ದ.ಕ.ಜಿಲ್ಲೆಯಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಾ ಬರುವ ಕಾಲಘಟ್ಟದಲ್ಲಿ ಯುವಕರ ತಂಡವೊಂದು ಸಮಾಜ ಸೇವೆಯ ಉದ್ದೇಶದಿಂದ ಭತ್ತದ ನಾಟಿಯನ್ನು ಮಾಡಿ ಗ್ರಾಮದಲ್ಲಿ ಗಮನ ಸೆಳೆದಿದ್ದಾರೆ.
“ರಥಬೀದಿ ಜವನೆರ್” ಎಂಬ ಹೆಸರಿನ ಸುಮಾರು 15 ಮಂದಿ ಸದಸ್ಯರು ಮಣಿನಾಲ್ಕೂರು ಗ್ರಾಮದ ಕೊಲ್ಯ ಎಂಬಲ್ಲಿ ಸುಶೀಲಮ್ಮ ಎಂಬವರ ಗದ್ದೆಯಲ್ಲಿ ಭತ್ತದ ನಾಟಿ ಮಾಡಿದ್ದಾರೆ. ಸುಮಾರು ಒಂದು ಎಕರೆ ಗದ್ದೆಯಲ್ಲಿ ಶ್ರಮದಾನದ ಮೂಲಕ ಭತ್ತ ನಾಟಿ ಮಾಡಿ ಸೈ ಎನಿಸಿದ್ದಾರೆ. ಭತ್ತದ ಕೃಷಿಯ ಬಗ್ಗೆ ಅಷ್ಟೊಂದು ಅರಿವಿಲ್ಲದ ಈ ತಂಡ ಹಿರಿಯರ ಸಲಹೆ ಪಡೆದು ಯಾಂತ್ರಿಕ ಉಳುಮೆ ಮಾಡಿದ ಬಳಿಕ ಸ್ವತಃ ಯುವಕರೇ ನೇಜಿ ನೆಟ್ಟಿದ್ದಾರೆ.
ಗದ್ದೆಯಲ್ಲಿ ಬೆಳೆದ ಬೈ ಹುಲ್ಲು ಸ್ಥಳೀಯ ಗೋ ಶಾಲೆಗೆ ಹಾಗೂ ಬೆಳೆದ ಅಕ್ಕಿಯನ್ನು ಸ್ಥಳೀಯ ಅನಾಥಶ್ರಮಕ್ಕೆ ನೀಡುವ ಉದ್ದೇಶದಿಂದ ಗದ್ದೆಯಲ್ಲಿ ಬೇಸಾಯ ಮಾಡಿದ್ದೇವೆ ಎಂದು ಹೇಳುವ ತಂಡ ಯಾವುದೇ ಪ್ರಚಾರದ ಹುಚ್ಚು ಅವರಿಗಿಲ್ಲ. ಗ್ರಾಮೀಣ ಭಾಗದಲ್ಲಿ ಕೃಷಿ ಉಳಿಯಬೇಕು ಮತ್ತು ಅದರ ಜೊತೆಗೆ ಸಾಮಾಜಿಕ ಕಾರ್ಯವಾಗಬೇಕು ಎಂಬುದೇ ನಮ್ಮ ಧ್ಯೇಯವಾಗಿದೆ ಎಂದು ಹೇಳುವ ತಂಡ ಗ್ರಾಮದಲ್ಲಿ ಮಾದರಿ ಕಾರ್ಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…