ಜನ ಮನದ ನಾಡಿ ಮಿಡಿತ

Advertisement

ಕಾಸರಗೋಡು: ಪತನದ ಭೀತಿಯಲ್ಲಿ ಇಕ್ಕೇರಿ ನಾಯಕರ ಕುಂಬ್ಳೆ ಕೋಟೆ

ತುಳುನಾಡಿನ ಇತಿಹಾಸದ ಭವ್ಯತೆಯನ್ನು ಸಾರುವ ದೇವಾಲಯಗಳು, ಕೋಟೆಗಳನ್ನ ಕೆಲ ಪ್ರದೇಶಗಳಲ್ಲಿ ಇನ್ನು ನೋಡಬಹುದಾಗಿದೆ.

ಕುಂಬಳೆ ಅರಸರ ಕೇಂದ್ರವಾಗಿದ್ದ ಕಣ್ವಪುರ ಸನಿಹದಲ್ಲೇ ಕೆಳದಿ ನಾಯಕರ ಕುಂಬ್ಳೆ ಕೋಟೆ ಇಂದಿಗೂ ಇದೆ. ಈ ಕೋಟೆಯನ್ನು 1608 ರ ಸುಮಾರಿಗೆ ಇಕ್ಕೇರಿ ದೊರೆ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿದ್ದಾರೆ ಎಂದು ಇತಿಹಾಸ ಹೇಳತ್ತೆ. ಇತಿಹಾಸದಲ್ಲಿ ಬಾಳಿದ ಕೋಟೆ ಇಂದು ವಿನಾಶದ ಅಂಚಿಕೆ ಹೋಗ್ತಾ ಇದೆ. ಮಳೆಗಾಲದ ಸಮಯದಲ್ಲಿ ಕೋಟೆಯ ಕಲ್ಲುಗಳು ಅದರ ಸುತ್ತ ಮುತ್ತ ಹಸಿರಿನ ಭವ್ಯತೆಯಲ್ಲಿ ಮರೆಯಾಗುವ ಜೊತೆಯಲ್ಲಿ ಇತಿಹಾಸದಿಂದಲೂ ಮರೆಯಾಗುವ ಭೀತಿಯಲ್ಲಿ ಇದೆ. ಸರಿಯಾದ ನಿರ್ವಹಣೆ ಇಲ್ಲದೆ ಇತಿಹಾಸ ಕೋಟೆ ಅಸಹಾಯಕವಾಗಿ ನಿಂತಿದೆ.

ಸುತ್ತಲು ಹರಡಿದ ಹಸಿರ ಕಾಡು ಪೊದೆ ಕಣ್ಣಿಗೆ ಸುಂದರಾವಾಗಿ ಕಂಡರೂ ಅದು ಕೋಟೆಯ ಸುತ್ತುವರೆದಾಗ ಇತಿಹಾಸದ ಪತನವೇ ಸರಿ. ಪ್ರಮುಖ ಯಾತ್ರಾ ಸ್ಥಳವನ್ನಾಗಿ ಮಾರ್ಪಾಡು ಮಾಡಬಹುದಾದ ಸ್ಥಳ, ಸನಿಹವೇ ಇರುವ ರಾಷ್ಟ್ರೀಯ ಹೆದ್ದಾರಿ, ದೇವಾಲಯಗಳು ಈ ಕೋಟೆಯನ್ನು ದೊಡ್ಡ ಪ್ರವಾಸಿ ಕೇಂದ್ರವನ್ನಾಗಿ ಮಾಡಬಹುದು. ಆದರೆ ಈ ಬಗ್ಗೆ ಸರಕಾರ ಮುತುವರ್ಜಿ ವಹಿಸದೆ ಅದು ಹಾಗೆ ಉಳಿದಿರುವುದು ಬೇಸರದ ಸಂಗತಿ. ಕುಂಬ್ಳೆ ಕೋಟೆ ಇತ್ತೀಚಿಗೆ ಅವ್ಯಹಾರಗಳ ತಾಣವಾಗಿದೆ. ಈ ತಾಣ ಧೂಮಪಾನ ಮಧ್ಯಪಾನ ವ್ಯಸನಿಗಳ ಮಿನಿ ಬಾರ್ ಆಗಿ ಕೂಡ ಮಾರ್ಪಟ್ಟಿರುವುದು ದುರಂತ. ಸ್ಥಳೀಯ ಅಧಿಕಾರಿಗಳು, ಕೇರಳ ಪುರಾತತ್ವ ಇಲಾಖೆ ಈ ಬಗ್ಗೆ ಗಮನ ಹರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಕಾಸರಗೋಡು ಜಿಲ್ಲೆಯಲ್ಲಿ ಬೇಕಲ ಕೋಟೆ ಒಂದು ಬಿಟ್ಟು ಮತ್ತೆಲ್ಲಾ ಕೋಟೆಯ ವ್ಯಥೆ ಇದುವೇ ಆಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!