ಕಿನ್ನಿಗೋಳಿ : ಕಲೆ, ಸಂಸ್ಕೃತಿ ಪೋಷಣೆಯ ಜೊತೆ ಸಮಾಜವನ್ನು ಒಗ್ಗೂಡಿಸುವ ಸಾಮಾಜಿಕ ಕಳಕಳಿಯ ಕಾರ್ಯ ಶ್ಲಾಘನೀಯ ಎಂದು ಕ್ಯಾಂಪ್ಕೋ ಲಿ. ಮಂಗಳೂರು ಅಧ್ಯಕ್ಷರಾದ ಕಿಶೋರ್ ಕುಮಾರ್ ಕೋಡ್ಗಿ ಹೇಳಿದರು. ಅವರು ಯುಗಪುರುಷ ಸಂಸ್ಥಾಪಕ ದಿ. ಕೋ ಅ ಉಡುಪ ಸಂಸ್ಮರಣ ಸಮಾರಂಭವು ಯುಗಪುರುಷ ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಯುಗಪುರುಷ ಸಂಸ್ಥೆ ಸ್ಥಳೀಯವಾಗಿ ಕಲೆಗೆ ಪ್ರೋತ್ಸಾಹವನ್ನು ನೀಡುವ ಜೊತೆ ಕಲಾವಿದನ ಕಲೆಗೆ ಗೌರವ ನೀಡಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಬಾಲಕೃಷ್ಣ ಉಡುಪ ಅವರ ಸ್ಪೂರ್ತಿ ಕವನ ಸಂಕಲನ ವನ್ನು ಹಾಗೂ ದೇವೇಂದ್ರ ಅಮೀನ್ ಮುಲ್ಲಕಾಡು ಅವರ ಮಾಯದ ಮಾಣಿಕ್ಯ ಪುಸ್ತಕದ ಮರು ಮುದ್ರಣದ ಬಿಡುಗಡೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾದ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ನೆರವೇರಿಸಿ ಮಾತನಾಡಿ ಸಮಾಜಕ್ಕೆ ಮಾಡುವ ನಿಸ್ವಾರ್ಥ ಸೇವೆಯ ಸಾರ್ಥಕ್ಯ ಯುಗಪುರುಷ ದ ಸಾರ್ಥಕ್ಯ ಎಂದರು.
ಈ ಸಂಧರ್ಭ ಕಟೀಲು ದೇವಲ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಆಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ತಾಳಿಪಾಡಿ ಗುತ್ತು ರಾಮಚಂದ್ರ ಶೆಟ್ಟಿ ಆಡಳಿತ ವ್ಯವಸ್ಥಾಪಕರು ವಿಜಯ ರೆಪ್ರಿಜರೇಶನ್ ಮುಂಬೈ, ರುಡಾಲ್ಪ್ ಜೋಯರ್ ನೊರೋನ್ಹ ಜನರಲ್ ಮೆನೇಜರ್ ಕಾರ್ಪೂರೇಟ್ ಕಮ್ಯುನಿಕೇಷನ್ ಎಂ ಆರ್ ಪಿ ಎಲ್, ಶ್ರೀ ಮತೀ ವಾಣಿ ಬಿ ಆಚಾರ್ಯ, ಡಾ. ನಯನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಕೋ ಆ ಉಡುಪ ಪ್ರಶಸ್ತಿ ಯನ್ನು ತುಳು-ಕನ್ನಡ ಸಾಹಿತಿ, ಯಕ್ಷಗಾನ ಅರ್ಥದಾರಿ, ಪತ್ರಕರ್ತರಾದ ಕದ್ರಿ ನವನೀತ ಶೆಟ್ಟಿ ಪ್ರಧಾನಿಸಲಾಯಿತು. ಕಮಲಾಕ್ಷಿ ಉಡುಪ ಸ್ಮರಣಾರ್ಥ ಅರ್ಚಕ ಸನ್ಮಾನ ವನ್ನು ರಾಘವೇಂದ್ರ ಉಡುಪ ಕಲ್ಲಾಜೆ ನೀಡಲಾಯಿತು. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಸ್ಥಳೀಯ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಲಾಯಿತು. ಯುಗಪುರುಷ ದ ಭುವನಾಭಿರಾಮ ಉಡುಪ ಸ್ವಾಗತಿಸಿ, ಶರತ್ ಶೆಟ್ಟಿ ಸಂಕಲಕರಿಯ ನಿರೂಪಿಸಿ, ಅನುಷಾ ನವೀನ್ ವಂದಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿನಾಯಕ ಯಕ್ಷ ಕಲಾ ತಂಡ (ರಿ.) ಕೆರೆಕಾಡು ಇವರಿಂದ “ಅತಿಕಾಯ-ಇಂದ್ರಜಿತು” ಯಕ್ಷಗಾನ ಬಯಲಾಟ ನಡೆಯಿತು.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…