೆಗಳಿದ್ದವು ಎನ್ನಲಾಗುತ್ತಿದೆ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ್ಯರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ನಲ್ಲಿ ಖಾಸಗಿ ಬಸ್ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…