ಇನ್ನು ಆರು ದಿನಗಳಲ್ಲಿ ಜಪಾನಿನಲ್ಲಿ ಭಾರೀ ಸುನಾಮಿ ಸಂಭವಿಸುತ್ತದೆ ಎಂಬ ಭಯ, ಜಪಾನಿಗೆ ಪ್ರವಾಸಕ್ಕೆ ತೆರಳುವವರು ತಮ್ಮ ಪ್ರವಾಸ ರದ್ದು ಮಾಡುವಂತಹ ಸ್ಥಿತಿ ತಂದಿದೆ.
ಜುಲೈ 5 ರಂದು ಸುನಾಮಿ ಜಪಾನಿಗೆ ಅಪ್ಪಳಿಸುತ್ತದೆಂದು ಬಲ್ಗೇರಿಯನ್ ಭವಿಷ್ಯ ತಜ್ಞರಾದ ಬಾಬಾ ವಂಗ ಹೇಳಿದ್ದಾರೆ ಎನ್ನಲಾದ ಭವಿಷ್ಯ ಈ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಅಲ್ಲಿಯ ಪ್ರವಾಸೋದ್ಯಮ ಕುಸಿದಿದೆ. ಜಪಾನಿನ ಸಮುದ್ರದಲ್ಲಿ ಭೂಕಂಪ ಸಂಭವಿಸುತ್ತದೆ, ಜ್ವಾಲಾಮುಖಿ ಭುಗಿಲೆದ್ದು ಲಾವಾರಸ ಕಾರುತ್ತದೆ, ಸುನಾಮಿ ಅಪ್ಪಳಿಸುತ್ತದೆ ಎಂಬೆಲ್ಲ ವದಂತಿಗಳು ಹರಿದಾಡತೊಡಗಿವೆ. 2011ರಲ್ಲಿ ಸಂಭವಿಸಿದ ಭೂಕಂಪಕ್ಕಿಂತ ಪ್ರಬಲ ಭೂಕಂಪ ಈ ವರ್ಷ ಸಂಭವಿಸಲಿದ್ದು, ಜಪಾನ್ ಮತ್ತು ಫಿಲಿಪೈನ್ಸ್ ನಡುವೆ ಸಾಗರದಲ್ಲಿ ದೊಡ್ಡ ಬಿರುಕು ಉಂಟಾಗಲಿದೆಯಂತೆ. ಬಲ್ಗೇರಿಯಾ ಮೂಲದ ಭವಿಷ್ಯಕಾರ್ತಿಯಾದ ಬಾಬಾ ವಂಗಾ ಅವರು 1911 ರಿಂದ 1996ರವರೆಗೆ ಬದುಕಿದ್ರು. ತಮ್ಮ ಜೀವಿತಾವಧಿಯಲ್ಲಿ ಅವರು ನುಡಿದ ಅನೇಕ ಭವಿಷ್ಯಗಳು ನಿಜವಾಗಿವೆ. ಕೊಲ್ಲಿ ಯುದ್ದದ ಬಗ್ಗೆ ಅವರು ಮೊದಲೇ ಭವಿಷ್ಯ ನುಡಿದಿದ್ದಾರೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ರೋಗದ ಬಗ್ಗೆಯೂ ಅವರ ಭವಿಷ್ಯವಾಣಿಯಲ್ಲಿ ಸೂಚನೆಗಳಿದ್ದವು ಎನ್ನಲಾಗುತ್ತಿದೆ.
ಸಂಚರಿಸುತ್ತಿದ್ದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿ ಬೆಂಕಿಗಾಹುತಿಯಾದ ಘಟನೆ ಮೆಲ್ಕಾರಿನಲ್ಲಿ ನಡೆದಿದೆ. ಬೆಂಗಳೂರು ಮೂಲದ ಲಾರಿ ಇದಾಗಿದ್ದು, ಮಂಗಳೂರು…
ಬಾವಿಯೊಂದರ ಹೂಳೆತ್ತುವ ಕೆಲಸ ಮುಗಿಸಿ ಮೇಲೆ ಬರುವ ವೇಳೆ ಹಗ್ಗ ಜಾರಿ ಬಿದ್ದು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳದ…
ಕಡೇಶಿವಾಲಯ ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದು ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾೈಕ್ ಉಳಿಪಾಡಿಯವರು…
ಬಂಟ್ವಾಳ: ಸಿಡಿಲು ಬಡಿದು ಹಾನಿಗೊಳಗಾದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು ಅವರು ರಾತ್ರಿ…
ಬೆಂಗಳೂರಿನ ಖ್ಯಾತ ಚಲನಚಿತ್ರ ನಟಿಯಾಗಿರುವ ಬಿಂದ್ಯರಾಮ್ (ರಚಿತರಾಮ್) ಅವರು ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ್ದಾರೆ. ಬೆಂಜನಪದವಿನ…
ದಕ್ಷಿಣ ಕನ್ನಡ ಜಿಲ್ಲೆಯ ನಿನ್ನೆ ಸುರಿದ ಧಾರಾಕಾರ ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ಹಲವು ಭಾಗಗಳಲ್ಲಿ ಸಿಡಿಲು ಬಡಿದು ಅಪಾರ…