ಇನ್ನು ಆರು ದಿನಗಳಲ್ಲಿ ಜಪಾನಿನಲ್ಲಿ ಭಾರೀ ಸುನಾಮಿ ಸಂಭವಿಸುತ್ತದೆ ಎಂಬ ಭಯ, ಜಪಾನಿಗೆ ಪ್ರವಾಸಕ್ಕೆ ತೆರಳುವವರು ತಮ್ಮ ಪ್ರವಾಸ ರದ್ದು ಮಾಡುವಂತಹ ಸ್ಥಿತಿ ತಂದಿದೆ.
ಜುಲೈ 5 ರಂದು ಸುನಾಮಿ ಜಪಾನಿಗೆ ಅಪ್ಪಳಿಸುತ್ತದೆಂದು ಬಲ್ಗೇರಿಯನ್ ಭವಿಷ್ಯ ತಜ್ಞರಾದ ಬಾಬಾ ವಂಗ ಹೇಳಿದ್ದಾರೆ ಎನ್ನಲಾದ ಭವಿಷ್ಯ ಈ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಅಲ್ಲಿಯ ಪ್ರವಾಸೋದ್ಯಮ ಕುಸಿದಿದೆ. ಜಪಾನಿನ ಸಮುದ್ರದಲ್ಲಿ ಭೂಕಂಪ ಸಂಭವಿಸುತ್ತದೆ, ಜ್ವಾಲಾಮುಖಿ ಭುಗಿಲೆದ್ದು ಲಾವಾರಸ ಕಾರುತ್ತದೆ, ಸುನಾಮಿ ಅಪ್ಪಳಿಸುತ್ತದೆ ಎಂಬೆಲ್ಲ ವದಂತಿಗಳು ಹರಿದಾಡತೊಡಗಿವೆ. 2011ರಲ್ಲಿ ಸಂಭವಿಸಿದ ಭೂಕಂಪಕ್ಕಿಂತ ಪ್ರಬಲ ಭೂಕಂಪ ಈ ವರ್ಷ ಸಂಭವಿಸಲಿದ್ದು, ಜಪಾನ್ ಮತ್ತು ಫಿಲಿಪೈನ್ಸ್ ನಡುವೆ ಸಾಗರದಲ್ಲಿ ದೊಡ್ಡ ಬಿರುಕು ಉಂಟಾಗಲಿದೆಯಂತೆ. ಬಲ್ಗೇರಿಯಾ ಮೂಲದ ಭವಿಷ್ಯಕಾರ್ತಿಯಾದ ಬಾಬಾ ವಂಗಾ ಅವರು 1911 ರಿಂದ 1996ರವರೆಗೆ ಬದುಕಿದ್ರು. ತಮ್ಮ ಜೀವಿತಾವಧಿಯಲ್ಲಿ ಅವರು ನುಡಿದ ಅನೇಕ ಭವಿಷ್ಯಗಳು ನಿಜವಾಗಿವೆ. ಕೊಲ್ಲಿ ಯುದ್ದದ ಬಗ್ಗೆ ಅವರು ಮೊದಲೇ ಭವಿಷ್ಯ ನುಡಿದಿದ್ದಾರೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ರೋಗದ ಬಗ್ಗೆಯೂ ಅವರ ಭವಿಷ್ಯವಾಣಿಯಲ್ಲಿ ಸೂಚನೆಗಳಿದ್ದವು ಎನ್ನಲಾಗುತ್ತಿದೆ.
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…
ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…
ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…
ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…
ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…